3 ತಿಂಗಳ ನಾಯಿಮರಿಯ ಶಿರಚ್ಛೇದ, ಎಫ್‍ಐಆರ್ ದಾಖಲು

Public TV
1 Min Read
dog street dog 1

ಮುಂಬೈ: ಮೂರು ತಿಂಗಳ ನಾಯಿಮರಿಯ ರುಂಡವನ್ನು ಕತ್ತರಿಸಿ ಅಮಾನುಷವಾಗಿ ಹತ್ಯೆ ಮಾಡಿ ಹೋದ ಅಪರಿಚಿತರ ವಿರುದ್ಧ ಪ್ರಾಣಿ ದಯಾ ಸಂಘ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.

ಮುಂಬೈನ ಆನಂದ್‍ನಗರದ ದಹಿಸರ್ ಎಂಬ ಪ್ರದೇಶದಲ್ಲಿರುವ ಜಾರಿಮರಿ ಉದ್ಯಾನವನದಲ್ಲಿ ಘಟನೆ ನಡೆದಿದೆ. ನಾಯಿ ಮರಿಯ ಶಿರಚ್ಛೇದ ಮಾಡಿರುವುದನ್ನು ಗಮನಿಸಿರುವ ಸ್ಥಳೀಯ ವ್ಯಕ್ತಿ ತಿಳಿಸಿದ ಮಾಹಿತಿಯನ್ನಾಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ನಾಯಿ ಮರಿಯ ದೇಹವನ್ನು ವಶಪಡಿಸಿಕೊಂಡಿದ್ದಾರೆ.

Police

ಮುಂಬೈ ಅನಿಮಲ್ ಅಸೋಸಿಯೇಶನ್ (ಎಂಎಎ) ಬೆಂಬಲದೊಂದಿಗೆ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮುಂಬೈನ ದಹಿಸರ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಕುರಿತು ಮಾತಾನಾಡಿದ ಎಂಎಎನ ಸದಸ್ಯ ಸೌರಭ್ ಸ್ಥಳೀಯರಾದ ಪ್ರಿಯಾ ಸಮಾಜ ಕಲ್ಯಾಣ ಹಾಲ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಗಾರ್ಡನ್ ಆನಂದ್ ನಗರ ದಹಿಸಾರ್ ಬಳಿ ಸತ್ತ ನಾಯಿ ಮರಿಯ ತಲೆಯ ಭಾಗವನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ಈ ಕೃತ್ಯಕ್ಕೆ ಚಾಕು ಬಳಸಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Police Jeep

ನಾಯಿ ಮರಿಯ ರುಂಡವನ್ನು ಅಮಾನುಷವಾಗಿ ಕತ್ತರಿಸಿರುವುದನ್ನು ಕಂಡು ನೋವಾಗಿದೆ. ನಾವು ಸ್ಥಳೀಯ ಪ್ರಾಣಿಗಳನ್ನು ತುಂಬಾ ಪ್ರೀತಿಯಿಂದ ಆಹಾರವನ್ನು ನೀಡಿ ಬೆಳೆಸಿದ್ದೇವೆ ಇದೀಗ ಈ ಘಟನೆಯಿಂದ ನಮಗೆ ಬೇಸರ ತರಿಸಿದೆ ಎಂದು ಪ್ರಾಣಿ ದಯಾ ಸಂಘದ ಪ್ರಿಯಾ ಅಭಿಪ್ರಾಯಪಟ್ಟರು.

ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಪ್ರಾಣಿ ಕೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *