ಬಾಗಲಕೋಟೆ: ಮುಖ್ಯಮಂತ್ರಿಗಳ ವಿರುದ್ಧದ ಆ ಹೇಳಿಕೆಯೇ ನನಗೆ ಮುಳುವಾಯಿತು ಎಂದು ಪಂಚಮಸಾಲಿ ಗುರುಪೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಪ್ರತಿಕ್ರಿಯೆ ನೀಡಿದರು.
ಹುನಗುಂದ ಪಟ್ಟಣದಲ್ಲಿ ಅವರು ಮಾತನಾಡಿದರು. ಮೀಸಲಾತಿ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿಲ್ಲ ಎಂಬ ಹೇಳಿಕೆ ಮುಳುವಾಯ್ತಾ ಎಂಬ ಪ್ರಶ್ನೆಗೆ ಹೌದು ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿಗಳು ನನಗೆ ಆತ್ಮೀಯರು. ನಾನು ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಅವರ ಮನೆಯ ಎದುರು ಪ್ರತಿಭಟನೆ ಮಾಡಿದ್ದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿಲ್ಲ ಅಂತಾ ಹೇಳಿದ್ದೆ, ಅದ್ರಲ್ಲಿ ತಪ್ಪೇನಿದೆ? ಸಿಎಂ ವಿರುದ್ಧ ಆ ಹೇಳಿಕೆಯೇ ನನಗೆ ಬಹುದೊಡ್ಡ ಮುಳುವಾಯಿತು. ಹೋರಾಟವೇ ನನಗೆ ಇಷ್ಟೆಲ್ಲ ಆಗಲು ಕಾರಣವಾಯ್ತು ಎಂದರು. ಇದನ್ನೂ ಓದಿ: ನೀವೆಲ್ಲ ಮಠಕ್ಕೆ ಹೋಗೋಣ ಅಂದ್ರೆ ಬರುತ್ತೇನೆ, ಇಲ್ದಿದ್ರೆ ಭಕ್ತರ ಮನೆಯಲ್ಲೇ ಇರುತ್ತೇನೆ: ಭಾವುಕರಾದ ಜಯ ಮೃತ್ಯುಂಜಯ ಶ್ರೀ
ಕಾಶಪ್ಪನವರ ಜೊತೆಗಿನ ಭಿನ್ನಾಭಿಪ್ರಾಯ ಕುರಿತು ಮಾತನಾಡಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಕಾನೂನಿನ ತೊಡಕುಗಳಾದವು. ಈಗ ಹಿರಿಯರು ಇಬ್ಬರನ್ನ ಕರೆದು ಸರಿ ಮಾಡುತ್ತಾರೆ. ಕಾಶಪ್ಪನವರ ಹಾಗೂ ನಾನು ಗುರು ಶಿಷ್ಯರು. ಅವರು ತಪ್ಪು ತಿಳಿದಿದ್ದಾರೆ ಅಷ್ಟೆ. ಆ ಎಲ್ಲ ಗೊಂದಲಗಳನ್ನ ಪರಿಹರಿಸ್ತೇವೆ. ಕೂಡಲಸಂಗಮದ ಭಕ್ತರೊಂದಿಗೆ ಕಾಶಪ್ಪನವರ ಮಾತನಾಡಿದ್ದಾರೆ. ಅವರ ಮಾತಿನಂತೆ ಕೂಡಲಸಂಗಮ ಭಕ್ತರು ಕರೆಯಲು ಬಂದಿದ್ದಾರೆ. ಈ ಘಟನೆ ನನ್ನ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ ಎಂದು ತಿಳಿಸಿದರು.
ಹೊಸ ಟ್ರಸ್ಟ್ ಮಾಡುವ ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿದ್ದರ ಕುರಿತು ಮಾತನಾಡಿ, ಹೊಸದು ಅಲ್ಲ, ಇದೇ ಟ್ರಸ್ಟ್ನಲ್ಲಿ ಎಲ್ಲ ತಾಲೂಕಿನ ಸದಸ್ಯರನ್ನ ಹಾಕಿಕೊಳ್ಳಿ ಎಂದು ಮುಖಂಡರು ಹೇಳಿದ್ದಾರೆ. ಅದನ್ನು ಹಿರಿಯರು ನಾವು ಸೇರಿ ಸರಿ ಪಡಿಸ್ತೇವೆ. ಕರ್ನಾಟಕದ ಎಲ್ಲ ಮಠ ಮಾನ್ಯಗಳ ಟ್ರಸ್ಟ್ಗೆ ಗುರುಗಳು (ಸ್ವಾಮೀಜಿ) ಅಧ್ಯಕ್ಷರಾಗಿರ್ತಾರೆ. ಆದರೆ, ನನ್ನ ವಿಷಾಲವಾದ ಭಾವನೆಯಿಂದ ಭಕ್ತರು ಅಧ್ಯಕ್ಷರಾಗಿರಲಿ ಅಂತಾ ಬಿಟ್ಟಿದ್ದೇ ತಪ್ಪಾಗಿದೆ ಎಂದು ಬೇಸರಿದರು. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ: ಡಿ.ಕೆ.ಶಿವಕುಮಾರ್
ನನಗೇನೂ ಆಸೆಯೇ ಇಲ್ಲ. ಆಸ್ತಿ, ಟ್ರಸ್ಟ್ ಹಾಗೂ ಇದನ್ನ ಹಿಡಕೊಂಡು ಅವರು ಸಂಪೂರ್ಣವಾಗಿ ಬೆಳೆಯಲಿ. ಅವರ ಬೆಳವಣಿಗೆಯನ್ನ ನೋಡಿ ನಾನು ಖುಷಿ ಪಡ್ತೇನೆ. ಮಠದಲ್ಲೇ ಇರ್ತೇನೆ, ಮಠ ಕಾರ್ಯಕ್ಷೇತ್ರ, ಪ್ರವಾಸ ನಿರಂತರ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.