Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

Latest

ಶುಕ್ರ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ವಿಜ್ಞಾನಿಗಳು ಹೇಳೋದೇನು?

Public TV
Last updated: December 15, 2024 8:19 pm
Public TV
Share
2 Min Read
Earth and venus 1
SHARE

ಬಹಳ ಹಿಂದಿನಿಂದಲೂ ಶುಕ್ರ ಗ್ರಹವನ್ನು ಭೂಮಿಯಂತೆಯೇ ಇರುವ ಇನ್ನೊಂದು ಅವಳಿ ಗ್ರಹ ಎಂದು ವಿಜ್ಞಾನಿಗಳು ನಂಬಿದ್ದರು. ಜೊತೆಗೆ ಈ ಗ್ರಹ ಮಾನವ ವಾಸಕ್ಕೆ ಯೋಗ್ಯವಾಗಿದೆ ಎಂದು ಕೂಡ ವಿಶ್ವಾಸವನ್ನು ಹೊಂದಿದ್ದರು. ಈ ಕುರಿತು ವಿಜ್ಞಾನಿಗಳು ಹೇಳುವುದೇನು? ಮಾಹಿತಿ ಇಲ್ಲಿದೆ.

ಶುಕ್ರ ಗ್ರಹವನ್ನು ಮೊದಲು ಭೂಮಿಯ ಅವಳಿ ಗ್ರಹವೆಂದು ನಂಬಿದ್ದರು. ಮೊದಲು ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಶುಕ್ರ ಗ್ರಹ ಮಾನವ ಜೀವನ ಸಾಗಿಸಲು ಬೆಂಬಲ ನೀಡುತ್ತದೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ನಂಬಿಕೆಗೆ ವಿರುದ್ಧವಾಗಿ ಪರಿಣಮಿಸಿದ್ದು, ಶುಕ್ರ ಗ್ರಹ ಜನರ ಜೀವನಕ್ಕೆ ಸೂಕ್ತವಾಗಿಲ್ಲ ಎನ್ನುವುದನ್ನು ಬಿಂಬಿಸಿದೆ. ಜೊತೆಗೆ ಶುಕ್ರ ಗ್ರಹದಲ್ಲಿ ಜ್ವಾಲಾಮುಖಿಗಳಿಂದ ಬಿಡುಗಡೆಯಾದ ಅನಿಲವನ್ನು ಆಧರಿಸಿ ಸಂಶೋಧನೆ ಮಾಡಿದಾಗ ಮಾನವನ ವಾಸ ಇಲ್ಲಿ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

ನೀರಿನ ಪ್ರಮಾಣ ಹೇಗಿದೆ?
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳುವಂತೆ, ಶುಕ್ರ ಗ್ರಹದ ಒಳಭಾಗವು ಅತ್ಯಂತ ಶುಷ್ಕವಾಗಿದ್ದು, ವರದಿಯಂತೆ ಇದು ಯಾವತ್ತೂ ನೀರನ್ನು ಹೊಂದಿರಲೇ ಇಲ್ಲ ಎಂದು ತಿಳಿಸಿದೆ. ವಾತಾವರಣದಲ್ಲಿರುವ ರಾಸಾಯನಿಕವನ್ನು ಸಂಯೋಜನೆಯ ಪರಿಶೀಲನೆ ನಡೆಸಿದಾಗ, ಅದು ಜ್ವಾಲಾಮುಖಿ ಸ್ಫೋಟದಿಂದ ಬಿಡುಗಡೆಯಾದ ಅನಿಲ ಎಂದು ತಿಳಿದುಬಂದಿದೆ.

venus

ಈ ಜ್ವಾಲಾಮುಖಿ ಅನಿಲಗಳು ಕೇವಲ 6% ನೀರಿನ ಆವಿಯನ್ನು ಹೊಂದಿರುತ್ತವೆ. ಇದು ಭೂಮಿಯಿಂದ ಹೊರಸೂಸಲ್ಪಡುವ ಅನಿಲಕ್ಕಿಂತ ತೀವ್ರವಾಗಿ ಭಿನ್ನವಾಗಿದ್ದು, ಅದು 60% ನೀರಿನ ಆವಿ ಹೊಂದಿರುತ್ತದೆ. ಇದು ಗ್ರಹದ ಕೆಳಪದರಿನಲ್ಲಿ ನೀರಿನ ಕೊರತೆಯನ್ನು ಸೂಚಿಸುತ್ತದೆ.

ಈ ಹಿಂದೆ ಗ್ರಹದಲ್ಲಿ ನೀರಿತ್ತಾ?
ಒಂದು ಸಿದ್ಧಾಂತದ ಪ್ರಕಾರ, ಶತಕೋಟಿ ವರ್ಷಗಳ ಹಿಂದೆ ಗ್ರಹವು ಅದರ ಮೇಲ್ಮೈಯಲ್ಲಿ ನೀರಿನಿಂದ ಹಾಗೂ ಸಮಶೀತೋಷ್ಣ ಹವಾಮಾನದಿಂದ ಕೂಡಿತ್ತು ಎನ್ನಲಾಗಿತ್ತು. ಆದರೆ ಬಳಿಕ ಹಸಿರುಮನೆ ಪರಿಣಾಮಕ್ಕೆ ತುತ್ತಾಗಿ ಬಿಸಿ ಹವಾಮಾನಕ್ಕೆ ತಿರುಗಲಾರಂಭಿಸಿತು. ಇದು ಅಲ್ಲಿನ ನೀರಿನ ಪ್ರಮಾಣವನ್ನು ಕ್ರಮೇಣ ಕಡಿಮೆಯಾಗಿಸಿತು.

ಈಗ ಶುಕ್ರ ಗ್ರಹದ ಸ್ಥಿತಿ ಹೇಗಿದೆ?
ಶುಕ್ರ ಗ್ರಹದ ಹವಾಮಾನವು ವಿಪರೀತ ಉಷ್ಣತೆಯಿಂದ ಕೂಡಿದೆ. ಭೂಮಿಯ ತಾಪಮಾನಕ್ಕೆ ಹೋಲಿಸಿದರೆ ಅಲ್ಲಿನ ತಾಪಮಾನ 90 ಪಟ್ಟು ಹೆಚ್ಚಾಗಿದೆ. ಅಲ್ಲಿ 465 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಕೂಡಿರುತ್ತದೆ. ಮೊದಲಿನ ಸಂಶೋಧನೆಯ ಪ್ರಕಾರ ಶುಕ್ರ ಗ್ರಹದಲ್ಲಿನ ತಾಪಮಾನವು ದೀರ್ಘಕಾಲ ಹೀಗೆಯೇ ಇರುವುದಿಲ್ಲ ಎಂದು ನಂಬಿದ್ದರು ಆದರೆ ಕಾಲಾನಂತರದಲ್ಲಿ ಇದು ವಿಭಿನ್ನವಾಗಿ ಬದಲಾಗಲು ಪ್ರಾರಂಭವಾಯಿತು. ಇನ್ನೂ ಇದಕ್ಕೆ ವಿರುದ್ಧವಾಗಿ, ಸೂರ್ಯನಿಂದ ದೂರದಲ್ಲಿರುವ ಮಂಗಳ ಗ್ರಹವು ವಿಭಿನ್ನ ಕಥೆಯನ್ನು ಹೇಳುತ್ತದೆ. ಮಂಗಳ ಗ್ರಹವು ಶತಕೋಟಿ ವರ್ಷಗಳ ಹಿಂದೆ ಸಾಗರವನ್ನು ಹೊಂದಿರಬಹುದೆಂದು ಪುರಾವೆಗಳು ಸೂಚಿಸುತ್ತವೆ, ಜೊತೆಗೆ ಅದರ ಕೆಳಪದರದಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ತಿಳಿಸುತ್ತದೆ.

21ನೇ ಶತಮಾನದಲ್ಲಿ ವಿಜ್ಞಾನಿಗಳಿಗೆ ಶುಕ್ರದ ಪರಿಶೋಧನೆಯು ಪ್ರಮುಖ ಕೇಂದ್ರವಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಶುಕ್ರನ ಭೌಗೋಳಿಕ ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು 2030ಕ್ಕೆ ಡಿಎವಿಐಎನ್‌ಸಿಐ ಮಿಷನ್ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಇನ್ನೂ ಭಾರತದ ಬಾಹ್ಯಾಕಾಶ ಸಂಸ್ಥೆ (ISRO) ಗ್ರಹವನ್ನು ಅಧ್ಯಯನ ಮಾಡಲು ಶುಕ್ರಯಾನ್ ಮಿಷನ್ ಎಂದೂ ಕರೆಯಲ್ಪಡುವ ಶುಕ್ರ ಆರ್ಬಿಟರ್ ಮಿಷನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.

ಈ ಸಂಶೋಧನೆಗಳ ಹೊರತಾಗಿಯೂ, ಶುಕ್ರ ಗ್ರಹವನ್ನು ಅಧ್ಯಯನ ಮಾಡುವುದರಿಂದ ಗ್ರಹಗಳ ಅಭಿವೃದ್ಧಿ ಮತ್ತು ಜೀವನಕ್ಕೆ ಅಗತ್ಯವಾದ ಪರಿಸ್ಥಿತಿಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಬಹುದು. ಇದಲ್ಲದೆ, ಶುಕ್ರ ಅಧ್ಯಯನದ ಫಲಿತಾಂಶಗಳು ನಮ್ಮ ಸೌರವ್ಯೂಹದ ಆಚೆಗಿನ ಗ್ರಹಗಳ ಸಂಶೋಧನೆಯ ಮೇಲೆ ಪ್ರಭಾವ ಬೀರುತ್ತವೆ.

TAGGED:earthISRONASAResearchScientistsVenus
Share This Article
Facebook Whatsapp Whatsapp Telegram

Cinema news

Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories

You Might Also Like

Sharanprakash Patil 1
Kalaburagi

ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ದ್ವಿಗುಣ: ಶರಣಪ್ರಕಾಶ ಪಾಟೀಲ್

Public TV
By Public TV
5 hours ago
Rehan Ahmed Will Jacks
Cricket

16 ಎಸೆತಗಳಲ್ಲಿ 44 ರನ್‌ – ಇಂಗ್ಲೆಂಡಿಗೆ ರೋಚಕ ಜಯ, ಸೋತರೂ ನ್ಯೂಜಿಲೆಂಡಿಗಿದೆ ಸೆಮಿ ಅವಕಾಶ

Public TV
By Public TV
5 hours ago
temple theft
Chamarajanagar

ಗುಂಡ್ಲುಪೇಟೆ ತಾಲೂಕಿನ 6 ದೇವಸ್ಥಾನಗಳಲ್ಲಿ ಕಳವು

Public TV
By Public TV
6 hours ago
Hindu activist fatally attacked by Muslim youths in Napoklu Madikeri
Districts

ನಾಪೋಕ್ಲಿನಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಅನ್ಯಕೋಮಿನ ಯುವಕರಿಂದ ಮಾರಣಾಂತಿಕ ಹಲ್ಲೆ

Public TV
By Public TV
7 hours ago
Bagalkot stone pelting case Women protest against police arrest of Hindu youth
Bagalkot

ಬಾಗಲಕೋಟೆ ಕಲ್ಲು ತೂರಾಟ ಕೇಸ್‌ | ಹಿಂದೂ ಯುವಕರ ಬಂಧನ ವೇಳೆ ಪೊಲೀಸರ ಅಡ್ಡಗಟ್ಟಿ ಪ್ರತಿಭಟಿಸಿದ ಮಹಿಳೆಯರು

Public TV
By Public TV
7 hours ago
surat suicide
Crime

3 ಪುಟಗಳ ಡೆತ್‌ನೋಟ್‌ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?