ಕಾಳಿ ದೇವಿ ಪಾದದ ಕೆಳಗೆ ವ್ಯಕ್ತಿಯ ತಲೆ ಬುರುಡೆ!

Public TV
1 Min Read
breakthrough pig heart transplant 2 1

ಹೈದರಾಬಾದ್: ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆ ಪತ್ತೆಯಾಗಿರುವ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.

ನಿನ್ನೆ ತೆಲಂಗಾಣದ ರಸ್ತೆ ಬದಿಯಲ್ಲಿ ಇದ್ದ ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆಯನ್ನು ಮೊದಲು ಅರ್ಚಕರು ನೋಡಿದ್ದಾರೆ. ನಂತರ ಈ ಕುರಿತು ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೂಡಲೇ ಸಂಬಳ ಬಿಡುಗಡೆ ಮಾಡಿ: ಹಾಲಪ್ಪ ಆಚಾರ್ ತರಾಟೆ

Hyderabad police jeep

ಈ ದೃಶ್ಯವನ್ನು ನೋಡಿದ ಗ್ರಾಮಸ್ಥರು ಅಚ್ಚರಿಗೊಂಡಿದ್ದು, ದೇವಿ ಪಾದದ ಬಳಿ ಇರುವ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆ ಮೃತ ವ್ಯಕ್ತಿಯ ಗುರುತನ್ನು ತಿಳಿದುಕೊಳ್ಳಲು ಪೊಲೀಸರು ಸೋಶಿಯಲ್ ಮೀಡಿಯಾದ ಫೋಟೋವನ್ನು ಶೇರ್ ಮಾಡಿದ್ದಾರೆ.

ಪರಿಣಾಮ ಫೋಟೋ ನೋಡಿ ಸೂರ್ಯಪೇಟೆಯ ಕುಟುಂಬವೊಂದು ಪೊಲೀಸರನ್ನು ಸಂರ್ಪಕಿಸಿದೆ. ಫೋಟೋ ನೋಡಿದರೆ ನಮ್ಮ ಮನೆಯವನು ಎಂದು ಅನಿಸುತ್ತಿದೆ. ನಮ್ಮ ಕುಟುಂಬದಲ್ಲಿ 2 ವರ್ಷಗಳ ಹಿಂದೆ 30 ವರ್ಷದ ಮಾನಸಿಕ ಅಸ್ವಸ್ಥ ಕಾಣೆಯಾಗಿದ್ದನು. ಈ ಫೋಟೋ ನೋಡಿದರೆ ಇವನು ನಮ್ಮ ಕುಟುಂಬದವನಂತೆ ಕಾಣಿಸುತ್ತಿದ್ದಾನೆ ಎಂದು ಪೊಲೀಸರಿಗೆ ಕುಟುಂಬದವರು ತಿಳಿಸಿದ್ದಾರೆ.

police dhl

ಈ ಕುರಿತು ಮಾತನಾಡಿದ ದೇವರಕೊಂಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದರೆಡ್ಡಿ, ಸುಮಾರು 30ರ ಆಸುಪಾಸಿನ ವ್ಯಕ್ತಿಯನ್ನು ಬೇರೆಡೆ ಹತ್ಯೆಗೈದು ತಲೆಯನ್ನು ವಿಗ್ರಹದ ಪಾದದ ಕೆಳಗೆ ಹಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಎಲ್ಲ ಆಯಾಮಗಳಲ್ಲಿ ನಾವು ತನಿಖೆ ಮಾಡುತ್ತೇವೆ. ಈ ಕೃತ್ಯವನ್ನು ಭೇದಿಸಲು 8 ತಂಡವನ್ನು ರಚಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮೃತ ವ್ಯಕ್ತಿಯ ಶವವನ್ನು ಇನ್ನೂ ಪತ್ತೆ ಮಾಡಲಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಿಸಿಟಿವಿ ಕ್ಯಾಮೆರಾಗಳಿಂದ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ:  ಮತ್ತೆ ಮೇಕೆದಾಟು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ಪ್ರಸ್ತುತ ವಿಗ್ರಹದ ಪಾದದಲ್ಲಿ ತಲೆ ಕತ್ತರಿಸಿರುವ ಭಯಾನಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Share This Article
Leave a Comment

Leave a Reply

Your email address will not be published. Required fields are marked *