Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

Districts

ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

Public TV
Last updated: December 11, 2019 5:43 pm
Public TV
Share
3 Min Read
KWR copy 1
SHARE

ಕಾರವಾರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಂಗಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿ. 14 ಹಾಗೂ 15 ರಂದು ಬೆಂಗಳೂರು ಬಟರ್ ಫ್ಲೈ ಕ್ಲಬ್ (ಬಿಬಿಸಿ)ಸಹಕಾರದೊಂದಿಗೆ ಆಯೋಜಿಸಲು ಸಿದ್ಧತೆ ನಡೆದಿದೆ.

ರಾಜ್ಯದಲ್ಲಿ ಅಂದಾಜು 130 ಪ್ರಭೇದದ ಪತಂಗಗಳಿವೆ. ಆದರೆ, ಕೇರಳ, ತಮಿಳುನಾಡಿನಲ್ಲಿ ಹೊರತುಪಡಿಸಿದರೆ ಇದುವರೆಗೂ ಅವುಗಳ ಸಮೀಕ್ಷೆ ಎಲ್ಲೂ ನಡೆದಿಲ್ಲ.

KWR 7 copy

ಗಣತಿ ಹೇಗೆ ಮಾಡಲಾಗುತ್ತದೆ?
ಪ್ರಾಣಿಗಳನ್ನಾದರೆ ಹೆಜ್ಜೆ ಗುರುತು ಹಾಗೂ ಕ್ಯಾಮೆರಾ ಮೂಲಕ ಟ್ರ್ಯಾಪ್ ಮಾಡಿ ಮಾಡಲಾಗುತ್ತದೆ. ಆದರೆ ಚಿಟ್ಟೆಗಳ ಗಣತಿ ಮಾಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಅವುಗಳ ಚಲನ-ವಲನ ಸಮಯ ಹೀಗೆ ಪ್ರತಿಯೊಂದನ್ನೂ ಲೆಕ್ಕ ಹಾಕಿ ಅವುಗಳ ಬಣ್ಣ ಆಕಾರ, ದೇಹದ ಶೈಲಿ ಹೀಗೆ ಪ್ರತಿಯೊಂದರ ಮೇಲೂ ನಿಗಾ ಇಟ್ಟು ಮಾಡಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನುರಿತ ತಜ್ಞರು, ಛಾಯಾಗ್ರಾಹಕರನ್ನು ಒಳಗೊಂಡ ತಂಡವನ್ನು ಅರಣ್ಯ ಇಲಾಖೆ ಜೊತೆಗೂಡಿ ಕಾಡಿನಲ್ಲಿ ಸುತ್ತಾಡಲಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವ ದಾಂಡೇಲಿ ಹುಲಿ ರಕ್ಷಿತಾ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಣತಿ ಹೇಗೆ ನಡೆಯಬೇಕು, ಯಾವ್ಯಾವ ಕಾರ್ಯಕ್ರಮಗಳು ಇರಬೇಕು ಎಂಬುದು ನಿರ್ಧರಿಸಿ ಕಾರ್ಯಾಚರಣೆಗೆ ಇಳಿಯಲಿದೆ.

KWR 5 copy

ದಾಂಡೇಲಿ ಪ್ರದೇಶವೇ ಆಯ್ಕೆ ಏಕೆ? ವಿಶೇಷತೆಯೇನು?
ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನೊಳಗೊಂಡ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ. ಇದು 1,300 ಚದರ ಕಿ.ಮೀಯಷ್ಟು ವ್ಯಾಪ್ತಿಯನ್ನು ವಿಸ್ತಾರವಾಗಿ ಹೊಂದಿದೆ. ಇಲ್ಲಿನ ವಾತಾವರಣ ಪರಿಸರ ಸಾಕಷ್ಟು ಪ್ರಭೇದಗಳ ಪತಂಗಗಳಿಗೆ ಆವಾಸ ಸ್ಥಾನ ಕೂಡ ಆಗಿದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ಈ ಪ್ರದೇಶ ಜನರನ್ನು ಸೆಳೆಯುವ ಆಲೋಚನೆಯೂ ಅರಣ್ಯ ಇಲಾಖೆಯ ಉದ್ದೇಶವಾಗಿದೆ.

ಇಲ್ಲಿರುವ ಪತಂಗಗಳ ಅಂದ, ಚಂದ ನೋಡುವ, ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ, ತಜ್ಞರನ್ನು ಕರೆಸಿ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಸುವ ಆಸಕ್ತರಿಗೆ ಇದೊಂದು ಬಟರ್ ಫ್ಲೈ ಉತ್ಸವವಾಗಿ ರೂಪಿಸುವುದು ಅರಣ್ಯ ಇಲಾಖೆಯ ಉದ್ದೇಶ ಕೂಡ ಆಗಿದೆ.

KWR 4 copy

ದಾಂಡೇಲಿ ಹಾರ್ನ್ ಬಿಲ್ ಸಂರಕ್ಷಿತ ಅರಣ್ಯ ಎಂಬ ಖ್ಯಾತಿ ಕೂಡ ಇದ್ದು, ಪ್ರತಿ ವರ್ಷ ದಾಂಡೇಲಿಯಲ್ಲಿ ಹಾರ್ನ್ ಬಿಲ್ ಉತ್ಸವ ಆಯೋಜಿಸಲಾಗುತ್ತಿದೆ. ಕೈಗಾ ಹಾಗೂ ದಾಂಡೇಲಿಗಳಲ್ಲಿ ಹಲವು ವರ್ಷಗಳಿಂದ ಬರ್ಡ್ ಮ್ಯಾರಾಥಾನ್ ಆಯೋಜಿಸುವ ಮೂಲಕ ಪಕ್ಷಿಗಳ ಪ್ರಭೇದದ ದಾಖಲೀಕರಣ ನಡೆಸಲಾಗುತ್ತಿದೆ.

ಅದೇ ಮಾದರಿಯಲ್ಲಿ ಬಟರ್ ಫ್ಲೈ ಉತ್ಸವ ಆಯೋಜಿಸಿದ್ದಲ್ಲಿ ದಾಂಡೇಲಿ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ದೊರಕುವ ಜೊತೆಗೆ ಚಿಟ್ಟೆಗಳ ಬಗ್ಗೆ ಅಧಿಕೃತ ಅಧ್ಯಯನಕ್ಕೂ ಚಾಲನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಯೋಜನೆಯಾಗಿದೆ.

KWR 1 copy

ಪತಂಗ ಪಾರ್ಕ್:
ಜೊಯಿಡಾ, ಕಾರವಾರದಲ್ಲಿ ಅರಣ್ಯ ಇಲಾಖೆ ಚಿಟ್ಟೆ ಪಾರ್ಕ್ ನಿರ್ಮಿಸಿದೆ. ಕೈಗಾದಲ್ಲಿ ಎನ್ ಪಿಸಿಐಎಲ್ ಚಿಟ್ಟೆ ಪಾರ್ಕ್ ಅಭಿವೃದ್ಧಿ ಮಾಡಿದೆ. ಆದರೆ, ಅವುಗಳ ಗಣತಿ, ದಾಖಲೀಕರಣ, ಅಧ್ಯಯನ ಇಲಾಖೆಯಿಂದ ನಡೆದಿಲ್ಲ. ಈ ಗಣತಿ ಚಿಟ್ಟೆ ಪಾರ್ಕ್ ಗಳ ಅಭಿವೃದ್ಧಿಗೂ ಮುಂದೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ!
ದಾಂಡೇಲಿಯಲ್ಲಿ ಚಿಟ್ಟೆಗಳ ಗಣತಿ ಕಾರ್ಯ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ಮೀಸಲಿಡಲಾಗಿದ್ದು ಕಮಿಟಿ ಸಹ ಮಾಡಿದೆ. ಆದರೆ ಅದರ ಅಧಿಕೃತ ರೂಪುರೇಷೆ ಇದುವರೆಗೂ ಸಿದ್ಧವಾಗಿಲ್ಲ. ಗಣತಿ ಬಗ್ಗೆ ಯಾವುದೇ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಕೂಡ ಇಲ್ಲ. ಎಲ್ಲವನ್ನೂ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನವರನ್ನು ಆಶ್ರಯಿಸಿದೆ.

KWR 3 copy

ಇಲಾಖೆ ಪ್ರಬಾರ ಡಿಎಫ್ ಒ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಅಧಿಕಾರಿ ವಸಂತ ರೆಡ್ಡಿ ರವರಿಗೆ ವಹಿಸಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪತಂಗಗಳ ಅಧ್ಯಯನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಆದರೆ ಕೇವಲ ಸರ್ಕಾರದಿಂದ ಬರುವ ಅನುದಾನವನ್ನು ಖರ್ಚು ಮಾಡುವುದಕ್ಕಷ್ಟೇ ಸೀಮಿತವಾಗಿರದಿರಲಿ ಎಂಬುದೇ ನಮ್ಮ ಆಶಯ. ಪ್ರಶಾಂತ್ ಎಸ್.ಎನ್ ಅವರ ಕ್ಯಾಮೆರಾದಲ್ಲಿ ಚಿಟ್ಟೆಗಳು ಸೆರೆಯಾಗಿವೆ.

KWR 2 copy

TAGGED:ButterflykarwarPublic TVಕಾರವಾರಚಿಟ್ಟೆಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Operation Sindoor 1
Latest

ಪಹಲ್ಗಾಮ್ ದಾಳಿಯಾಗಿ ನಾಳೆಗೆ 1 ವರ್ಷ – `ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ

Public TV
By Public TV
34 minutes ago
Horse Rider
Latest

ಏನೇ ಪರಿಹಾರ ಕೊಟ್ರೂ ಮಗ ಮರಳಿ ಬರೋದಿಲ್ಲ – ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕುದುರೆ ರೈಡರ್‌ ತಂದೆ ಕಣ್ಣೀರು

Public TV
By Public TV
40 minutes ago
Zameer Ahmed Khan
Bengaluru City

ನಾನು ಜೆಡಿಎಸ್‌ಗೆ ಹೋಗ್ತೀನಿ ಅನ್ನೋದು ಊಹಾಪೋಹ – ಜಮೀರ್ ಅಹ್ಮದ್ ಸ್ಪಷ್ಟನೆ

Public TV
By Public TV
2 hours ago
UP teen murder case
Crime

ಲವ್ವರ್‌ ಜೊತೆ ಬ್ರೇಕಪ್‌ ಮಾಡಿಕೊಳ್ಳಲ್ಲ ಎಂದಿದ್ದಕ್ಕೆ ತಂದೆಯಿಂದ ಮಗಳ ಬರ್ಬರ ಹತ್ಯೆ

Public TV
By Public TV
2 hours ago
SN Narayanaswamy Bangarpet MLA
Bengaluru City

ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ಗೆ ಮನವಿ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
2 hours ago
Sharad Pawar
Latest

ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಆಸ್ಪತ್ರೆಗೆ ದಾಖಲು

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?