ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಮೊದಲ ವಿಮರ್ಶೆ ಮಾಡಿದ ನಟ ರಮೇಶ್ ಅರವಿಂದ್

Public TV
1 Min Read
FotoJet 29

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನಿ ಪ್ರಿಯರ ನಿರೀಕ್ಷೆ ಹೆಚ್ಚು ಮಾಡಿದೆ. ಈ ಸಿನಿಮಾ ಹೇಗಿರಬಹುದು? ಸುದೀಪ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿರಬಹುದು? ಇದು ಯಾವ ರೀತಿಯ ಸಿನಿಮಾ? ಹೀಗೆ ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕೆಲವು ಉತ್ತರಗಳನ್ನು ನೀಡಿದ್ದಾರೆ ನಟ ರಮೇಶ್ ಅರವಿಂದ್.

vikarnath sudeep 1

ವಾರದ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ವೀಕ್ಷಿಸಿರುವ ರಮೇಶ್ ಅರವಿಂದ್, ಆ ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ನೋಡಿದ ಮೊದಲ ಕನ್ನಡದ ಸೆಲಿಬ್ರಿಟಿ ಕೂಡ ಇವರಾಗಿದ್ದಾರೆ. ಹಾಗಾಗಿ ಸೆಲಿಬ್ರಿಟಿಯೊಬ್ಬರು ಮೊದಲ ಬಾರಿಗೆ ನೀಡಿದ ವಿಮರ್ಶೆ ಕೂಡ ಇದಾಗಿದೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

sudeep 3

ನಿನ್ನ ಬೆಂಗಳೂರಿನ ವೀರಲೋಕ ಬುಕ್ಸ್ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಮತ್ತು ರಮೇಶ್ ಅರವಿಂದ್ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಅರವಿಂದ್, ‘ನಟನೊಬ್ಬ ಸಿನಿಮಾ ರಿಲೀಸ್‌ಗೂ ಮುನ್ನ ತಮ್ಮ ಸಿನಿಮಾ ತೋರಿಸುವುದಕ್ಕೆ ಧೈರ್ಯಬೇಕು. ಅಂತಹ ಧೈರ್ಯವಂತ ಸುದೀಪ್, ತಮ್ಮ ಮನೆಗೆ ಕರೆಯಿಸಿಕೊಂಡು ವಿಕ್ರಾಂತ್ ರೋಣ ಸಿನಿಮಾ ತೋರಿಸಿದರು. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಫ್ಯಾಂಟಸಿ ಜಗತ್ತನ್ನೇ ಅವರು ಕ್ರಿಯೇಟ್ ಮಾಡಿದ್ದಾರೆ. ಅಲ್ಲದೇ, ಇದೊಂದು ಕುತೂಹಲ ಮೂಡಿಸುವಂತಹ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾ ಎಂದು ಹಾಡಿಹೊಗಳಿದರು.

vikarnath sudeep

ಭಾರತೀಯ ಸಿನಿಮಾ ರಂಗದಲ್ಲಿ ವಿಕ್ರಾಂತ್ ರೋಣ ಸಿನಿಮಾ ಮತ್ತೊಂದು ದಾಖಲೆ ಮಾಡುವಂತಹ ಚಿತ್ರವಾಗಲಿದೆ. ಒಂದೊಳ್ಳೆ ಸಿನಿಮಾವನ್ನು ನೋಡಿದ ಖುಷಿ ನನ್ನಲ್ಲಿ ಉಳಿಸಿದೆ. ಅಂತಹ ಅದ್ಧೂರಿ ಚಿತ್ರ ಮಾಡಿದ್ದಾರೆ ಸುದೀಪ್ ಅಂದರು. ಅಂದಹಾಗೆ ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದು, ಜಾಕ್ ಮಂಜು ಅವರು ನಿರ್ಮಾಪಕರು.

Share This Article
Leave a Comment

Leave a Reply

Your email address will not be published. Required fields are marked *