Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

Latest

ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

Public TV
Last updated: July 4, 2025 3:45 pm
Public TV
Share
3 Min Read
Rahul R Singh
SHARE

ನವದೆಹಲಿ: ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳಲ್ಲಿ ಚೀನಾದ (China) ಆಕ್ರಮಣಕಾರಿ ಚಟುವಟಿಕೆಗಳು, ಪಾಕಿಸ್ತಾನದಿಂದ (Pakistan) ನಿರಂತರ ಉಗ್ರವಾದದ ಬೆಂಬಲ, ಮತ್ತು ಟರ್ಕಿಯಿಂದ (Turkey) ರಾಜತಾಂತ್ರಿಕ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಸಂಭವನೀಯ ಸಹಕಾರವು ಭಾರತಕ್ಕೆ ಸವಾಲು ಒಡ್ಡುತ್ತಿದೆ. ಒಂದು ಗಡಿಯಲ್ಲಿ ಮೂರು ವಿರೋಧಿಗಳ ಸಂಯೋಜಿತ ಕಾರ್ಯತಂತ್ರವು ಭಾರತದ ಭದ್ರತೆಗೆ ಬೆದರಿಕೆಯಾಗಿದೆ ಎಂದು ಡೆಪ್ಯೂಟಿ ಚೀಫ್ ಆಫ್ ಆರ್ಮಿ ಸ್ಟಾಫ್ ರಾಹುಲ್ ಆರ್‌. ಸಿಂಗ್ (Rahul R Singh) ಕಳವಳ ವ್ಯಕ್ತಪಡಿಸಿದರು.

Operation Sindoor Tribute

ಹೊಸ ಯುಗದ ಮಿಲಿಟರಿ ತಂತ್ರಜ್ಞಾನಗಳ ಕುರಿತು FICCI ಆಯೋಜಿಸಿದ್ದ ಉನ್ನತ ಮಟ್ಟದ ರಕ್ಷಣಾ ಕಾರ್ಯಕ್ರಮದಲ್ಲಿ (New Age Military Technologies) ಮಾತನಾಡಿದ ಅವರು, ಪಾಕಿಸ್ತಾನ, ಚೀನಾ ಮತ್ತು ಟರ್ಕಿ ನಡುವಿನ ಬೆಳೆಯುತ್ತಿರುವ ಮಿಲಿಟರಿ ಸಹಯೋಗದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಕಂಡುಬಂದ ಆಧುನಿಕ ಯುದ್ಧ ಸವಾಲುಗಳ ಬಳಿಕ ಭಾರತವು ತನ್ನ ವಾಯು ರಕ್ಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?

Operation Sindoor AK Bharti Copy 2

ಆಪರೇಷನ್ ಸಿಂಧೂರ ಸಮಯದಲ್ಲಿ, ಪಾಕಿಸ್ತಾನವು ಚೀನಾದಿಂದ ನೇರ ಗುಪ್ತಚರ ಮಾಹಿತಿ ಪಡೆಯುತ್ತಿತ್ತು ಮತ್ತು ಭಾರತದ ನಿರ್ಣಾಯಕ ಮಿಲಿಟರಿ ನಿಯೋಜನೆಗಳ ಕುರಿತು ನೈಜ-ಸಮಯದ ಮಾಹಿತಿಯನ್ನು ಚೀನಾ ಒದಗಿಸುತ್ತಿತ್ತು. ಡಿಜಿಎಂಒ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗ, ನಮ್ಮ ಪ್ರಮುಖ ನೆಲೆಗಳ ಮಾಹಿತಿ‌ ಚೀನಾ ನೀಡಿತ್ತು ಎಂದು ಪಾಕಿಸ್ತಾನವು ಬಹಿರಂಗವಾಗಿ ಹೇಳಿದೆ. ಪಾಕಿಸ್ತಾನ ಮತ್ತು ಚೀನಾ ನೈಜ ಸಮಯದಲ್ಲಿ ಹೇಗೆ ಸಮನ್ವಯ ಸಾಧಿಸುತ್ತಿವೆ ಎಂಬುದಕ್ಕೆ ಈ ಪರಿಸ್ಥಿತಿ ಸ್ಪಷ್ಟ ಉದಾಹರಣೆಯಾಗಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

China Pakistan 2

ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಕೂಡ ಗಮನಾರ್ಹ ಬೆಂಬಲ ನೀಡಿದೆ. ಟರ್ಕಿ ಬೇರಕ್ತಾರ್ ಡ್ರೋನ್‌ಗಳು ಮತ್ತು ಹಲವಾರು ಇತರ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಮತ್ತು ನೆಲದ ಮೇಲೆ ತರಬೇತಿ ಪಡೆದ ಸೈನಿಕರನ್ನು ಪೂರೈಸಿದೆ. ವಿರೋಧಿಗಳು ಮುಂದುವರಿದ ಡ್ರೋನ್ ತಂತ್ರಜ್ಞಾನದ ಬಳಕೆಯು ಆಧುನಿಕ ಯುದ್ಧಭೂಮಿಗಳಿಗೆ ಸಂಕೀರ್ಣತೆ ಹೆಚ್ಚಿಸಿದೆ, ಇದು ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದರು. ಇದನ್ನೂ ಓದಿ: ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

TURKEY PRECIDENT

ಭಾರತವು ಒಂದೇ ಗಡಿಯಲ್ಲಿ ಮೂರು ವಿರೋಧಿಗಳೊಂದಿಗೆ ವ್ಯವಹರಿಸುತ್ತಿದೆ, ಪಾಕಿಸ್ತಾನವು ಮುಂಚೂಣಿಯಲ್ಲಿತ್ತು, ಚೀನಾ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿತ್ತು ಮತ್ತು ಟರ್ಕಿಯ ಒಳಗೊಳ್ಳುವಿಕೆ ಸ್ಪಷ್ಟವಾಗಿತ್ತು. ಪಾಕಿಸ್ತಾನದ ಮಿಲಿಟರಿ ಹಾರ್ಡ್‌ವೇರ್‌ನಲ್ಲಿ ಶೇ. 81 ರಷ್ಟು ಚೀನಾದಿಂದಲೇ ಬರುತ್ತಿದೆ. ಪಾಕಿಸ್ತಾನವನ್ನು ಚೀನಾದ ರಕ್ಷಣಾ ತಂತ್ರಜ್ಞಾನದ ಪರೀಕ್ಷಾ ಮೈದಾನವನ್ನಾಗಿ ಪರಿವರ್ತಿಸಿದೆ. ಚೀನಾ ತನ್ನ ಶಸ್ತ್ರಾಸ್ತ್ರಗಳನ್ನು ಇತರ ಶಸ್ತ್ರಾಸ್ತ್ರಗಳ ವಿರುದ್ಧ ಪರೀಕ್ಷಿಸಲು ವೇದಿಕೆ ಮಾಡಿಕೊಂಡಿದೆ.

ಕಾರ್ಯಾಚರಣೆಯ ಸಮಯದಲ್ಲಿ ನಮ್ಮ ವಾಯು ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿದೆ. ಆದರೆ ಮುಂದಿನ ಬಾರಿ ಭಾರತದ ಜನಸಂಖ್ಯಾ ಕೇಂದ್ರಗಳನ್ನು ಗುರಿಯಾಗಿಸಬಹುದು. ಈ ಬಾರಿ ನಮ್ಮ ಜನಸಂಖ್ಯಾ ಕೇಂದ್ರಗಳನ್ನು ಸಂಪೂರ್ಣವಾಗಿ ಗಮನಿಸಲಾಗಿಲ್ಲ, ಆದರೆ ಮುಂದಿನ ಬಾರಿ, ನಾವು ಅದಕ್ಕೆ ಸಿದ್ಧರಾಗಿರಬೇಕು. ಡ್ರೋನ್‌ಗಳ ಹೆಚ್ಚುತ್ತಿರುವ ಬೆದರಿಕೆ ಮತ್ತು ಆಧುನಿಕ ಯುದ್ಧ ತಂತ್ರಗಳನ್ನು ಎದುರಿಸಲು ಬಲಿಷ್ಠ, ತಾಂತ್ರಿಕವಾಗಿ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಕರೆ ನೀಡಿದರು. ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯೂಟರ್ನ್ – ಅವಧಿ ಮೀರಿದ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧ ಆದೇಶ ವಾಪಸ್

TAGGED:chinaindiaindian armyOperation SindoorpakistanRahul R Singhturkeyಆಪರೇಷನ್‌ ಸಿಂಧೂರಚೀನಾಟರ್ಕಿಪಾಕಿಸ್ತಾನಭಾರತಭಾರತೀಯ ಸೇನೆರಾಹುಲ್‌ ಆರ್‌. ಸಿಂಗ್‌
Share This Article
Facebook Whatsapp Whatsapp Telegram

Cinema news

Rashmika Mandanna Mysaa
ರಶ್ಮಿಕಾ ಮಂದಣ್ಣ `ಮೈಸಾ’ ಸಿನಿಮಾದ ಮೊದಲ ಗ್ಲಿಂಪ್ಸ್‌ ರಿಲೀಸ್
Cinema Latest South cinema Top Stories
Allu Arjun Trivikram 3
ಸಾವಿರ ಕೋಟಿ ಬಜೆಟ್‌ನಲ್ಲಿ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ..!
Cinema Latest Top Stories
Rakshita Prem
ಸುದೀಪ್ ಯುದ್ಧದ ಮಾತು : ವಿಜಯಲಕ್ಷ್ಮಿ ತಿರುಗೇಟು ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?
Cinema Latest Sandalwood Top Stories
Jogi Prem
ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ಸ್ ವಾರ್ : ನಿರ್ದೇಶಕ ಪ್ರೇಮ್ ಹೇಳಿದ್ದೇನು?
Cinema Latest Sandalwood Top Stories

You Might Also Like

Unnao Rape Survivor Met Rahul Gandhi
Latest

ರಾಹುಲ್‌ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

Public TV
By Public TV
36 minutes ago
R Ashoka 1
Bengaluru City

ಸಿದ್ದರಾಮಯ್ಯ ಅಧಿಕಾರ ಕೊಡಲ್ಲ, ಡಿ.ಕೆ.ಶಿವಕುಮಾರ್ ದೇವಸ್ಥಾನ ಬಿಡಲ್ಲ: ಅಶೋಕ್ ವ್ಯಂಗ್ಯ

Public TV
By Public TV
60 minutes ago
R Ashok 1
Bengaluru City

ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯ್ತು? ಅತಿದೊಡ್ಡ ಸ್ಕ್ಯಾಂಡಲ್: ಅಶೋಕ್

Public TV
By Public TV
2 hours ago
vikalpa movie
Cinema

ನುರಿತ ಕಲಾವಿದರ ಸಂಗಮದಲ್ಲಿ ಮೂಡಿದ ವಿಕಲ್ಪ ಚಿತ್ರ

Public TV
By Public TV
2 hours ago
Sabarimala Gold Theft Case Roddam Jewels
Bellary

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ – ರೊದ್ದಂ ಜ್ಯುವೆಲ್ಸ್ ಮೇಲೆ ಕೇರಳ ಎಸ್‌ಐಟಿ ದಾಳಿ

Public TV
By Public TV
2 hours ago
d.k.shivakumar
Karnataka

ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರು ನಿಗದಿ ಮಾಡಲು ಡಿಕೆಶಿ ಮನವಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?