ಖತರ್ನಾಕ್ ಖದೀಮರು ಅಂದರ್: 120 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ವಶ

Public TV
1 Min Read
Varthur thieves Arrest

ಬೆಂಗಳೂರು: ಗ್ಯಾಸ್ ಕಟ್ಟರ್ ಬಳಸಿ ಚಿನ್ನದ ಮಳಿಗೆ ಬೀಗ ಹಾಗೂ ಎಟಿಎಂಗಳನ್ನು ಕೊರೆದು ಕನ್ನ ಹಾಕುತ್ತಿದ್ದ ಕಳ್ಳರನ್ನು ಸಿಲಿಕಾನ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಜಗನ್ನಾಥ್ ತಿಮ್ಮಣ್ಣ ಹಾಗೂ ಪ್ರಕಾಶ್ ಎಂ.ಕೆ. ಬಂಧಿತ ಆರೋಪಿಗಳು. ಬಂಧಿತರಿಂದ 120 ಗ್ರಾಂ ಚಿನ್ನ ಹಾಗೂ 1.5 ಕೆಜಿ ಬೆಳ್ಳಿಯನ್ನು ವರ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Varthur Police Station

ಆರೋಪಿಗಳು ನಗರದ ವರ್ತೂರುನ ಮನೆ ಹಾಗೂ ಚಿನ್ನದ ಮಳಿಗೆಯಲ್ಲಿ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ, ಬಂಧಿಸಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ವಿಜಯಪುರದಲ್ಲಿ ಎಂಟಿಎಂ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 454 (ಕಳ್ಳತನ) ಅಡಿ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *