ಮದ್ಯಕ್ಕಾಗಿ ಹಣ ಕೇಳಿದ ಮಹಿಳೆಯನ್ನು ಜೀವಂತವಾಗಿ ಸುಟ್ಟ

Public TV
1 Min Read
liquor drinking alcohol 837x600 1

-ಸಲಾಕೆಯಿಂದ ಹೊಡೆದು ಜ್ಞಾನತಪ್ಪಿಸಿ ಬೆಂಕಿಯಿಟ್ಟ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮದ್ಯ ಸೇವಿಸಲು ಹಣ ನೀಡುವಂತೆ ಪೀಡಿಸುತ್ತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಕಬ್ಬಿಣದ ಸಲಾಕೆಯಿಂದ ಹೊಡೆದು, ಜೀವಂತವಾಗಿ ಸುಟ್ಟು ಕೊಲೆಗೈದು ವಿಕೃತಿ ಮೆರೆದಿದ್ದಾನೆ.

liquor

ಹೂಗ್ಲಿ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಹೂಗ್ಲಿ ರೈಲು ನಿಲ್ದಾಣದ ಬಳಿಯ ಲೋರ‍್ಪಾರಾ ಪ್ರದೇಶದ ನಿವಾಸಿ ಸಂಜಯ್ ರಾಜಬಂಗ್ಶಿ ಆರೋಪಿ. ಲಕ್ಷ್ಮಿ ಕರ್ಮಾಕರ್(52) ಕೊಲೆಯಾದ ದುರ್ದೈವಿ. ಲಕ್ಷ್ಮಿ ಪಾಳು ಬಿದ್ದಿದ್ದ ರೈಲ್ವೆ ವಸತಿ ಗೃಹದಲ್ಲಿ ವಾಸಿಸುತ್ತಿದ್ದಳು. ಶುಕ್ರವಾರ ರಾತ್ರಿ ಮಹಿಳೆ ಸಂಜಯ್ ಬಳಿ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದಳು. ಎಷ್ಟೇ ಹೇಳಿದರೂ ಹಣ ಕೊಡು ಎಂದು ಕಾಟ ಕೊಡುತ್ತಿದ್ದಳು. ಇದರಿಂದ ಕೋಪಗೊಂಡ ಸಂಜಯ್ ಕಬ್ಬಿಣದ ಸಲಾಕೆಯಿಂದ ಮಹಿಳೆಗೆ ಹೊಡೆದಿದ್ದಾನೆ. ಆ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟು ಕೊಲೆಗೈದಿದ್ದಾನೆ. ಇದನ್ನೂ ಓದಿ:ಕುಡಿಬೇಡ ಎಂದಿದ್ದಕ್ಕೆ ಅಪ್ರಾಪ್ತ ಮಗಳನ್ನೇ ಶೂಟ್ ಮಾಡಿದ ತಂದೆ

money 1

ಈ ಬಗ್ಗೆ ತಿಳಿಯುತ್ತಿದಂತೆ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. ವಿಚಾರಣೆ ವೇಳೆ ತಾನೇ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ:ಹಣ ನೀಡದ್ದಕ್ಕೆ ಪೂಜೆ ಮಾಡುತ್ತಿದ್ದ ತಾಯಿಯನ್ನು ರಾಡ್‍ನಿಂದ ಹೊಡೆದು ಕೊಲೆಗೈದ ಮಗ

ಈ ಹಿಂದೆ ಕೂಡ ಮಹಿಳೆ ಮದ್ಯ ಸೇವಿಸಲು ಹಣಕ್ಕಾಗಿ ಪೀಡಿಸಿದ್ದಳು. ಅ. 28ರಂದು ದುರ್ಗಾ ಪೂಜೆ ವೇಳೆ ನನ್ನ ತಾಯಿ ಬಳಿ ಹಣಕೊಡುವಂತೆ ಪೀಡಿಸಿ, ಅಸಭ್ಯವಾಗಿ ವರ್ತಿಸಿದ್ದಳು, ತಾಯಿಯನ್ನು ನಿಂದಿಸಿದ್ದಳು. ಆದ್ದರಿಂದ ಮಹಿಳೆಯನ್ನು ಕೊಲೆ ಮಾಡಿದೆ ಎಂದು ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *