ಮೈಸೂರು: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಪ್ರಚಾರಕ್ಕೆ ಧುಮಕಲಿರುವ ಯಶ್ ಒಂದು ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.
ಸುಮಲತಾ ಅವರ ತಂಡ ದರ್ಶನ್, ಯಶ್ ಪ್ರಚಾರ ಕಾರ್ಯದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಯಶ್ ಕೆ.ಆರ್ ನಗರ ಹೊರತುಪಡಿಸಿ ಮಂಡ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಯಶ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಯಶ್ ಏ.2 ಶ್ರೀರಂಗಪಟ್ಟಣ, ಏ.3 ಶ್ರೀರಂಗಪಟ್ಟಣ, ಏ.4 ಪಾಂಡವಪುರ, ಏ.5 ಮಳವಳ್ಳಿ, ಏ.6 ಮತ್ತು 7 ಯುಗಾದಿ, ಏ.8 ಮಳವಳ್ಳಿ, ಏ.9 ಮಂಡ್ಯ, ಏ.10 ಮಂಡ್ಯ ಮತ್ತು ಮದ್ದೂರು, ಏ.11 ಮದ್ದೂರು, ಏ.12 ನಾಗಮಂಗಲ, ಏ.13 ನಾಗಮಂಗಲ, ಮತ್ತು ಏ.16 ರ್ಯಾಲಿಯಲ್ಲಿ ಪಾಲ್ಗೊಳಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್ ನಗರಕ್ಕೆ ಯಶ್ ಹೋಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಸ್ನೇಹಕ್ಕೆ ತಲೆಬಾಗಿ ಯಶ್ ಕೆ.ಆರ್ ನಗರ ಕ್ಷೇತ್ರಕ್ಕೆ ಪ್ರಚಾರ ಹೋಗಲ್ಲ ಎಂದು ಹೇಳಿದ್ದಾರಾ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಶ್ ಕೆ.ಆರ್ ನಗರದಲ್ಲಿ ಜೆಡಿಎಸ್ನ ಸಚಿವ ಸಾ.ರಾ ಮಹೇಶ್ ಪರ ಪ್ರಚಾರ ಮಾಡಿದ್ದರು. ಇದೇ ಕಾರಣಕ್ಕೆ ಈಗ ಯಶ್ ಅವರು ಸುಮಲತಾ ಪರ ಪ್ರಚಾರಕ್ಕೆ ಕೆ.ಆರ್ ನಗರಕ್ಕೆ ಹೋಗುತ್ತಿಲ್ಲ ಎನ್ನಲಾಗುತ್ತಿದೆ.