ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

Public TV
1 Min Read
ANJU SUICIDE

ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯ ಸುಬ್ರಹ್ಮನಗರದಲ್ಲಿ ನಡೆದಿದೆ.

SUICIDE 2

ಅಂಜು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಬೋಳನಹಳ್ಳಿ ನಿವಾಸಿಯಾಗಿರುವ ಈಕೆ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಅಂಜು ಅಂಜನ್ ಕಣಿಯಾರ್ (28) ನನ್ನು ಪ್ರೀತಿಸಿ 4 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿರೋದಾಗಿ ಅಂಜು ಪತಿ ಮನೆಯವರು ತಿಳಿಸಿದ್ದಾರೆ.

SUICIDE 3

ಇತ್ತ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು. ತನಗೆ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಜು 15 ದಿನಗಳ ಹಿಂದೆ ಹೇಳಿದ್ದಳು. ಹೀಗಾಗಿ ಇದು ಅತ್ಮಹತ್ಯೆಯಲ್ಲ ಕೊಲೆ ಎಂದು ಅಂಜು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

SUICIDE 2

ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ಅವರಿಬ್ಬರು ಲವ್ ಮಾಡಿ ಮದುವೆ ಆಗಿದ್ದರು. ಮನೆಯಲ್ಲಿ ಅವರ ಅತ್ತೆ, ಗಂಡ ಕಿರುಕುಳ ನೀಡುತ್ತಿದ್ದರು. ಹಿಂದೆ ನಮ್ಮ ಮಗಳು ಕೂಡ ಈ ಬಗ್ಗೆ ನಮಗೆ ಹೇಳಿದ್ದಳು. ಮೊನ್ನೆ ರಾತ್ರಿ ಕಾಲ್ ಮಾಡಿ ಚೆನ್ನಾಗಿ ಇದ್ದೇನೆ ಅಂತಾ ಹೇಳಿದ್ದಳು. ನಿನ್ನೆ ಕಾಲ್ ಮಾಡಿದ್ರೆ ರಿಸೀವ್ ಮಾಡಲಿಲ್ಲ. ರಾತ್ರಿ 7 ಗಂಟೆಗೆ ಕಾಲ್ ಮಾಡಿ ಅಂಜು ನೇಣು ಹಾಕಿಕೊಂಡಿದ್ದಾಳೆ ಅಂತಾ ಹೇಳಿದ್ರು. ನನ್ನ ಮಗಳು ನೇಣು ಹಾಕಿಕೊಂಡಿಲ್ಲ. ಕಿರುಕುಳ ನೀಡಿ ಸಾಯಿಸಿದ್ದಾರೆ ಎಂದು ಅಂಜು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಸ್ಥಳಕ್ಕೆ ಸುಬ್ರಹ್ಮಣ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *