ಮಡಿಕೇರಿ: ಫುಟ್ಬಾಲ್ ಪಂದ್ಯ (Football Match) ನಡೆಯುತ್ತಿದ್ದ ಸಂದರ್ಭದಲ್ಲಿ ವೀಕ್ಷಣೆಗೆ ಬಂದಿದ್ದ ಎರಡು ತಂಡಗಳ ಬೆಂಬಲಿತ ಪ್ರೇಕ್ಷಕರ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ.
ವಿರಾಜಪೇಟೆ ನಗರದ (Virajpet City) ತಾಲ್ಲೂಕು ಮೈದಾನದಲ್ಲಿ ಕಂಡಗ ಗ್ರಾಮ ಆಟಗಾರರು ಹಾಗೂ ಕೇರಳ ರಾಜ್ಯದ ಆಟಗಾರರ ನಡುವೆ ಫುಟ್ಬಾಲ್ ಪಂದ್ಯ ಕಳೆದ ಮೂರು ದಿನಗಳಿಂದ ನಡೆಯುತ್ತಿತ್ತು. ಭಾನುವಾರ (ನ.23) ರಾತ್ರಿ ಹೊನಲು ಬೆಳಕಿನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರು ಎರಡು ತಂಡದ ಆಟಗಾರರನ್ನ ಶಿಳ್ಳೆ, ಚಪ್ಪಾಳೆಗಳಿಂದ ಹುರಿದುಂಬಿಸುತ್ತಿದ್ದರು. ಇದನ್ನೂ ಓದಿ: ಕರಾವಳಿ ಕಾಯುವ ʻಸೈಲೆಂಟ್ ಹಂಟರ್ʼ – ಇಂದು ಜಲಾಂತರ್ಗಾಮಿ ವಿರೋಧಿ ಹಡಗು ಸೇರ್ಪಡೆ; ಶತ್ರುಗಳಿಗೆ ನಡುಕ!
ಈ ನಡುವೆ ಕೆಲ ಪ್ರೇಕ್ಷಕರು ಕೇರಳ ಗೆಲುವು ಸಾಧಿಸುತ್ತೆ ಅಂತ, ಇನ್ನೂ ಕೆಲವರು ಕೊಡಗಿನ ಕಂಡಗ ಗ್ರಾಮದ ಆಟಗಾರರೇ ಗೆಲುವು ಸಾಧಿಸುತ್ತಾರೆ ಅಂತ ಚೀರತೊಡಗಿದ್ರು. ಹೀಗಿರುವಾಗ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದೆ. ಕೊನೆಗೆ ರೊಚ್ಚಿಗೆದ್ದು ಎರಡೂ ಗುಂಪಿನವರು ಕುರ್ಚಿ ಎಸೆದಾಡಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ವಿರಾಜಪೇಟೆ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಎರಡೂ ಗುಂಪನ್ನ ಚದುರಿಸಿ, ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ.
ಬಳಿಕ ಪೈನಲ್ ಪಂದ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದಿಢೀರ್ ಈ ಬೆಳವಣಿಗೆಯಿಂದ ವಿರಾಜಪೇಟೆ ನಗರದ ನಾಗರಿಕರು ಆತಂಕಕ್ಕೆ ಒಳಗಾಗಿದ್ರು. ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಕೋಟಿ ದರೋಡೆ ಕೇಸ್ – ಆರೋಪಿಗಳು ಖರ್ಚು ಮಾಡಿದ್ದೇ ಕೇವಲ 1 ಲಕ್ಷ!

