ಮಳೆಯಿಂದ 3 ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ಕಟ್- ಆಶಾ ಕಾರ್ಯಕರ್ತೆಯರ ಗೋಳು

Public TV
1 Min Read
CKM Asha Workers 1

ಚಿಕ್ಕಮಗಳೂರು: ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದಕ್ಕೆ ಆಶಾ ಕಾರ್ಯಕರ್ತೆಯರ ಸಂಬಳ ತಡೆ ಹಿಡಿಯಲಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಎಂಟು ಆಶಾ ಕಾರ್ಯಕರ್ತೆಯರು ಮಳೆಯಿಂದಾಗಿ ಬಸ್ ಸೌಕರ್ಯವಿಲ್ಲದೇ ಮೂರು ದಿನಕ್ಕೆ ಕೆಲಸಕ್ಕೆ ಗೈರಾಗಿದ್ದರು. ಇದೇ ಕಾರಣ ನೀಡಿ ಆರೋಗ್ಯಾಧಿಕಾರಿ ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.

CKM Asha Workers 2

ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕೆಲಸಕ್ಕೆ ಬರಲು ಸಾಧ್ಯವಾಗಿಲ್ಲ. ಗೈರಾಗಿದ್ದಕ್ಕೆ ವಿಷಾದ ಪತ್ರವನ್ನ ನೀಡಿದ್ರೂ ವೈದ್ಯಾಧಿಕಾರಿ ಮನೋಜ್ ತಮ್ಮ ಸಂಬಳ ತಡೆ ಹಿಡಿದಿದ್ದಾರೆ. ನೀವು ಕೆಲಸವನ್ನೇ ಮಾಡಿಲ್ಲ ನಿಮಗೇಕೆ ಸಂಬಳ ನೀಡಬೇಕು ಎಂದು ಹೇಳುತ್ತಾರೆ. ವೈದ್ಯರು ಸಹಿ ಹಾಕಿದ್ರೆ, ನರ್ಸ್ ಗಳು ಹಾಕಲ್ಲ, ನರ್ಸ್ ಗಳು ಸಹಿ ಹಾಕಿದ್ರೆ ವೈದ್ಯರು ಹಾಕಲ್ಲ ಎಂದು ಆಶಾ ಕಾರ್ಯಕರ್ತೆ ರತ್ನ ಹೇಳುತ್ತಾರೆ.

CKM Asha Workers

ಕೊರೊನಾ ಸಮಯದಲ್ಲಿ ಸಂಬಳ ಆಗೋದು ತಡವಾದ್ರೂ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ. ಕೇವಲ ಮೂರು ದಿನ ಗೈರಾಗಿದ್ದಕ್ಕೆ ತಿಂಗಳ ಸಂಬಳ ತಡೆ ಹಿಡಿಯೋದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *