ಬಾಬಾರ ಬಳಿಯಿಂದ ನಾಟಿ ಔಷಧಿ ಪಡೆದ ಚಿತ್ರದುರ್ಗದ ಪೇದೆ ಸಾವು

Public TV
1 Min Read
POLICE

ಚಿತ್ರದುರ್ಗ: ಮಧುಮೇಹಕ್ಕೆ ನಾಟಿ ಔಷಧ ಪಡೆದು ಕೋಮಾಗೆ ತೆರಳಿದ್ದ ಮುಖ್ಯಪೇದೆ ಮೃತಪಟ್ಟ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಡಿವೈಎಸ್.ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲಿಸ್ ಪೇದೆ ಕಲೀಮುಲ್ಲಾ (43) ಎಂಬವರೇ ಮೃತ ದುರ್ದೈವಿ. ಕಳೆದ ಮೂರು ದಿನಗಳ ಹಿಂದೆ ಶುಗರ್ ಹೆಚ್ಚಾಗಿರುವುದಕ್ಕೆ ನಾಟಿ ಔಷಧಿ ಸೇವಿಸಿದ್ದರು.

CTD PEDE DEATH AV 2

ಮೂರು ದಿನಗಳ ಹಿಂದೆ ಪೇದೆ ಬಾಬಾರೊಬ್ಬರ ಬಳಿ ತೆರಳಿ ಶುಗರ್ ತೀವ್ರಗೊಂಡಿರುವುದಕ್ಕೆ ನಾಟಿ ಔಷಧದ ರೂಪದಲ್ಲಿ ವಿಷಪೂರಿತ ಕಾಡಿನ ಬಳ್ಳಿ ರಸವನ್ನು ಮುಖ್ಯಪೇದೆ ಸೇವಿಸಿದ್ದರು. ಆ ಬಳಿಕ ಅವರು ಪ್ರಜ್ಞೆ ಕಳೆದುಕೊಂಡು ಕೋಮಾಗೆ ತೆರಳಿದ್ದರು.

ಅಂತೆಯೇ ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಪೇದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

CTD PEDE DEATH AV 1

Share This Article
Leave a Comment

Leave a Reply

Your email address will not be published. Required fields are marked *