ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾದ ಪಾಲಿಕೆ..!

Public TV
1 Min Read
DVG 2

ದಾವಣಗೆರೆ: ಜಿಲ್ಲೆಯನ್ನು ಸ್ಮಾರ್ಟ್ ಸಿಟಿಯಾಗಿ ಘೋಷಣೆಯಾಗಿ ನಾಲ್ಕೂವರೆ ವರ್ಷವಾದ್ರೂ ಇಲ್ಲಿ ಸ್ಮಾರ್ಟ್ ಎಂಬ ಪದಕ್ಕೆ ಅರ್ಥವಿಲ್ಲದಂತಾಗಿದೆ. ಸ್ಮಾರ್ಟ್ ಸಿಟಿ ಬದಲಾಗಿ ಕೊಂಪೆಯಾಗಿ ಸಿಟಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಮಹಾನಗರ ಪಾಲಿಕೆ ಆಪರೇಷನ್ ವರಾಹ ಆರಂಭಿಸಿದ್ದು, ಹಂದಿ ಮಾಲೀಕರಿಗೆ ಶಾಕ್ ಕೊಡಲು ಮುಂದಾಗಿದೆ.

DVG 1

ಸ್ಮಾರ್ಟ್ ಸಿಟಿ ಯೋಜನೆಗೆ ಒಳಪಟ್ಟು ನಾಲ್ಕೂವರೆ ವರ್ಷ ಕಳೆದ್ರೂ ನಗರದಲ್ಲಿ ಹಂದಿಗಳು ತುಂಬಿ ತುಳುಕುತ್ತಿವೆ. ಅಷ್ಟೇ ಅಲ್ಲದೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರಿಂದ ಮಹಾನಗರ ಪಾಲಿಕೆ ಆಯುಕ್ತರು ಹಂದಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಮಾಲೀಕರಿಗೆ ಆರೇಳು ಬಾರಿ ನೋಟಿಸ್ ನೀಡಿದ್ರು. ಆದ್ರೆ, ಮಾಲೀಕರು ತಲೆಕೆಡಿಸಿಕೊಳ್ಳದೇ ಇದ್ದಾಗ ಹಂದಿ ಸೆರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ತಮಿಳುನಾಡಿನ ತಂಡ ಈಗಾಗಲೇ ಹಂದಿ ಹಿಡಿದು ಸ್ಥಳಾಂತರ ಮಾಡ್ತಿದೆ ಅಂತ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ತಿಳಿಸಿದ್ದಾರೆ.

DVG 3

ಹಂದಿ ಮಾಲೀಕರು ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳು ಹಂದಿಗಳನ್ನ ಮಾರಿ ಹಣ ಲೂಟಿ ಹೊಡೀತಿದ್ದಾರೆ ಅಂತಾ ಪರಿಸರ ಪ್ರೇಮಿಯಾಗಿರುವ ಗಿರೀಶ್ ಎಸ್ ದೇವರಮನಿ ಆರೋಪಿಸಿದ್ದಾರೆ.

ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಉದ್ದೇಶದಿಂದ ಆಪರೇಷನ್ ವರಾಹ ಜೋರಾಗಿ ನಡೀತಿದ್ದು, ಭಯದಿಂದಿದ್ದ ಓಡಾಡುತ್ತಿದ್ದ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

DVG

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *