ಕೊರೊನಾ ವಿನಾಶಕ್ಕಾಗಿ ಹಾವೇರಿಯ ಹರಸೂರು ಬಣ್ಣದಮಠದಲ್ಲಿ ವಿಶೇಷ ಹೋಮ

Public TV
1 Min Read
haveri corona puje

ಹಾವೇರಿ: ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ನಿತ್ಯವೂ ಸಾವಿರಾರು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಹಾವೇರಿಯ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕೊರೊನಾ ಮಹಾಮಾರಿಯ ಹೊಡೆದೊಡಿಸುವ ಸಲುವಾಗಿ ವಿಶೇಷ ಹೋಮವನ್ನು ಹರಸೂರು ಬಣ್ಣದಮಠದಲ್ಲಿ ನಡೆಸಲಾಯಿತು.

haveri corona pooje2

ಮಠದ ಆವರಣದಲ್ಲಿ ಶ್ರೀ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತ್ರತ್ವದಲ್ಲಿ ಹೋಮ ಪೂಜೆ, ಶನಿ ಪೂಜೆ, ಕುಜದೋಷ ಹೋಮ ಹಾಗೂ ನಾಗದೋಷ ಹೋಮವನ್ನ ಸ್ವಾಮೀಜಿಗಳು ಮಾಡಿದರು. ಸತತವಾಗಿ ಎರಡು-ಮೂರು ಗಂಟೆಗಳ ಕಾಲ ನಿರಂತರವಾಗಿ ಹೋಮ ನಡೆಸಿ ಕೊರೊನಾ ಮಹಾಮಾರಿ ರೋಗ ಸುಟ್ಟು ನಾಶವಾಗಲಿ ಎಂದರು.

haveri corona pooje3

ವಿಶ್ವ, ದೇಶ ಸೇರಿದಂತೆ ರಾಜ್ಯಕ್ಕೆ ಅಂಟಿದ ಮಾಹಾಮಾರಿ ಕೊರೊನಾ ನಾಶವಾಗಬೇಕು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಿಗೆ ಆಕ್ಸಿಜನ್ ಹಾಗೂ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಮಾಹಮಾರಿ ನಾಶವಾಗಲಿ ಅಂತಾ ವಿಶೇಷವಾದ ಹೋಮ, ಶನಿ ಪೂಜೆ, ನಾಗದೋಷ ಸೇರಿದಂತೆ ವಿಶೇಷಪೂಜೆ ಮಾಡಲಾಯಿತು.

Share This Article
Leave a Comment

Leave a Reply

Your email address will not be published. Required fields are marked *