Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು

Bengaluru City

ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದ್ರೂ ಬ್ಯಾಂಕ್ ಖಾತೆಗೆ ಕನ್ನ: ಖದೀಮರ ತಂತ್ರ ಏನು? ಈ ಸುದ್ದಿ ನೀವ್ ಓದ್ಲೇಬೇಕು

Public TV
Last updated: October 16, 2018 5:22 pm
Public TV
Share
3 Min Read
OTP number
SHARE

ಬೆಂಗಳೂರು: ಸ್ಪಾಮ್ ಮೇಲ್ ಕಳುಹಿಸಿ ಜನರ ಮಾಹಿತಿ ಕದ್ದು ಬ್ಯಾಂಕ್ ಖಾತೆಗೆ ಕನ್ನ ಹಾವುದು ಹಳೆಯ ಸಂಗತಿ. ಈಗ ಸೈಬರ್ ಕಳ್ಳರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಹಕರ ಮೊಬೈಲ್‍ಗೆ ಒಟಿಪಿ ಬಂದರೂ ದೂರದಲ್ಲಿದ್ದುಕೊಂಡೇ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಹೌದು, ಬ್ಯಾಂಕ್ ಖಾತೆಯಿಂದಲೇ ಹಣ ಎಗರಿಸುತ್ತಿದ್ದ ಖತರ್ನಾಕ್ ಇಬ್ಬರು ಕಳ್ಳರನ್ನು ಬೆಂಗಳೂರಿನ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರಾಘವೇಂದ್ರ (24) ಹಾಗೂ ರಾಕೇಶ್ ಕುಮಾರ್ (24) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಸ್ವೈಪಿಂಗ್ ಯಂತ್ರ, 5 ಎಟಿಎಂ ಕಾರ್ಡ್, ಒಂದು ಕಾರು, 7 ಮೊಬೈಲ್, ಎರಡು ಹೆಚ್ಚುವರಿ ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Credit Card

ನಕಲಿ ಕಂಪನಿ ಓಪನ್ ಮಾಡಿದ್ರು:
ರಾಘವೇಂದ್ರ ಬಿಕಾಂ ಪದವೀಧರನಾಗಿದ್ದು, ಈ ಹಿಂದೆ ಹಣಕಾಸು ವಹಿವಾಟು ಸಂಬಂಧಿಸಿದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದರಿಂದಾಗಿ ಆನ್‍ಲೈನ್ ಮೂಲಕ ಹಣ ವರ್ಗಾವಣೆ ಬಗ್ಗೆ ಹೆಚ್ಚಿ ಜ್ಞಾನ ಪಡೆದುಕೊಂಡಿದ್ದ. ಆರ್ಥಿಕವಾಗಿ ಬೇಗ ಅಭಿವೃದ್ಧಿ ಹೊಂದಬೇಕು, ಬೇಗನೇ ಹಣಗಳಿಸಬೇಕು ಎನ್ನುವ ಉದ್ದೇಶದಿಂದ ‘ಲೀಡ್ ಮ್ಯಾನೇಜ್ ಮೆಂಟ್’ ಹೆಸರಿನಲ್ಲಿ ನಕಲಿ ಕಂಪೆನಿ ಪ್ರಾರಂಭಿಸಿದ್ದಾನೆ. ಹಣ ವರ್ಗಾವಣೆ ಮಾಡಿಕೊಳ್ಳಲು 2017ರಂದು ಹೊಸೂರು ರಸ್ತೆಯ ಎಸ್‍ಬಿಐ ನಲ್ಲಿ ಲೀಡ್ ಮ್ಯಾನೇಜ್‍ಮೆಂಟ್ ಕಂಪೆನಿ ಹೆಸರಿನಲ್ಲಿ ಖಾತೆ ತೆರೆದಿದ್ದಾನೆ. ಈ ಕೃತ್ಯಕ್ಕೆ ತನ್ನ ಸ್ನೇಹಿತ ರಾಕೇಶ್‍ನನ್ನು ರಾಘವೇಂದ್ರ ಸೇರಿಸಿಕೊಂಡಿದ್ದಾನೆ.

ಗ್ರಾಹಕರಿಗೆ ಕರೆ:
ಇಬ್ಬರು ಸೇರಿದ ನಂತರ ಜಸ್ಟ್ ಡಯಲ್ ಮೂಲಕ ಲಾಜೆಸ್ಟಿಕ್ ಡೀಲರ್ಸ್, ಅರ್ಥ್ ಮೂವರ್ಸ್, ಸೋಲಾರ್ ಡೀಲರ್ಸ್ ಸೇರಿದಂತೆ ಕೆಲವು ವ್ಯಾಪಾರಿಗಳ ದೂರವಾಣಿ ಸಂಖ್ಯೆ ಕಲೆಹಾಕಿದ್ದಾರೆ. ವ್ಯಾಪಾರಿಗಳಿಗೆ ಕರೆ ಮಾಡಿ, ನಾವು ಕಸ್ಟಮರ್ ಲೀಡ್ ಕಂಪನಿ ನಡೆಸುತ್ತಿದ್ದು, ಕಮಿಷನ್ ಆಧಾರದಲ್ಲಿ ಗ್ರಾಹಕರನ್ನು ಹುಡುಕಿಕೊಡುತ್ತೇವೆ ಅಂತಾ ಹೇಳಿಕೊಂಡು, ನಿಮ್ಮನ್ನು ಭೇಟಿಯಾಗಬೇಕು ಅಂತಾ ಕೇಳುತ್ತಿದ್ದರು.

Credit Card 2

ಷರತ್ತು ಹೇಳಿ ಫೋಟೋ ತೆಗೆದ್ರು:
ಆರೋಪಿಗಳ ಕರೆಗೆ ಪ್ರತಿಕ್ರಿಯಿಸಿದ್ದ ವ್ಯಾಪಾರಿಗಳು ಭೇಟಿಗೆ ಸಮಯ ನೀಡುತ್ತಿದ್ದರು. ವ್ಯಾಪಾರಿಗಳ ಬಳಿಗೆ ಹೋಗುತ್ತಿದ್ದ ರಾಘವೇಂದ್ರ ಹಾಗೂ ರಾಕೇಶ್ ಆತ್ಮೀಯವಾಗಿ ಮಾತುಕತೆ ನಡೆಸುತ್ತಿದ್ದರು. ನಮ್ಮ ಕಂಪನಿಯಿಂದ ನಿಮಗೆ ಸೇವೆ ಒದಗಿಸಲು ಕೆಲವು ಷರತ್ತುಗಳಿವೆ. ನಿಮ್ಮ ಬಳಿ ಇರುವ ಎಟಿಎಂ ಕಾರ್ಡ್ ನಿಂದ 200 ರೂ. ಪಾವತಿ ಮಾಡಬೇಕು. ಕಂಪನಿಯ ಫಾರ್ಮ್ ನಲ್ಲಿ ತುಂಬಿ, ಸಹಿ ಮಾಡಬೇಕು ಅಂತಾ ಹೇಳುತ್ತಿದ್ದರು.

ಇಬ್ಬರ ಮಾತಿಗೆ ಮರುಳಾಗುವ ವ್ಯಾಪಾರಿಗಳು ತಮ್ಮ ಎಟಿಎಂ/ ಕ್ರೆಡಿಟ್ ಕಾರ್ಡ್ ಇವರಿಗೆ ನೀಡುತ್ತಿದ್ದರು. ಕಾರ್ಡ್ ಸಿಕ್ಕಿದ ಕೂಡಲೇ ತಮ್ಮ ಸ್ವೈಪಿಂಗ್ ಯಂತ್ರದಿಂದ ಹಣವನ್ನು ಖಾತೆಗೆ ಜಮ ಮಾಡುತ್ತಾರೆ. ಈ ವೇಳೆ ಫಾರ್ಮ್ ಭರ್ತಿ ಮಾಡುವಂತೆ ಹೇಳಿ ವ್ಯಾಪಾರಿಗಳ ಗಮನವನ್ನು ಬೇರೆ ಕಡೆಗೆ ಸೆಳೆದು ಕಾರ್ಡ್ ನ ಎರಡೂ ಬದಿಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಷ್ಟಕ್ಕೆ ಬಿಡದೇ ಅವರ ಬಳಿ ಮೊಬೈಲ್ ಪಡೆದು, ಲೀಡ್ ಮ್ಯಾನೇಜ್ ಮೆಂಟ್ ಆ್ಯಪ್ ಡೌನ್‍ಲೋಡ್ ಹಾಗೂ ‘ಮೈ ಎಸ್‍ಎಂಎಸ್ ಆ್ಯಪ್’ ಗಳನ್ನು ಕೂಡ ಡೌನ್‍ಲೋಡ್ ಮಾಡಿ ಮಸೇಜ್‍ಗಳನ್ನು ಸಿಂಕ್ ಮಾಡಿ ಪಾಸ್‍ವರ್ಡ್ ಪಡೆದು ಅಲ್ಲಿಂದ ಹೊರಡುತ್ತಿದ್ದರು.

debit card

ಅಸಲಿ ಆಟ ಆರಂಭ:
ಆನ್‍ಲೈನ್ ವ್ಯವಹಾರ ಗಳನ್ನು ಡೆಬಿಟ್/ ಕ್ರೆಡಿಟ್ ಕಾರ್ಡ್ ಗಳಿಂದ ಅಥವಾ ಆನ್‍ಲೈನ್ ಖಾತೆಗಳಿಂದ ಮಾಡಬಹುದು. ಹೀಗಾಗಿ ಇವರು ತಮ್ಮ ವ್ಯವಹಾರಗಳನ್ನು ಕಾರ್ಡ್ ಮೂಲಕವೇ ಮಾಡುತ್ತಿದ್ದರು. ಫೋಟೋ ಕ್ಲಿಕ್ಕಿಸಿದ್ದರಿಂದ ಕಾರ್ಡ್ ನ 16 ಸಂಖ್ಯೆ ಜೊತೆಗೆ ವಿವರ ಸಹ ಲಭ್ಯವಾಗುತ್ತದೆ. ಹಿಂದುಗಡೆ ಫೋಟೋ ಕ್ಲಿಕ್ ಮಾಡಿದ್ದರಿಂದ ಸಿವಿವಿ ನಂಬರ್ ಸಹ ಸಿಕ್ಕಿರುತ್ತದೆ. ಈ ನಂಬರ್ ಗಳನ್ನು ಹಾಕಿ ವ್ಯವಹಾರ ಆರಂಭಿಸಿದ ಒಂದನೇ ಸ್ಟೆಪ್ ಮುಗಿದ ಕೂಡಲೇ ಗ್ರಾಹಕರ ಮೊಬೈಲಿಗೆ ಒಟಿಪಿ ಸಂಖ್ಯೆ ಬರುತ್ತದೆ. ಕೂಡಲೇ ಆರೋಪಿ ರಾಘವೇಂದ್ರ ಗ್ರಾಹಕರ ‘ಮೈ ಎಸ್‍ಎಂಎಸ್ ಆ್ಯಪ್’ ಖಾತೆ ಲಾಗಿನ್ ಆಗಿ ಆ ಒಟಿಪಿಯನ್ನು ಪಡೆದು ಪಡೆದು ಖಾತೆಯಿಂದಲೇ ಹಣವನ್ನು ಎಗರಿಸುತ್ತಿದ್ದ.

ಸಿಕ್ಕಿಬಿದ್ದಿದ್ದು ಹೇಗೆ?:
ನಾಗರಬಾವಿ ವ್ಯಕ್ತಿಯೊಬ್ಬರಿಂದ ರಾಘವೇಂದ್ರ ಹಾಗೂ ರಾಕೇಶ್ ಮಾಹಿತಿ ಪಡೆದಿದ್ದರು. ಕೆಲ ದಿನಗಳ ನಂತರ ಮಾಹಿತಿ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 75 ಸಾವಿರ ರೂ. ವರ್ಗಾವಣೆ ಆಗಿದೆ. ಯಾವುದೇ ವ್ಯವಹಾರ ನಡೆಸದೇ ಹಣ ಡ್ರಾ ಆಗಿದ್ದನ್ನು ನೋಡಿ ಅವರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರಿಗೆ ವಂಚಕರ ಈ ಕೃತ್ಯ ಬೆಳಕಿಗೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

debit card

TAGGED:atmB.Com studentcyber crimeMy SMS appPublic TVshivamoggaಎಟಿಎಂಪಬ್ಲಿಕ್ ಟಿವಿಬಿಕಾಂ ವಿದ್ಯಾರ್ಥಿಮೈ ಎಸ್‍ಎಂಎಸ್ ಆ್ಯಪ್ಶಿವಮೊಗ್ಗಸೈಬರ್ ಅಪರಾಧ
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Snehamayi Krishna
Districts

ಸಿಎಂ, ಮತ್ತವರ ಕುಟುಂಬಕ್ಕೆ ಶಿಕ್ಷೆ ಆಗುವುದು ನಿಶ್ಚಿತ: ಸ್ನೇಹಮಹಿ ಕೃಷ್ಣ

Public TV
By Public TV
23 minutes ago
Shirin Sharmin Chaudhury
Latest

ಬಾಂಗ್ಲಾದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Public TV
By Public TV
32 minutes ago
Iran Power Plants
Latest

ಟ್ರಂಪ್‌ಗೆ ಟೆನ್ಷನ್‌ ಕೊಟ್ಟ ಇರಾನ್‌ – ವಿದ್ಯುತ್‌ ಸ್ಥಾವರಗಳ ಸುತ್ತ ಮಾನವ ಸರಪಳಿ ನಿರ್ಮಿಸಲು ದೇಶದ ಯುವ ಸಮೂಹಕ್ಕೆ ಕರೆ

Public TV
By Public TV
49 minutes ago
Illicit Relations
Bengaluru City

ಅನೈತಿಕ ಸಂಬಂಧಕ್ಕೆ ಅಡ್ಡಿ – ಪ್ರೇಯಸಿಯ ಪತಿಯ ಹತ್ಯೆ

Public TV
By Public TV
1 hour ago
Auto Gas
Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
By Public TV
2 hours ago
America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?