ಮಂಡ್ಯ ಜನರ ಆಶೀರ್ವಾದಕ್ಕಾಗಿ ನಿಖಿಲ್‍ ಮದ್ವೆಗೆ ಪ್ರತಿ ಮನೆಗೂ ಆಹ್ವಾನ: ಹೆಚ್‍ಡಿಕೆ

Public TV
1 Min Read
nikhil hdk collage

ಮಂಡ್ಯ: ಪುತ್ರ ನಿಖಿಲ್ ಮದುವೆಗೆ ಮಂಡ್ಯ ಜಿಲ್ಲೆಯ ಪ್ರತಿ ಮನೆಗೂ ಆಹ್ವಾನ ಪತ್ರಿಕೆ ನೀಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ನಿಖಿಲ್‍ಗೆ ಮಂಡ್ಯ ಜನರ ಆಶೀರ್ವಾದ ಬೇಕಾಗಿದೆ. ಹೀಗಾಗಿ ಮಂಡ್ಯದ ಪ್ರತಿಯೊಂದು ಮನೆಗೂ ಆಹ್ವಾನ ಪತ್ರಿಕೆ ನೀಡಿ, ಎಲ್ಲರನ್ನೂ ಮದುವೆಗೆ ಆಹ್ವಾನ ಮಾಡುತ್ತೇವೆ. ಎಲ್ಲರೂ ನಿಖಿಲ್‍ಗೆ ಪ್ರೀತಿ ವಿಶ್ವಾಸದಿಂದ ಆಶೀರ್ವಾದ ಮಾಡುತ್ತಾರೆ ಹೆಚ್‍ಡಿಕೆ ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ನಿಖಿಲ್ ನಿಶ್ಚಿತಾರ್ಥ, ರಾಮನಗರದಲ್ಲಿ ಮ್ಯಾರೇಜ್ – ಎಚ್‍ಡಿಕೆ

mnd hdk

ನಮ್ಮ ಕುಟುಂಬದಲ್ಲಿ ನಿಖಿಲ್ ಒಬ್ಬನ ಜವಾಬ್ದಾರಿ ನನ್ನ ಮೇಲೆ ಇದೆ. ಈ ಜವಾಬ್ದಾರಿಯಿಂದ ನನ್ನನ್ನು ಬೆಳೆಸಿದ ಜನರ ಋಣ ತೀರಿಸುತ್ತೇನೆ. ಎಲ್ಲರನ್ನೂ ನಿಖಿಲ್ ಮದುವೆಗೆ ಆಹ್ವಾನ ಮಾಡಿ, ಒಂದು ಊಟ ಹಾಕಿಸಬೇಕು ಎಂದು ನಿರ್ಧಾರ ಮಾಡಿದ್ದೇನೆ. ಈ ಮದುವೆಯನ್ನು ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಮಾಡುತ್ತೇವೆ. ಏಕೆಂದರೆ ಎಲ್ಲರಿಗೂ ಅನುಕೂಲವಾಗಬೇಕೆಂದು ಈ ನಿರ್ಧಾರ ಮಾಡಿದ್ದೇವೆ ಎಂದು ಮಗನ ಮದುವೆ ಬಗ್ಗೆ ಕುಮಾರಸ್ವಾಮಿ ಹೇಳಿದರು. ಇದನ್ನೂ ಓದಿ: ನಂಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟ್ನರ್: ನಿಖಿಲ್

Share This Article
Leave a Comment

Leave a Reply

Your email address will not be published. Required fields are marked *