Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chikkaballapur

ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದ್ರೆ ನೇಣು ಹಾಕಿಕೊಳ್ಳುತ್ತೇನೆ: ಎಚ್‍ಡಿಕೆಗೆ ಸೋಮಣ್ಣ ಸವಾಲು

Public TV
Last updated: November 29, 2019 5:18 pm
Public TV
Share
3 Min Read
glb v somanna
SHARE

– ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ
– ಎಚ್‍ಡಿಕೆ ವಿರುದ್ಧ ಗುಡುಗಿದ ವಸತಿ ಸಚಿವರು
– ನಾನು ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ

ಚಿಕ್ಕಬಳ್ಳಾಪುರ: ನಾನು ಬಟ್ಟೆ ಕಳ್ಳತನ ಮಾಡಿದ್ದನ್ನ ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಸೋಮಣ್ಣ ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದವನು ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಸಚಿವರು ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ಕಿಡಿಕಾರಿದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಇಲ್ಲ, ನಾಲಿಗೆಗೆ ಹಿಡಿತ ಇಲ್ಲ. ನಾನು ಜನತಾ ಬಜಾರ್‌ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದನ್ನು ಅವರು ದೃಢಪಡಿಸಿದರೆ ನೇಣು ಹಾಕಿಕೊಳ್ಳುತ್ತೇನೆ. ಅಂತಹ ಯಾವುದೇ ಘಟನೆಗಳು ನನ್ನ ಜೀವನದಲ್ಲಿ ನಡೆದಿಲ್ಲ. ನನ್ನ ಜೀವನ ತೆರೆದ ಪುಸ್ತಕ. ಒಂದು ವೇಳೆ ನಾನು ಬಜಾರ್ ನಲ್ಲಿ ಬಟ್ಟೆ ಕದ್ದಿದ್ದೇನೆ ಎನ್ನುವುದನ್ನು ದೃಢಪಡಿಸದಿದ್ದರೆ ಕುಮಾರಸ್ವಾಮಿ ಅವರನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದರು.

V Somanna

ಇಂತಹ ಪಾಪದ ಮಾತುಗಳನ್ನ ಆಡುವುದರಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಿಟ್ ಅಂಡ್ ರನ್ ಅಂತ ಕರೆಯುತ್ತಾರೆ. ಮಾಜಿ ಸಿಎಂ ಆದವರು ಸಂಸ್ಕಾರ ಇಲ್ಲದೆ ಮಾತನಾಡುವುದು ಎಷ್ಟು ಸರಿ ಅಂತ ಅರ್ಥ ಮಾಡಿಕೊಳ್ಳಬೇಕು. ದಿಕ್ಕು ದಿಸೆಯಿಲ್ಲದೆ ಏನೋ ಒಂದು ಹೇಳುವುದು ಎಚ್.ಡಿ.ಕುಮಾರಸ್ವಾಮಿ ಅವರ ಜಾಯಮಾನ. ಆ ತರಹದ್ದು ಏನಾದ್ರೂ ಇದ್ದರೆ, ಧೃಡಪಡಿಸಿದರೆ ಒಂದು ಸೆಕೆಂಡ್ ಕೂಡ ನಾನು ಜೀವಂತವಾಗಿ ಇರುವುದಿಲ್ಲ ಎಂದು ಹೇಳಿದರು.

ಎಚ್‍ಡಿಡಿ ರಾಷ್ಟ್ರದ ಸಂಪತ್ತು:
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಷ್ಟ್ರದ ದೊಡ್ಡ ನಾಯಕರು, ರಾಷ್ಟ್ರದ ಸಂಪತ್ತು. ಅವರು ರಾಜ್ಯ ಹಾಗೂ ನಮ್ಮಂತಹ ನಾಯಕರಿಗೆ ಮಾರ್ಗದರ್ಶನ ಮಾಡಲಿ. ಯಾವುದೇ ಪಕ್ಷಕ್ಕೆ ಅವರು ಸೀಮಿತವಾಗುವುದು ಬೇಡ. ಎಚ್.ಡಿ.ದೇವೇಗೌಡರ ಆಶೀರ್ವಾದ ಎಲ್ಲಿರಿಗೂ ಬೇಕು ಎಂದು ಹೊಗಳಿದರು.

hdd

ಎಚ್.ಡಿ.ದೇವೇಗೌಡ ಅವರನ್ನ ಮುಖ್ಯಮಂತ್ರಿ ಮಾಡಿದಾಗ ಎಚ್.ಡಿಕುಮಾರಸ್ವಾಮಿ ಎಲ್ಲಿದ್ದರು. ಕಾರ್ಪೊರೇಷನ್‍ನಲ್ಲಿ ಗುತ್ತಿಗೆದಾರರಾಗಿದ್ದರು. ದೇವೇಗೌಡರು ಸಿಎಂ ಆಗಬೇಕಾದರೆ ನನ್ನ ಶ್ರಮ ಎಷ್ಟಿತ್ತು. ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿಗಳ ಸಂದೇಶ ಏನಿತ್ತು. ಅದು ನನಗೆ ಗೊತ್ತು. ಈ ಕುಮಾರಸ್ವಾಮಿ ಅವರಿಗೆ ಏನು ಗೊತ್ತು ಎಂದು ಗುಡುಗಿದರು.

ಎಚ್‍ಡಿಡಿ ಕಾಲಿಗೆ ಬಿದ್ದಿದ್ದು ನಿಜ:
ನಾನು ನಮ್ಮ ಅಮ್ಮ-ಅಪ್ಪ, ಗುರುಗಳು ಹಾಗೂ ದೇವೇಗೌಡರ ಕಾಲಿಗೆ ಬಿದ್ದಿದ್ದೇನೆ. ದಸರಾ ಮುಗಿದ ಮೇಲೆ ದೇವೇಗೌಡರು ಸಿಕ್ಕಿದ್ದರು. ಎಂತಹ ಒಳ್ಳೆಯ ಕೆಲಸ ಮಾಡಿದೆ ಅಂತ ಅಭಿನಂದಿಸಿದ್ದರು. ಅವರ ಮಗ ಎನ್ನುವ ಅರ್ಹತೆ ಬಿಟ್ಟರೆ ನಿಮಗೆ ಬೇರೇನು ಅರ್ಹತೆ ಇಲ್ಲ. ಆದರೆ ಬೇರೆ ಯಾರೂ ದೇವೇಗೌಡರ ಹೆಸರು ಹೇಳುವಂತಿಲ್ಲ ಎನ್ನುವ ಅಧಿಕಾರ ನಿಮಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಡುಗಿದರು.

HDK 4

ಮಾಜಿ ಸಿಎಂ ಕುಮಾರಸ್ವಾಮಿ ಅವರು ದೇವೇಗೌಡ ಅವರನ್ನು ಎಷ್ಟರ ಮಟ್ಟಿಗೆ ನಡೆಸಿಕೊಂಡರು ಎನ್ನುವುದು ನನಗೆ ಗೊತ್ತು. ನಮ್ಮ ಕಣ್ಣು ಮುಂದೆಯೇ ನೂರಾರು ನಿದರ್ಶನಗಳಿವೆ. ನಾನು ಅದನ್ನ ಹೇಳುವುಕ್ಕೆ ಹೋಗುವುದಿಲ್ಲ. ನಾನು ಬೆಂಗಳೂರಿಗೆ ಬಂದು 54 ವರ್ಷ, ರಾಜಕೀಯಕ್ಕೆ ಪ್ರವೇಶಿಸಿ 40 ವರ್ಷ ಆಯಿತು. ನಿಮ್ಮಂತ ಲಜ್ಜೆಗೆಟ್ಟ ಕೆಲಸಗಳನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರ ವಿರುದ್ಧ ಕಿಡಿಕಾರಿದರು.

ಎಚ್.ಡಿ.ದೇವೇಗೌಡ ಅವರನ್ನ ನನ್ನ ತಂದೆ ಹಾಗೂ ಹಿರಿಯರಾಗಿಯೂ ನೋಡಿದ್ದೇನೆ. ನನ್ನ ಅವರ ಬಾಂಧವ್ಯ ಚೆನ್ನಾಗಿದೆ. ನೀವು ಅವರ ಮಗ ಆಗದಿದ್ರೇ ಏನಾಗಬಿಡ್ತಿದ್ರೀ? ಅರ್ಥ ಮಾಡಿಕೊಳ್ಳಿ. ನಮಗೆ ನಮ್ಮ ತಂದೆ ತಾಯಿ ಸಂಸ್ಕಾರ ಕಲಿಸಿದ್ದಾರೆ ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

SOMANNA

ಇಲ್ಲಸಲ್ಲದ ಕ್ಷುಲ್ಲಕ ಆರೋಪ ಮಾಡಿ ಇನ್ನೊಬ್ಬರ ಮನಸ್ಸು ನೋಯಿಸುವ ಕೀಳುಮಟ್ಟದ ರಾಜಕಾರಣನೇ ನಿಮಗೆ ಕಂಟಕ. ಅದಕ್ಕೆ ಯಾರೂ ನಿಮ್ಮನ್ನ ನಂಬ್ತಾ ಇಲ್ಲ. ಇಂತಹ ದುರಂಹಕಾರದ ಅವಹೇಳನಕಾರಿಯಾಗಿ ಕೆಟ್ಟಮಟ್ಟದ ರೀತಿಯಲ್ಲಿ ಮಾತನಾಡುವುದು ನಿಲ್ಲಿಸಿ. ನಿಮ್ಮದು ಒಂದಲ್ಲ ನೂರಾರು ಇವೆ. ನಾವೇನಾದರೂ ಹೇಳಿದರೆ ನಿಮ್ಮ ಗೌರವ ಏನಾಗುತ್ತೆ ತಿಳಿದುಕೊಳ್ಳಿ. ಕುಮಾರಸ್ವಾಮಿಯವರೇ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳಿ. ನಾನು ನಿಮಗೆ ಎಷ್ಟು ಸಹಾಯ ಮಾಡಿದ್ದೇನೆ ಎನ್ನುವುದನ್ನು ಅರಿತುಕೊಳ್ಳಿ. ಇಂತಹ ಇಲ್ಲದ ಹೇಳಿಕೆಗಳನ್ನ ಕೊಡಬೇಡಿ. ತಪ್ಪು ಮಾಡಿದ್ದರೆ ಹೇಳಿ. ನನ್ನ ದೇಹತ್ಯಾಗಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

TAGGED:BJP Ministerchikkaballapurh d kumaraswamyjdsPublic TVV.Somannaಉಪ ಚುನಾವಣೆಎಚ್ ಡಿ ಕುಮಾರಸ್ವಾಮಿಚಿಕ್ಕಬಳ್ಳಾಪುರಜೆಡಿಎಸ್ಪಬ್ಲಿಕ್ ಟಿವಿಬಿಜೆಪಿವಿ.ಸೋಮಣ್ಣ
Share This Article
Facebook Whatsapp Whatsapp Telegram

You Might Also Like

Shivamogga
Crime

ಅನ್ಯಕೋಮಿನ ಯುವಕರಿಂದ ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ – ಇಬ್ಬರು ಅರೆಸ್ಟ್‌

Public TV
By Public TV
5 minutes ago
Siddaramaiah mallikarjun kharge
Bengaluru City

ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ – ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಸಿಎಂ?

Public TV
By Public TV
28 minutes ago
Majestic bus stand
Bengaluru City

ಹೈಟೆಕ್ ಆಗಲಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ – 40 ಎಕರೆ ಜಾಗದಲ್ಲಿ ಬಹುಮಾದರಿ ಟ್ರಾನ್ಸ್‌ಪೋರ್ಟ್‌ ಹಬ್!

Public TV
By Public TV
30 minutes ago
Shivamogga
Bengaluru City

ಶಿವಮೊಗ್ಗ | ರಾಗಿಗುಡ್ಡದಲ್ಲಿ ಅನ್ಯಕೋಮಿನ ಯುವಕರ ದುಷ್ಕೃತ್ಯ – ಗಣಪತಿ ವಿಗ್ರಹ, ನಾಗರ ಕಲ್ಲಿಗೆ ಅಪಮಾನ ಆರೋಪ

Public TV
By Public TV
36 minutes ago
PSI NAGARAJAPPA 1
Crime

ಕೌಟುಂಬಿಕ ಕಲಹಕ್ಕೆ ಬೇಸತ್ತು ಪಿಎಸ್‍ಐ ಆತ್ಮಹತ್ಯೆ – ಡೆತ್‍ನೋಟ್‍ನಲ್ಲಿ ಲಾಡ್ಜ್ ಮಾಲೀಕರ ಕ್ಷಮೆಯಾಚನೆ

Public TV
By Public TV
44 minutes ago
Muslim UP
Latest

ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್‌ ಮೈಂಡ್‌ ಸೇರಿ ಇಬ್ಬರು ಅರೆಸ್ಟ್‌

Public TV
By Public TV
59 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?