ಕಳೆದ ಬಾರಿ ಶಾಸಕನಾಗಿದ್ದೆ, ಈ ಬಾರಿ ಜನ ಬೆಂಬಲವಿಲ್ಲ: ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ

Public TV
1 Min Read
RCR MLA SUICIDE 2

ರಾಯಚೂರು: ಈ ಬಾರಿ ಶಾಸಕನಾಗಲಿಲ್ಲ ಎಂದು ಮಾನಸಿಕ ಅಸ್ವಸ್ಥರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇವರು ದೇವದುರ್ಗದ ಹಿರೇಬೂದೂರು ಗ್ರಾಮದವರಾಗಿದ್ದು, ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿ ಮುಖ್ಯ ರಸ್ತೆ ಬದಿಯ ಮರಕ್ಕೆ ನೇಣು ಹಾಕಿಕೊಳ್ಳಲು ವಿಫಲ ಯತ್ನ ನಡೆಸಿದ್ದಾರೆ. ಕೇಬಲ್ ವಯರ್ ನಿಂದ ನೇಣು ಬಿಗಿದುಕೊಳ್ಳುವುದನ್ನು ನೋಡಿ ಸಾರ್ವಜನಿಕರು ಮಾನಸಿಕ ಅಸ್ವಸ್ಥನ ಪ್ರಾಣ ಉಳಿಸಿದ್ದಾರೆ.

ಕಳೆದ ಬಾರಿ ಶಾಸಕನಾಗಿದ್ದೆ, ಈ ಬಾರಿ ಜನ ಬೆಂಬಲವಿಲ್ಲ. ಶಾಸಕನಾಗದೇ ಬದುಕಿದ್ದರೂ ಸತ್ತಂತೆ ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ ಎಂದು ಹೇಳಿದ್ದಾರೆ. ಕೂಡಲೇ ವೆಂಕಟೇಶ್ ಅವರನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಚಿಕಿತ್ಸೆಗಾಗಿ ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

RCR MLA SUICIDE

Share This Article
Leave a Comment

Leave a Reply

Your email address will not be published. Required fields are marked *