ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಹೆಚ್ಚುತ್ತಿದ್ದು, ನದಿ, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಹಲವು ಸೇತುವೆಗಳು ಮುಳುಗಡೆಯಾಗಿವೆ. ಕೆಲ ಗ್ರಾಮಗಳನ್ನು ಸಹ ಸ್ಥಳಾಂತರಿಸಲಾಗುತ್ತಿದೆ. ಇದರ ಮಧ್ಯೆಯೇ ಅನಾಥ ಅಜ್ಜಿಯೊಬ್ಬರು ಪ್ರವಾಹಕ್ಕೆ ಸಿಲುಕಿ ಪರದಾಡಿದ್ದಾರೆ.
ಜಿಲ್ಲೆಯ ಕೊಣ್ಣೂರ ಗ್ರಾಮದ 85 ವರ್ಷದ ಅಜ್ಜಿ ಶಿವನಮ್ಮ ವಾಲಿ ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಕಣ್ಣೀರಿಟ್ಟಿದ್ದಾರೆ. ಸಂಪರ್ಕ ಕಡಿತವಾಗಿರುವುದರಿಂದ ಎರಡು ದಿನಗಳಿಂದ ಊಟ ಉಪಹಾರವಿಲ್ಲದೆ ಅಜ್ಜಿ ಪರದಾಡಿದ್ದಾರೆ. ಪಬ್ಲಿಕ್ ಟಿವಿ ಬಳಿ ಅಜ್ಜಿ ಅಳಲು ತೋಡಿಕೊಂಡಿದ್ದು, ಪತಿ, ಮಕ್ಕಳು ಯಾರೂ ಇಲ್ಲದಕ್ಕೆ ಎಲ್ಲೂ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಅಜ್ಜಿ ಪ್ರವಾಹಕ್ಕೆ ಸಿಲುಕಿದ್ದಾರೆ. ನೀರಲ್ಲಿ ನಡೆಯಲಾಗದೆ. ಎಲ್ಲೂ ಹೋಗಲಗದೆ ಪರದಾಡಿದ್ದಾರೆ.
ನೀರಿನೊಂದಿಗೆ ಶಿವನ ಪಾದ ಸೇರುತ್ತೇನೆ ಎಂದು ಶಿವನಮ್ಮ ಕಣ್ಣೀರು ಹಾಕಿದ್ದಾರೆ. ಮೂರು ಅಡಿ ಆಳದ ನೀರಲ್ಲಿ ಸಹಾಯಕ್ಕಾಗಿ ಅಜ್ಜಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ನಡೆಯಲು ಬಾರದೆ, ಎಲ್ಲೂ ಹೋಗಲು ಆಗದೆ ನೀರಲ್ಲೇ ಕಾಲ ಕಳೆಯುತ್ತಿದ್ದಾರೆ.