Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಜ್ಞಾನ ದೀವಿಗೆಗೆ ಗೌರವ ಧನದ ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

Public TV
Last updated: November 11, 2020 4:22 pm
Public TV
Share
2 Min Read
UDP 4
SHARE

ಉಡುಪಿ: ಪಬ್ಲಿಕ್ ಟಿವಿ ರಾಜ್ಯದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸರ್ಕಾರಿ ಶಾಲೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಒಂದು ಹೋರಾಟದ ಯೋಜನೆ. ನನ್ನಂತಹ ಸಾವಿರಾರು ಜನರಿಗೆ ಕಣ್ಣು ತೆರೆಸುವ ಯೋಜನೆಯಿದೆ. ನನ್ನ ಒಂದು ತಿಂಗಳ ಗೌರವಧನ ಮತ್ತು ಎರಡು ಟ್ಯಾಬ್ ನೀಡುವುದಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದರು.

ಇದು ಮಕ್ಕಳ ಭವಿಷ್ಯ ನಿರ್ಣಯವಾಗುವ ವರ್ಷ. ಸರ್ಕಾರದಿಂದ ನನಗೆ ಪ್ರತಿ ತಿಂಗಳು ಗೌರವಧನ ಬರುತ್ತದೆ. ಈ ತಿಂಗಳ ನನ್ನ ಸಂಬಳವನ್ನು ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ನೀಡುತ್ತೇನೆ. ಇದರ ಜೊತೆಗೆ ಎರಡು ಟ್ಯಾಬ್ ನನ್ನ ವೈಯಕ್ತಿಕ ನೆಲೆಯಲ್ಲಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುತ್ತೇನೆ.

Public TV rotary international Tablets

ಇಂತಹ ಜನಪರ ಯೋಜನೆ ಮಾಧ್ಯಮದ ಮೂಲಕ ಆರಂಭವಾಗಿ ಸಮಾಜಕ್ಕೆ ಹೋದರೆ ಇದೊಂದು ಕ್ರಾಂತಿ ಆಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸದುಪಯೋಗವಾಗುವ ಎಷ್ಟು ಯೋಜನೆಗಳು ಬಂದರೂ ಅದಕ್ಕೆ ಖಂಡಿತವಾಗಿ ಜನ ಬೆಂಬಲ ಕೊಡಲೇಬೇಕು. ಈ ಜನಪರ ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸುವ ಯೋಜನೆಯಾಗಲಿ. ಆಯಾಯ ರಾಜ್ಯದ ಮಾಧ್ಯಮಗಳು, ಸಂಸ್ಥೆಗಳು ಸರ್ಕಾರಗಳು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದರು.

ಶಾಲೆ ಆರಂಭ ಆಗುವ ಬಗ್ಗೆ ಸಾಕಷ್ಟು ಗೊಂದಲ ಪೋಷಕರಲ್ಲಿ ಮಕ್ಕಳಲ್ಲಿ ಸರ್ಕಾರದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬಹಳ ಕಷ್ಟ. ವಿದ್ಯಾಭ್ಯಾಸ ವಿಚಾರದಲ್ಲಿ ಮಕ್ಕಳ ಭವಿಷ್ಯ ಬಹಳ ಮುಖ್ಯ. ಶಾಲೆ ಆರಂಭವಾಗದಿದ್ದರೆ ಅವರ ಮುಂದಿನ ಭವಿಷ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಡೀ ವರ್ಷ ಶೂನ್ಯ ವರ್ಷ ಆಗುವ ಸಾಧ್ಯತೆ ಇದೆ.

UDP 1 1

ಶ್ರೀಮಂತರ ಮಕ್ಕಳು ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಮಕ್ಕಳು ಸಾಲ ಮಾಡಿಯಾದರು ಮಕ್ಕಳಿಗೆ ಲ್ಯಾಪ್ಟಾಪ್ ಟ್ಯಾಬ್ ಮೊಬೈಲ್ ಕೊಡಿಸಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ಹೋಗುವ ಕಡುಬಡ ಮಕ್ಕಳು ಎಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕೊರೊನಾ ಸಂಕಷ್ಟ ಇದೆ. ಎಲ್ಲರನ್ನೂ ಆರ್ಥಿಕ ಸಂಕಷ್ಟ ಇದೆ. ಈ ನಡುವೆಯೂ ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಬೇಕು.

ಎಲ್ಲವನ್ನು ಸರ್ಕಾರನೇ ಕೊಡಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಸಿರಿವಂತರು ಧನವಂತರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದವರು ತಮ್ಮ ಕೈಲಾದ ಸಹಾಯವನ್ನು ಬಡಮಕ್ಕಳಿಗೆ ಸಹಾಯ ಮಾಡಿ. ಆರಂಭವಾದ ಯೋಜನೆಯನ್ನು ಸರಕಾರ ಮುಂದೆ ಕೈಗೆತ್ತುಕೊಂಡು ಪ್ರತಿಯೊಬ್ಬರಿಗೂ ಕೂಡ ಜ್ಞಾನ ದೀವಿಗೆ ಟ್ಯಾಬ್ ಯೋಜನೆ ತಲುಪಬೇಕು. ಯೋಜನೆಗೆ ದಾರಿ ಗೊತ್ತಾಗಿದೆ ಆ ದಾರಿಯ ಮೂಲಕ ಮುನ್ನಡೆಯಬೇಕಾಗಿದೆ ಎಂದರು.

TAGGED:jnanadeevigePublic TVraghavendra kinisalaryudupiಉಡುಪಿಜ್ಞಾನದೀವಿಗೆಪಬ್ಲಿಕ್ ಟಿವಿರಾಘವೇಂದ್ರ ಕಿಣಿಸಂಬಳ
Share This Article
Facebook Whatsapp Whatsapp Telegram

You Might Also Like

ED 1
Bengaluru City

Exclusive | ವಾಲ್ಮೀಕಿ ಹಗರಣ: ಬಳ್ಳಾರಿ ಚುನಾವಣೆಗೆ 27 ಕೋಟಿ ಬಳಕೆಯಾಗಿದ್ದು ಹೇಗೆ? – 87 ಕೋಟಿ ಎಲ್ಲೆಲ್ಲಿ ಹಂಚಿಕೆಯಾಯ್ತು?

Public TV
By Public TV
2 minutes ago
Siddaramaiah 4
Districts

ನಮ್ಮ ನಿರೀಕ್ಷೆಗಳಿಗೆ ವಿರುದ್ಧವಾಗಿ ಕೆಲವು ಘಟನೆಗಳು ನಡೆಯುತ್ತವೆ – ಕಾಲ್ತುಳಿತ ಪ್ರಕರಣಕ್ಕೆ ಸಿಎಂ ಬೇಸರ

Public TV
By Public TV
35 minutes ago
Bunny Hop Catch
Cricket

`ಬನ್ನಿ ಹಾಪ್ ಕ್ಯಾಚ್’ ರೂಲ್ಸ್‌ಗೆ ಐಸಿಸಿ ಬ್ರೇಕ್ – ಶೀಘ್ರವೇ ಹೊಸ ರೂಲ್ಸ್

Public TV
By Public TV
36 minutes ago
Temba Bavuma
Cricket

ಚೋಕರ್ಸ್‌ ಹಣೆಪಟ್ಟಿ ಕಳಚಿದ ಹರಿಣರು – ದ. ಆಫ್ರಿಕಾಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಕಿರೀಟ, ದಶಕಗಳ ಕನಸು ನನಸು

Public TV
By Public TV
37 minutes ago
Samir Kumar Sinha plane crash
Latest

ದುರಂತಕ್ಕೂ ಮುನ್ನ ಇದೇ ವಿಮಾನ ಪ್ಯಾರಿಸ್‌ನಿಂದ ದೆಹಲಿಗೆ ಹಾರಾಟ ನಡೆಸಿತ್ತು!

Public TV
By Public TV
1 hour ago
Suhas Shetty Mangaluru copy
Crime

ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್‍ಐಎ ತಂಡ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?