Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

Bengaluru City

ರೇಪ್ ಮಾಡಿ ನನ್ನ ಸ್ನೇಹಿತನ ಪತ್ನಿಯನ್ನೇ ತುಂಡು ತುಂಡು ಕತ್ತರಿಸಿ ರಸ್ತೆಗೆ ಎಸೆದಿದ್ರು

Public TV
Last updated: March 18, 2022 9:46 pm
Public TV
Share
3 Min Read
kashmir files 1
SHARE

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ಕಾಶ್ಮೀರದಿಂದ ದಕ್ಷಿಣಕ್ಕೆ ಮಹಾ ವಲಸೆ ಬಂದ ಕಾಶ್ಮೀರಿ ಪಂಡಿತರ ಕಥೆ ಹೇಳುತ್ತದೆ. ಸಿನಿಮಾದಲ್ಲಿರುವ ಕಥೆ ಪ್ರತಿಯೊಬ್ಬರ ರಕ್ತ ಕುದಿಯುವಂತೆ ಮಾಡುತ್ತದೆ. ಇದೀಗ ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆ ಹಾಗೂ ನೆನಪನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕಾಶ್ಮೀರದಿಂದ ವಲಸೆ ಬಂದಿದ್ದ ಮಹಿಳೆ ಬೆಲಾ ಝೂಷಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕೇವಲ ಡೆಮೋ ತೋರಿಸಿದೆ. ಕಾಶ್ಮೀರಿ ಪಂಡಿತರ ಮೇಲಾಗಿದ್ದ ದೌರ್ಜನ್ಯ ಊಹೆಗೂ ಮೀರಿದಷ್ಟು ಕ್ರೂರವಾಗಿತ್ತು ಎಂದು ವಿವರಿಸಿದರು.

The Kashmir Files

ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಓಡಿಸಲು ಭಯಾನಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದರು. ಅವಮಾನ, ಹಿಂಸೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆ, ಬೆದರಿಕೆ ಹೀಗೆ ಅಂದಿನ ದಿನಗಳು ಅತ್ಯಂತ ಕ್ರೂರವಾಗಿತ್ತು ಎಂದು ತಮ್ಮ ನೆನಪನ್ನು ತಿಳಿಸಿದರು. ಇದನ್ನೂ ಓದಿ: ಕಡಿಮೆ ಅಂತರದಲ್ಲಿ ಸೋಲು – ಬೂತ್‌ ಮಟ್ಟದಲ್ಲಿ ವಿಶ್ಲೇಷಣೆಗೆ ಮುಂದಾದ ಯುಪಿ ಬಿಜೆಪಿ

ನನ್ನ ಸ್ನೇಹಿತನ ಪತ್ನಿ ಗಿರಿಜಾ ಎಂಬ ಮಹಿಳೆಯ ನಿಜ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆಕೆಯ ಮೇಲೆ ಅತ್ಯಾಚಾರ ಮಾಡಿ, ಮರವನ್ನು ಕತ್ತರಿಸುವ ಯಂತ್ರದಲ್ಲಿ ಹಾಕಿ ದೇಹವನ್ನು ತುಂಡು ತುಂಡು ಮಾಡಿ ರಸ್ತೆಯಲ್ಲಿ ಎಸೆದಿರುವ ಘಟನೆ ನಿಜವಾಗಿಯೂ ನಡೆದಿದೆ ಎಂದು ಭಯಾನಕ ವಿಚಾರವನ್ನು ತಿಳಿಸಿದರು.

ಜನರು ಮಾತು ಎತ್ತಿದರೂ ಅವರನ್ನು ಶೂಟ್ ಮಾಡಿ ಕೊಲ್ಲಲಾಗುತ್ತಿತ್ತು. ಭಯೋತ್ಪಾದಕರ ಗುರಿ ಕಾಶ್ಮೀರಿ ಪಂಡಿತ ಕುಟುಂಬದ ಗಂಡಸರನ್ನು ಓಡಿಸುವುದೇ ಆಗಿತ್ತು. ಕುಟುಂಬದ ಆಧಾರವಾಗಿರುವ ಗಂಡಸರನ್ನು ಓಡಿಸಿ ಅಥವಾ ಕೊಲೆ ಮಾಡಿ ಮಹಿಳೆ, ಮಕ್ಕಳನ್ನು ಅನಾಥರನ್ನಾಗಿ ಮಾಡಿ ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದರು.

the kashmir files 2

ಮಹಿಳೆಯರಿಗೆ ಅತ್ಯಾಚಾರ ಮಾಡಿದ್ದಲ್ಲದೇ ಅದೆಷ್ಟೋ ಮಕ್ಕಳ ತಲೆಗೆ ಶೂಟ್ ಮಾಡಿ ಕೊಂದಿದ್ದಾರೆ. 70 ಸಾವಿರಕ್ಕೂ ಹೆಚ್ಚು ಜನರನ್ನು ರಾತ್ರೋರಾತ್ರಿ ಕಾಶ್ಮೀರದಿಂದ ಓಡಿಸಿದ್ದಾರೆ. ಅಲ್ಲಿ ಕಾಶ್ಮೀರಿ ಪಂಡಿತರು ಬದುಕಬೇಕೆಂದಿದ್ದರೆ ಮತಾಂತರವಾಗಬೇಕು ಎಂಬ ಆಯ್ಕೆ ನೀಡಿದ್ದರು. ಇದು ಬಿಟ್ಟು ಒಂದೋ ಸಾಯುವುದು ಇಲ್ಲವೇ ಕಾಶ್ಮೀರ ಬಿಟ್ಟು ಓಡಿಹೋಗುವುದು ಎಂಬ ಆಯ್ಕೆ ನೀಡಿದ್ದರು. ನಮ್ಮನ್ನು ಕಾಪಾಡಲು ಆ ಸಮಯದಲ್ಲಿ ಯಾರೂ ಇರಲಿಲ್ಲ. ಪೊಲೀಸರು, ಅಧಿಕಾರಿಗಳು ಎಲ್ಲರೂ ಕೈ ಚೆಲ್ಲಿ ಕೂತಿದ್ದರು. ಕೇವಲ ಭಯೋತ್ಪಾದಕರ ಅಟ್ಟಹಾಸ ಮಾತ್ರ ನಡಿಯುತ್ತಿತ್ತು. ಭಾರತೀಯ ನಾಯಿಗಳು ಕಾಶ್ಮೀರ ಬಿಟ್ಟು ತೊಲಗಿ ಎಂದು ಮಕ್ಕಳಿಗೂ ಹೇಳಿಕೊಡುತ್ತಿದ್ದರು. ಇದನ್ನೂ ಓದಿ: ಥಿಯೇಟರ್ ಮೇಲೆ ಬಾಂಬ್ ದಾಳಿ – 130 ಮಂದಿಯ ರಕ್ಷಣೆ

ಇದೀಗ ಕಾಶ್ಮೀರದಿಂದ ವಲಸೆ ಬಂದಿರುವ ಪಂಡಿತ ಕುಟುಂಬ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಇಡೀ ದೇಶದಲ್ಲಿ ಹರಡಿದ್ದಾರೆ. ಕರ್ನಾಟಕದಲ್ಲಿ ವಲಸೆ ಬಂದಿರುವ ಸುಮಾರು 500 ಕುಟುಂಬಗಳಿವೆ. ದೆಹಲಿಯಲ್ಲಿ ಸಾವಿರ ಕುಟುಂಬಗಳಿವೆ. ಜಮ್ಮುವಿನಲ್ಲಿ 2 ಸಾವಿರ ಕುಟುಂಬಗಳಿವೆ ಎಂದು ತಿಳಿಸಿದರು.

ನಮ್ಮ ಎಲ್ಲಾ ಧಾರ್ಮಿಕ ಆಚರಣೆಗಳು ಕಾಶ್ಮೀರದಲ್ಲೇ ನಡಿಯುತ್ತಿದ್ದವು. ಆದರೆ ನಾವು ಇಲ್ಲಿ ಬಂದ ಬಳಿಕ ಅದೆಲ್ಲವನ್ನೂ ಉಗ್ರರು ಸುಟ್ಟು ಸರ್ವನಾಶ ಮಾಡಿದ್ದಾರೆ. ನಮಗೆ ನಾವು ಹುಟ್ಟಿರುವ ಕಾಶ್ಮೀರಕ್ಕೆ ಹೋಗಲು ಇಂದಿಗೂ ಆಸೆ ಇದೆ. ಆದರೆ ಅಲ್ಲಿಯವರು ಎಲ್ಲಿ ನಮ್ಮನ್ನು ಸಾಯಿಸಿ ಬಿಡುತ್ತಾರೆ ಎನ್ನುವ ಭಯ ಇದೆ. ಸದ್ಯ ನನ್ನ ಕುಟುಂಬದಲ್ಲಿ ಹಿರಿಯರು ಹಾಗೂ ಹೆಚ್ಚಿನವರು ವಿದ್ಯಾವಂತರು ಇದ್ದರು. ಹೀಗಾಗಿ ನಾವು ಎಲ್ಲಿ ಬೇಕಾದರೂ ಹೋಗಿ ಬದುಕಲು ಸಾಧ್ಯವಾಯಿತು. ಇಲ್ಲವೆಂದರೆ ನಾವೂ ಅವರಂತೆ ಅಲ್ಲಿ ಸಾಯಬೇಕಿತ್ತು. ಇಲ್ಲವೇ ಬೇರೆಡೆಗೆ ವಲಸೆ ಹೋಗಿ ಭಿಕ್ಷೆ ಬೇಡಬೇಕಿತ್ತು ಎಂದರು.

ಅಲ್ಲಿಂದ ಮಹಾವಲಸೆ ಕೈಗೊಂಡಿದ್ದ ಅದೆಷ್ಟೋ ಜನರಿಗೆ ಸರಿಯಾಗಿ ಊಟ, ವಸತಿ ಸಿಕ್ಕಿರಲಿಲ್ಲ. ಎಲ್ಲರೂ ಟೆಂಟ್ ಹಾಕಿಕೊಂಡು ಕಷ್ಟದ ದಿನಗಳನ್ನು ಕಳೆದಿದ್ದಾರೆ. ಸಿನಿಮಾದಲ್ಲಿ ಎಲ್ಲವನ್ನೂ ನಿಜವೇ ತೋರಿಸಿದ್ದಾರೆ ಆದರೆ ಅಲ್ಲಿನ ಕ್ರೌರ್ಯ ಇದಕ್ಕಿಂತಲೂ ಭಯಾನಕವಾಗಿತ್ತು.

TAGGED:'ದಿ ಕಾಶ್ಮೀರ್ ಫೈಲ್ಸ್'cinemasandalwoodThe Kashmir Filesಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

g.parameshwar
Crime

ಹುಬ್ಬಳ್ಳಿ ಪ್ರಕರಣ – ಜಿಮ್ ಟ್ರೈನರ್ ವಿರುದ್ಧ ಕ್ರಮಕ್ಕೆ ಸೂಚಿಸಿದ ಪರಮೇಶ್ವರ್‌

Public TV
By Public TV
14 minutes ago
Auto Driver
Bengaluru City

ಬೆಂಗಳೂರು ಜೀವನಾಡಿ ಸಾರಥಿಗಳಿಗೆ ಸಂಕಷ್ಟ – ನಸುಕಿನಲ್ಲೇ ಕ್ಯೂ ನಿಂತ್ರೂ ಸಿಗ್ತಿಲ್ಲ ಆಟೋ ಗ್ಯಾಸ್

Public TV
By Public TV
30 minutes ago
INS Aridhaman
Latest

ನ್ಯೂಕ್ಲಿಯರ್ ಸಾಮರ್ಥ್ಯದ 3ನೇ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಅರಿದಮನ್ ಭಾರತೀಯ ಸೇನೆಗೆ ಸೇರ್ಪಡೆ

Public TV
By Public TV
47 minutes ago
Russia India
Latest

ಭಾರತಕ್ಕೆ ಬೇಕಾದ ತೈಲ, ಎಲ್‌ಎನ್‌ಜಿ ಪೂರೈಕೆಗೆ ಉತ್ಪಾದನೆ ಜಾಸ್ತಿ ಮಾಡಲು ಸಿದ್ಧ: ಭಾರತಕ್ಕೆ ರಷ್ಯಾ ಭರವಸೆ

Public TV
By Public TV
58 minutes ago
Oman Tankers
Latest

ಇರಾನ್‌ ಸಮುದ್ರ ಬಳಸದೇ ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಮೂರು ಒಮಾನ್ ಹಡಗುಗಳು

Public TV
By Public TV
1 hour ago
Justice Santosh Hegde
Bengaluru City

ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?