ಬೆಳಗಾವಿ(ಚಿಕ್ಕೋಡಿ): ನಾಲ್ಕು ಗೋಡೆಗಳ ನಡುವೆ ಮುಗಿಯಬೇಕಿದ್ದ ವೈಮನಸ್ಸು ಬೀದಿಗೆ ಬಂದು ಗಂಡ ಹೆಂಡತಿ ಜಗಳ ಹಾದಿ ರಂಪಾಟವಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ ತಾಲೂಕಿನ ಜಂಬಗಿ ಗ್ರಾಮದ ಬಾಳಾಸಾಬ್ ವಾಗ್ಮೋರೆ ಎನ್ನುವ ಖಾಸಗಿ ಶಾಲೆಯ ಶಿಕ್ಷಕ ಕಳೆದ ಒಂದುವರೆ ವರ್ಷದ ಹಿಂದೆ ಬೆಳಗಾವಿ ಮೂಲದ ಮಹಿಳೆಯನ್ನು ಮದುವೆಯಾಗಿದ್ದನು. ನಿತ್ಯದ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ತಾಯಿಯ ಜೊತೆ ತವರು ಮನೆಗೆ ಹೊರಟ್ಟಿದ್ದರು. ಈ ವೇಳೆ ಅವರಿಬ್ಬರನ್ನು ತಡೆದ ಬಾಳಾಸಾಬ್ ಗಲಾಟೆ ಮಾಡಿದ್ದಾನೆ.
ಪತಿ ಗಲಾಟೆ ಮಾಡುತ್ತಿರುವುದನ್ನು ನೋಡಿ ನೊಂದ ಮಹಿಳೆ ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ. ಪತಿ- ಪತ್ನಿಯ ಈ ಜಗಳ ಸಾರ್ವಜನಿಕರಿಗೆ ಕೆಲ ಹೊತ್ತು ಮೋಜಿನ ವಿಷಯವಾಗಿತ್ತು. ನಂತರ ಕೆಲ ಪ್ರಜ್ಞಾವಂತರ ಮಧ್ಯಸ್ಥಿಕೆಯಿಂದ ಬಾಳಾಸಾಬ್ನಿಂದ ನೊಂದ ಮಹಿಳೆಯರು ತಮ್ಮ ಊರಿಗೆ ತೆರಳಿದ್ದಾರೆ.
ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ರಂಪಾಟ ಮುಕ್ತಾಯಗೊಳಿಸಿದ ಬಾಳಾಸಾಬ್ ಮನೆಗೆ ಮರಳಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv