ರಾಯಚೂರಿನಲ್ಲಿ ಮಳೆ, ಬಿರುಗಾಳಿಗೆ ಧರೆಗುರುಳಿದ ಪಪ್ಪಾಯಿ ಗಿಡಗಳು – ಲಕ್ಷಾಂತರ ರೂಪಾಯಿ ಬೆಳೆ ಹಾನಿ

Public TV
1 Min Read
rcr papaya loss 1

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಂಪುರ ಗ್ರಾಮದಲ್ಲಿ ಸುರಿದ ಆಲೆಕಲ್ಲು ಸಹಿತ ಮಳೆ, ಬಿರುಗಾಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.

ಪರಂಪುರ ಗ್ರಾಮದ ರೈತರಾದ ನಿಂಗಪ್ಪ, ಗುರುನಾಥ್ ಗೌಡ ಅವರ ಜಮೀನಿನಲ್ಲಿದ್ದ ಬೆಳೆ ಹಾನಿಯಾಗಿದೆ. ಸುಮಾರು 10 ಎಕ್ರೆಯಲ್ಲಿ ಬೆಳೆದಿದ್ದ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಕೈಗೆ ಬರುವ ಹೊತ್ತಲ್ಲೇ ಕೆಡಕಿನ ಮಳೆ ಬೆಳೆ ಹಾನಿ ಮಾಡಿದೆ.

rcr papaya loss

ಒಂದೆಡೆ ಸುಡು ಬಿಸಿಲು, ನೀರಿನ ಸಮಸ್ಯೆ ಇದ್ರೆ ಜಿಲ್ಲೆಯಲ್ಲಿ ಕೆಡಕಿನ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸಂಜೆಯಾಗುತ್ತಿದ್ದಂತೆ ವಾತಾವರಣವೇ ಬದಲಾಗುತ್ತಿದ್ದು, ಗಾಳಿ-ಮಳೆ ಜೋರಾಗುತ್ತಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಎಕ್ರೆ ಬೆಳೆಗಳು ಹಾನಿಯಾಗಿದೆ. ಭತ್ತ ಹಾಗೂ ಪಪ್ಪಾಯಿ ಬೆಳೆ ಅತೀ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆಯೂ ನಿರಂತರವಾಗಿ ನಡೆದಿದ್ದು, ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *