ತುಮಕೂರು: ಅಂಗೈ ಅಗಲ ಜಾಗದಲ್ಲಿ ಇವರು ಮಲಗಿದ್ದನ್ನು ಕಂಡರೆ ಎಂಥವರ ಮನಸ್ಸೂ ಕೂಡಾ ಕರಗದೇ ಇರಲಾರದು. ಮಂಜುನಾಥ್ ಎಂಬ ಅಂಗವಿಕಲ ಕಳೆದ 20 ವರ್ಷಗಳಿಂದ ತುಮಕೂರು ವಿಶ್ವವಿದ್ಯಾಲಯದ ಪಕ್ಕದ ಬಿ.ಎಚ್. ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯಲ್ಲೇ ಮೂವರು ಮಕ್ಕಳೊಂದಿಗೆ ವಾಸವಿದ್ದಾರೆ.
ಚಮ್ಮಾರಿಕೆ ವೃತ್ತಿ ಮಾಡುವ ಇವರು ಮಳೆ-ಬಿಸಿಲು-ಚಳಿ ಎನ್ನದೆ 5 ಅಡಿ ಅಗಲ, 6 ಅಡಿ ಉದ್ದ ಇರುವ ಪುಟ್ಟ ಅಂಗಡಿಯಲ್ಲೇ ಜೀವನ ಸಾಗಿಸ್ತಾ ಇದ್ದಾರೆ. ಮಕ್ಕಳು ಮೇಣದ ಬತ್ತಿಯ ಬೆಳಕಿನಲ್ಲಿ ಓದುವ ಪರಿಸ್ಥಿತಿ. ಪತ್ನಿ ಜಯಲಕ್ಷ್ಮಿ ಎರಡು ವರ್ಷದ ಹಿಂದೆ ತೀರಿಹೋಗಿದ್ದರಿಂದ ಸಂಸಾರದ ಸಂಪೂರ್ಣ ಭಾರ ಮಂಜುನಾಥರ ಮೇಲೆ ಬಿದ್ದಿದೆ. ಚಮ್ಮಾರಿಕೆ ವೃತ್ತಿಯಿಂದ ಬಂದಂತಹ ಅಲ್ಪಸ್ವಲ್ಪ ಹಣದಿಂದ ಮಕ್ಕಳನ್ನು ಓದಿಸ್ತಾರೆ.
- Advertisement 2-
- Advertisement 3-
ಹುಟ್ಟುತ್ತಲೇ ಇವರ ಬಲಗಾಲು ಪೋಲಿಯೋಗೆ ತುತ್ತಾಗಿದೆ. ಹಾಗಾಗಿ ಓಡಾಡಲು ಹಾಗೂ ಕಷ್ಟದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆ ಮಾಡಿಕೊಂಡಿದ್ದರೆ ಮಕ್ಕಳ ವಿದ್ಯಾಭ್ಯಾಸ, ಊಟ-ಬಟ್ಟೆಗೆ ಹಣ ಹೊಂದಿಸೋದು ಕಷ್ಟ. ಹಾಗಾಗಿ ಕಳೆದ 20 ವರ್ಷಗಳಿಂದ ಇದೇ ಪೆಟ್ಟಿಗೆ ಅಂಗಡಿಯಲ್ಲಿ ವಾಸ ಇದ್ದಾರೆ. ಆದ್ರೂ ಇವರಿಗೆ ಸರ್ಕಾರದ ಅಂಗವಿಕಲ ಭತ್ಯೆಯಾಗಲಿ, ಇನ್ನಿತರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ದಿಬ್ಬೂರಿನಲ್ಲಿ ಸರ್ಕಾರದಿಂದ ಕಟ್ಟಿದ ವಸತಿ ಸಂಕೀರ್ಣದಲ್ಲೂ ಇವರಿಗೆ ಮನೆ ಸಿಕ್ಕಿಲ್ಲ. ಸಚಿವ ಜಯಚಂದ್ರ, ಎಸ್ಪಿ, ಡಿಸಿಗಳು ಈ ಹೆದ್ದಾರಿಯಲ್ಲೇ ಸಂಚರಿಸ್ತಾರೆ. ಆದ್ರೂ ಈ ಬಡಪಾಯಿಯ ಕಷ್ಟ ಇವರ ಕಣ್ಣಿಗೆ ಬಿದ್ದಿಲ್ಲ.
- Advertisement 4-
ಮಂಜುನಾಥರಿಗೆ ಯಾವುದೇ ಆಸ್ತಿ-ಪಾಸ್ತಿ ಇಲ್ಲ. ಅವರ ತಂದೆ-ತಾಯಿಗಳು ಕೂಡಾ ಬೀದಿ ಬದಿಯಲ್ಲಿ ಜೀವನ ಸಾಗಿಸ್ತಾ ಇದ್ರು. ಆದ್ರೆ ತಾನೂ ಹೇಗಾದ್ರು ಮಾಡಿ ಸೂರೊಂದನ್ನು ಕಟ್ಟಿಕೊಳ್ಳಬೇಕು ಎಂಬ ಹಂಬಲ ಇದೆ. ಜತೆಗೆ ಮಕ್ಕಳನ್ನು ಓದಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಛಲವು ಇವರಲ್ಲಿದೆ. ಬಡತನ ಎಲ್ಲದಕ್ಕೂ ಅಡ್ಡಿಯಾಗಿದೆ.
https://www.youtube.com/watch?v=xQxmghst0Ps