ಸಾರಾ ಮಹೇಶ್, ವಿಶ್ವನಾಥ್ ಬೆನ್ನಲ್ಲೇ ಮತ್ತೊಂದು ಆಣೆ ಪ್ರಮಾಣಕ್ಕೆ ತಯಾರಿ!

Public TV
1 Min Read
HDK NARAYANA GOWDA

ಮಂಡ್ಯ: ಮಾಜಿ ಸಚಿವರಾದ ಸಾರಾ ಮಹೇಶ್ ಮತ್ತು ವಿಶ್ವನಾಥ್ ಆಣೆ ಪ್ರಮಾಣ ಮುಗಿದ ಬೆನ್ನಲ್ಲೇ ಇದೀಗ ಇನ್ನೊಂದು ಆಣೆ ಪ್ರಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ.

ಅನುದಾನದ ವಿಚಾರದಲ್ಲಿ ಕೆ.ಆರ್ ಪೇಟೆ ಶಾಸಕ ಅನರ್ಹ ಶಾಸಕ ನಾರಾಯಣಗೌಡ ಅವರು ಮಾಜಿ ಸಿ.ಎಂ ಎಚ್‍ಡಿ ಕುಮಾರಸ್ವಾಮಿಯನ್ನು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರಕ್ಕೆ 700 ಕೋಟಿ ಅನುದಾನ ಕೊಟ್ಟಿದ್ದಾರೆ ಅನ್ನೋ ವಿಚಾರಕ್ಕೆ ಆಣೆ ಪ್ರಮಾಣಕ್ಕೆ ಕರೆದಿದ್ದಾರೆ. ಧರ್ಮಸ್ಥಳಕ್ಕೆ ಬಂದು ನನ್ನ ಕ್ಷೇತ್ರಕ್ಕೆ 700 ಕೋಟಿ ರೂ. ಅನುದಾನ ಕೊಟ್ಟಿದ್ದರೆ ಆಣೆ ಮಾಡಲಿ ಎಂದು ಅನರ್ಹ ಶಾಸಕ ಹೇಳಿದ್ದಾರೆ.

mys saramahesh copy

ಒಟ್ಟಿನಲ್ಲಿ ಮೈಸೂರು ಕ್ಷೇತ್ರದ ನಂತರ ಇದೀಗ ಮಂಡ್ಯ ಕ್ಷೇತ್ರಕ್ಕೂ ಆಣೆ ಪ್ರಮಾಣ ಆವರಿಸಿದ್ದು, ಇವರ ರಾಜಕೀಯ ಲಾಭಕ್ಕೆಲ್ಲ ದೇವರನ್ನ ಎಳೆದು ತರೋದು ಯಾಕೆ ಎಂದು ಭಕ್ತರು ಕಿಡಿಕಾರುತ್ತಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಆಣೆ ಸವಾಲು ಹಾಕಿದ್ದ ಹುಣಸೂರಿನ ಅನರ್ಹ ಶಾಸಕ ವಿಶ್ವನಾಥ್ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡದೇ ವಾಪಸ್ಸಾಗಿದ್ದರು. ಆದರೆ ವಿಶ್ವನಾಥ್ ಸವಾಲು ಸ್ವೀಕರಿಸಿದ್ದ ಮಾಜಿ ಸಚಿವ ಸಾ ರಾ ಮಹೇಶ್ ಚಾಮುಂಡಿ ಎದುರು ಪ್ರಮಾಣ ಮಾಡಿದ್ದರು.

.

Share This Article
Leave a Comment

Leave a Reply

Your email address will not be published. Required fields are marked *