– ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ದಂಡು
ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಆನ್ಲಾಕ್ ಮಧ್ಯೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಆದರೆ ಈ ಆದೇಶ ಪಾಲನೆ ಸದ್ಯಕ್ಕೆ ಸೂಕ್ತವಾಗಿ ಆಗುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದೆ. ಕಾರಣ ವಾಹನಗಳ ಸಂಚಾರ ಸಾಮಾನ್ಯ ದಿನದಂತೆ ಇದೆ. ಅಗತ್ಯ ವಸ್ತುಗಳ ಖರೀದಿಗೆ ನಿಗದಿ ಅವಧಿಯಲ್ಲಿ ಸಮಯಾವಕಾಶ ನೀಡಲಾಗಿದೆ. ಹಾಗಂತ ರಸ್ತೆಗಿಳಿದಿರುವ ಬಹುತೇಕ ವಾಹನಗಳು ಅಗತ್ಯ ಓಡಾಟಕ್ಕೆ ಸೀಮಿತವಾಗಿಲ್ಲ. ಬದಲಾಗಿ ಬಿಂದಾಸ್ ಓಡಾಟಕ್ಕೆ ಸಾಕ್ಷಿಯಾಗಿದೆ.
ಗೊರಗುಂಟೆಪಾಳ್ಯ ಸಿಗ್ನಲ್ ನಲ್ಲಿ ವಾಹನಗಳ ಸಂಚಾರದ ಭರಾಟೆ ಯಥೇಚ್ಛವಾಗಿ ಸಾಗಿದೆ. ತುಮಕೂರು, ಹೆಬ್ಬಾಳ ಹಾಗೂ ಮಾಗಡಿ ಮುಖ್ಯ ರಸ್ತೆಯಿಂದ ಬರುವ ವಾಹನಗಳ ಸಂಚಾರದಲ್ಲಿ ಕಡಿಮೆ ಕಾಣಿಸುತ್ತಲೇ ಇದೆ. ಟ್ರಾಫಿಕ್ ಸಿಗ್ನಲ್ ಓಪನ್ ಆಗಿ ವಾಹನ ಸಂಚಾರ ಆಗುವಷ್ಟು ವಾಹನಗಳ ದಟ್ಟಣೆ ಇದೆ.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಎಂಟ್ರಿಯಾಗುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ನಡುವೆ ವಾಹನಗಳ ಸಂಪರ್ಕ ಕಷ್ಟ ಎಂಬ ಲೆಕ್ಕಚಾರ ಮಾಡದೇ ಜನರ ಓಡಾಡುತ್ತಿದ್ದಾರೆ. ಇತ್ತ ಆಟೋಗಳು, ಟ್ಯಾಕ್ಸಿ ಸಹ ಜನರಿಗೆ ಸರ್ವಿಸ್ ನೀಡಲು ಸಾಲು ಗಟ್ಟಿ ನಿಂತಿದೆ. ಇದೇ ಮಾನದಂಡದ ಆಧಾರದಲ್ಲಿ ಪ್ರಯಾಣಿಕರು ಯಥೇಚ್ಛಾವಾಗಿ ರೈಲ್ವೆ ನಿಲ್ದಾಣ ಮೂಲಕ ನಗರಕ್ಕೆ ಎಂಟ್ರಿಯಾಗುತ್ತಿದ್ದಾರೆ.
ರಸ್ತೆಗಳು ಖಾಲಿಯಿದೆ ಎಂದು ಓಡಾಟ ಮಾಡುವವರ ವೇಗಕ್ಕೆ ಬ್ರೇಕ್ ಹಾಕಲು ಈಗ ಫ್ಲೈಓವರ್, ಅಂಡರ್ ಪಾಸ್ ಗಳ ಕ್ಲೋಸ್ ಮಾಡಿಸಲಾಗಿದೆ. ಈ ಮೂಲಕ ಬ್ಯಾರಿಕೇಡ್ ಹಾಕದ ರಸ್ತೆಗಳಿಗೆ ವಾಹನಗಳು ಬರಬೇಕು. ಅನಗತ್ಯ ಓಡಾಟವಾಗಿದರೆ ದಂಡ ಕಟ್ಟಬೇಕಾಗುತ್ತದೆ. ಆನಂದ್ ರಾವ್ ಸರ್ಕಲ್ ಫ್ಲೈಓವರ್, ಡಾ ರಾಜ್ ಕುಮಾರ್ ರಸ್ತೆಯ ಅಂಡರ್ ಪಾಸ್ ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.
ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಕೆ.ಆರ್.ಮಾರ್ಕೆಟ್ ಬಿವಿಕೆ ಅಯ್ಯಂಗಾರ್ ರಸ್ತೆಗೆ ಸಂಪರ್ಕ ನೀಡುವ ರೋಡ್ ಗಳಲ್ಲಿ ವ್ಯಾಪಾರಿಗಳು ಮಾರಾಟಕ್ಕೆ ನಿಂತಿದ್ದಾರೆ. ಆದರೆ ಗ್ರಾಹಕರು ಮಾತ್ರ ತರಕಾರಿ, ಹಣ್ಣು,ಕಾಯಿ ಅಂತ ರಸ್ತೆಗೆ ಇಳಿದಿಲ್ಲ.
ಲಾಕ್ಡೌನ್ ನಲ್ಲಿ ಕೆಲಸ ಸಿಗುತ್ತಿಲ್ಲ. ಅಗತ್ಯ ವಸ್ತುಗಳಂತೂ ಕಡಿಮೆ ಬೆಲೆಗಿಲ್ಲ.. ಹಾಗಂತ ಸುಮ್ಮನಿರಲು ಬಿಡಲ್ಲ. ಹೋಟೆಲ್ ಗೆ ಹೋಗಿ ತಿನ್ನುವ ಚೈತನ್ಯ ಇಲ್ಲದ ಜನರು ಈಗ ಇಂದಿರಾ ಕ್ಯಾಂಟೀನ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಮತ್ತೆ ಕೆಲವರು ಈಗ ಆರ್ಥಿಕ ಚೈತನ್ಯ ಇದ್ರೂ ಮುಂದೆ ತೊಂದರೆ ಆಗುವ ಲೆಕ್ಕ ಮಾಡಿಕೊಂಡು ಈಗ ಕ್ಯೂ ನಿಲ್ಲುತ್ತಿದ್ದಾರೆ. ನಗರದ 191 ಇಂದಿರಾ ಕ್ಯಾಂಟೀನ್ ಗಳಲ್ಲಿ ಕ್ಯೂ ವಾತಾವರಣ ಇದೆ. ಸಂಪಂಗಿರಾಮನಗರ ಇಂದಿರಾ ಕ್ಯಾಂಟೀನ್ ಮುಂದೆ ನೂರಾರು ಜನರು ಉಚಿತ ಊಟಕ್ಕಾಗಿ ಕ್ಯೂ ನಿಂತಿದ್ದಾರೆ. ಹೋಟೆಲ್ ಗಳಲ್ಲಿ ಪರ್ಸೆಲ್ ಚಾರ್ಜ್ ,ಆನ್ ಲೈನ್ ಎಕ್ಸಟ್ರಾ ಅಮೌಂಟ್ ಕಟ್ಟುವ ಬದಲು ಇಂದಿರಾ ಕ್ಯಾಂಟೀನ್ ಊಟವೇ ಸಾಕು ಎನ್ನುತ್ತಿದ್ದಾರೆ.