ನವದೆಹಲಿ: ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದ (NCPI) 20 ಸಂಸದರ ಪೈಕಿ 17 ಮಂದಿ ಬಿಜೆಪಿ ಸೇರಲಿದ್ದಾರೆ ಎಂದು ಟಿಎಂಸಿ (TMC) ಬಂಡಾಯ ನಾಯಕ ಹಾಗೂ ಕೂಚ್ಬಿಹಾರ್ನ ಸಂಸದ ಜಗದೀಶ್ ಚಂದ್ರ ಬರ್ಮಾ ಬಸುನಿಯಾ (Jagadish Chandra Barma Basunia) ತಿಳಿಸಿದ್ದಾರೆ.
ಅಕ್ಟೋಬರ್ನಲ್ಲಿ ನಡೆಯಲಿರುವ ದುರ್ಗಾ ಪೂಜೆಯ ಮೊದಲು ಅಥವಾ ನಂತರ ಎನ್ಸಿಪಿಐ ಸಂಸದರು ಬಿಜೆಪಿ ಸೇರಲಿದ್ದಾರೆಂದು ಬಸುನಿಯಾ ಹೇಳಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ ರಸ್ತೆ, ಸೇತುವೆಗಳ ಹೆಸರು ಬದಲಾವಣೆಗೆ ಹೊಸ ಪ್ರಸ್ತಾವ
ಎನ್ಸಿಪಿಐ (NCPI) ಪಕ್ಷದ ಒಟ್ಟು ಬಲದ ಮೂರನೇ ಎರಡರಷ್ಟು ಭಾಗವನ್ನು ನಾನು ಪ್ರತಿನಿಧಿಸುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಗೆ ಗುರಿಯಾಗುವುದಿಲ್ಲ. 17 ಸಂಸದರು ಒಟ್ಟಾಗಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ಒಟ್ಟು 17 ಸಂಸದರು ಒಟ್ಟಾಗಿ ಬಿಜೆಪಿಗೆ ಸೇರುತ್ತಿದ್ದೇವೆ. 20 ಸದಸ್ಯರ ಪೈಕಿ ಮೂರನೇ ಎರಡರಷ್ಟು ಭಾಗಕ್ಕಿಂತ ಹೆಚ್ಚು ಮಂದಿ ಪಕ್ಷಾಂತರ ಮಾಡುತ್ತಿರುವುದರಿಂದ, ಪಕ್ಷಾಂತರ ನಿಷೇಧ ಕಾಯ್ದೆಯು ನಮಗೆ ಅನ್ವಯಿಸುವುದಿಲ್ಲ ಎಂದಿದ್ದಾರೆ.
ಜೂನ್ 14 ರಂದು, ಟಿಎಂಸಿಯ (TMC) 20 ಬಂಡಾಯ ಸಂಸದರು ಅಷ್ಟಾಗಿ ಪರಿಚಯವಿಲ್ಲದ ಎನ್ಸಿಪಿಐ (NCPI) ಪಕ್ಷದೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿ, ಆಡಳಿತಾರೂಢ ಎನ್ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯಡಿ ರಕ್ಷಣೆ ಪಡೆಯಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತದ ಮಾನದಂಡವನ್ನು ಪೂರೈಸಲು, ಈ 20 ಸಂಸದರ ಪೈಕಿ ಕನಿಷ್ಠ 14 ಮಂದಿಯ ಅಗತ್ಯವಿರುತ್ತದೆ. ಇದನ್ನೂ ಓದಿ: 3 ಸಾವಿರ ಕೋಟಿ ಆಸ್ತಿ – ಭಿಕ್ಷುಕನ ವೇಷ ಧರಿಸಿ ರಸ್ತೆಗಿಳಿದ ಬಿಜೆಪಿ ಶಾಸಕ
ಆದರೆ, ಸಂಸದರಾದ ಅಬು ತಾಹೇರ್ ಖಾನ್, ಖಲೀಲುರ್ ರೆಹಮಾನ್ ಮತ್ತು ಯೂಸುಫ್ ಪಠಾಣ್ ಅವರು ತಮ್ಮ ಕ್ಷೇತ್ರಗಳ ರಾಜಕೀಯ ಮತ್ತು ಆಡಳಿತಾತ್ಮಕ ಸನ್ನಿವೇಶಗಳ ಕಾರಣದಿಂದಾಗಿ ಅಧಿಕೃತವಾಗಿ ಬಿಜೆಪಿಗೆ ಸೇರುವುದಿಲ್ಲ ಎಂದು ಬಸುನಿಯಾ ತಿಳಿಸಿದ್ದಾರೆ. ಬದಲಾಗಿ, ಅವರು ಹೊರಗಿನಿಂದಲೇ ಎನ್ಡಿಎಗೆ (NDA) ಬೆಂಬಲ ನೀಡಲಿದ್ದಾರೆ ಎಂದಿದ್ದಾರೆ.

