Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ರಾಯಚೂರಿನಲ್ಲಿ ವಯೋವೃದ್ಧರ ಗ್ರಾಮಗಳ ನಿರ್ಮಾಣ : ಖಾತ್ರಿಯಿಲ್ಲದ ಉದ್ಯೋಗದಿಂದ ಯುವಕರು ನಗರಪಾಲು

Public TV
Last updated: March 10, 2017 8:09 pm
Public TV
Share
3 Min Read
RCR 10 3 17 BARA GULE 4
SHARE

-ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ ವೈಫಲ್ಯ
-ಕೆಲಸವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೊರಟ ಜನ

ವಿಜಯ್ ಜಾಗಟಗಲ್

ರಾಯಚೂರು: ಹೆಗಲ ಮೇಲೊಂದು ಕೈಯಲ್ಲೊಂದು ಮೂಟೆ ಹಿಡಿದು ಬೆಂಗಳೂರು, ಪುಣೆ, ಮುಂಬೈ ಬಸ್‍ಗಾಗಿ ಜನ ಕಾಯುತ್ತಿದ್ದಾರೆ. ಈಗ ಬಸ್ ಹತ್ತಿದವರು ಕೈಯಲ್ಲೊಂದಿಷ್ಟು ಕಾಸು ಸಂಪಾದಿಸಿಕೊಂಡು ಎರಡೋ, ಮೂರೋ ತಿಂಗಳ ಬಳಿಕವಷ್ಟೇ ತಮ್ಮ ಗ್ರಾಮಗಳಿಗೆ ಮರುಳುತ್ತಾರೆ. ಅಲ್ಲಿಯವರೆಗೆ ಇಡೀ ಗ್ರಾಮವನ್ನ ಕಾಯುವವರು ವಯೋವೃದ್ಧರು ಹಾಗೂ ಬಾಗಿಲಿಗೆ ಹಾಕಿದ ಬೀಗಗಳು ಮಾತ್ರ. ಇವರು ಮರಳಿ ಬರುವವರೆಗೆ ಮನೆಗಳಲ್ಲಿ ಯಾವ ಶುಭಕಾರ್ಯಗಳೂ ಇಲ್ಲ. ಯಾಕಂದ್ರೆ ಇವರ ಬಳಿ ಮೂರು ಹೊತ್ತು ಸರಿಯಾಗಿ ಊಟಮಾಡಲು ಸಹ ಹಣವಿಲ್ಲ. ಇದು ರಾಯಚೂರಿನ ಗ್ರಾಮೀಣ ಭಾಗದ ಕೃಷಿ ಕೂಲಿಕಾರ್ಮಿಕರು ಹಾಗೂ ಸಣ್ಣ ಮತ್ತು ಅತೀಸಣ್ಣ ರೈತರ ಪ್ರತಿ ವರ್ಷದ ಪರಿಸ್ಥಿತಿ.

RCR 10 3 17 BARA GULE 9

ಕಳೆದ ನಾಲ್ಕೈದು ವರ್ಷಗಳಿಂದ ಬೆಂಬಿಡದೆ ಭೂತದಂತೆ ಕಾಡುತ್ತಿರುವ ಬರಗಾಲ ರೈತರನ್ನ ಇನ್ನಷ್ಟು ಬಡತನಕ್ಕೆ ತಳ್ಳುತ್ತಿದ್ದು ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ಜನ ಬೇಸಿಗೆ ಆರಂಭದಲ್ಲೆ ನಗರ ಪ್ರದೇಶಗಳಲ್ಲಿನ ಕೂಲಿ ಕೆಲಸಗಳ ಕಡೆ ಆಕರ್ಷಿತರಾಗುತ್ತಿದ್ದಾರೆ. ಆದ್ರೆ ಗುಳೆ ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಶುರುವಾದ ಕಾಮ್ ಮಾಂಗೋ ಅಭಿಯಾನ ಸಹ ಗ್ರಾಮೀಣ ಜನರ ಕೈಹಿಡಿದಿಲ್ಲ. ಬರಗಾಲದಲ್ಲಿ ಕೆಲಸವಿಲ್ಲದೆ ಗುಳೆ ಹೊರಡುವ ಜನರಿಗೆ ಕೆಲಸ ನೀಡಲು ಅರ್ಜಿ ಕೇಳಿದ ಅಭಿಯಾನ ಸೋತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದ ಕೊರತೆಯಿಂದ ಹಳ್ಳ ಹಿಡಿದಿದೆ.

RCR 10 3 17 BARA GULE 2

ರಾಯಚೂರು ತಾಲೂಕಿನ ಯಾಪಲದಿನ್ನಿ, ಆತ್ಕೂರು, ಉಡುಮಗಲ್-ಖಾನಪುರ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಅಡಿ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ. ಇನ್ನು ಅರ್ಜಿ ಸ್ವೀಕಾರವಾದ ಕಡೆಗಳಲ್ಲಿ ಕಾಮಗಾರಿ ಮಾಡಿದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಬೇಸಿಗೆಯಲ್ಲಿ ಉದ್ಯೋಗ ಪಡೆದವರು ಶೇಕಡಾ 75 ರಷ್ಟು ಕಾಮಗಾರಿ ಪೂರ್ಣಗೊಳಿಸಿದರೂ ಸಂಪೂರ್ಣ ಹಣ ನೀಡಬೇಕು ಅನ್ನೋ ನಿಯಮವನ್ನೇ ಗಾಳಿಗೆ ತೂರಲಾಗಿದೆ. ಹೀಗಾಗಿ ಜನ ಸರ್ಕಾರದ ಯೋಜನೆಯನ್ನ ನಂಬದೇ ಗುಳೆ ಹೊರಟಿದ್ದಾರೆ. ರಾಯಚೂರು ತಾಲೂಕಿನ ಮರ್ಚಡ, ಗಾಜರಾಳ, ನಾನದೊಡ್ಡಿ ಗ್ರಾಮಗಳಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಜನ ನಗರ ಪ್ರದೇಶಗಳ ಬಸ್ ಹತ್ತುತ್ತಿದ್ದಾರೆ.

RCR 10 3 17 BARA GULE 8

ಪ್ರಮುಖವಾಗಿ ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ರಾಯಚೂರು ತಾಲೂಕುಗಳಿಂದ ಹೆಚ್ಚೆಚ್ಚು ಜನ ಬರಕ್ಕೆ ಹೆದರಿ ಚಿಕ್ಕಮಕ್ಕಳನ್ನ ಕಟ್ಟಿಕೊಂಡು ಗುಳೆ ಹೋಗುತ್ತಿದ್ದಾರೆ. 2016-17ರ ಸಾಲಿನಲ್ಲಿ ಯೋಜನೆಗೆ 99 ಕೋಟಿ 68 ಲಕ್ಷ ರೂ. ಖರ್ಚು ಮಾಡಲಾಗಿದೆ ಅಂತ ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದ್ರೆ ಕೂಲಿ ಹಣ ಸಿಗದೆ ಫಲಾನುಭವಿಗಳು ಕಂಗಾಲಾಗಿದ್ದಾರೆ. ಯೋಜನೆಯಡಿ ಜಿಲ್ಲೆಯ ಐದು ತಾಲೂಕುಗಳಲ್ಲಿ 7431 ಕುಟುಂಬಗಳು 100 ಮಾನವ ದಿನಗಳನ್ನ ಪೂರೈಸಿದ್ದರೆ, 82 ಕುಟುಂಬಗಳು 150 ದಿನಗಳ ಕೂಲಿ ಕೆಲಸವನ್ನ ಪೂರೈಸಿವೆ. ಕೃಷಿ ಹೊಂಡ, ಒಡ್ಡು ನಿರ್ಮಾಣ, ತೋಟಗಾರಿಕೆ ಸಸಿ ನೆಡುವುದು ಸೇರಿ 8633 ಕಾಮಗಾರಿಗಳು ಪೂರ್ಣಗೊಂಡಿದ್ದು, 447 ಕಾಮಗಾರಿಗಳು ಪ್ರಗತಿಯಲ್ಲಿವೆ.

RCR 10 3 17 BARA GULE 5

ಗುಳೆ ಹೋಗುವವರಲ್ಲಿ ಎರಡು ವಿಧ: ವೃತ್ತಿಪರ ಕೂಲಿ ಕೆಲಸಗಾರರು ಹಾಗೂ ವೃತ್ತಿಪರರಲ್ಲದ ಕೆಲಸಗಾರರು ಇದ್ದಾರೆ. ನರೇಗಾ ಅಡಿ ಪ್ರತಿದಿನ 233 ರೂಪಾಯಿ ಕೂಲಿ ನೀಡಲಾಗುತ್ತೆ. ಆದ್ರೆ ವೃತ್ತಿಪರ ಕೂಲಿಕಾರರು ನಗರ ಪ್ರದೇಶಗಳಲ್ಲಿ 500 ರಿಂದ 600 ರೂಪಾಯಿ ದುಡಿಯುತ್ತಾರೆ. ಹೀಗಾಗಿ ವೃತ್ತಿಪರ ಕೂಲಿಕಾರರ ಗುಳೆ ತಡೆಯಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಂತ ರಾಯಚೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದ್ದಾರೆ. ಇನ್ನು ವೃತ್ತಿಪರರಲ್ಲದ ಕೂಲಿಕಾರರಿಗಾಗಿ ಯೋಜನೆಯಡಿ ಕೆಲಸ ನೀಡುತ್ತಿದ್ದೇವೆ. ಈಗಾಗಲೇ 58 ಲಕ್ಷ ಮಾನವ ದಿನಗಳ ಸೃಜನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ.

RCR 10 3 17 BARA GULE 3

ಕೇವಲ ಉದ್ಯೋಗ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆ, ಬೆಳೆ ಹಾನಿ, ಸಾಲ ತೀರಿಸಲಾಗದೆ ಜನ ಗುಳೆ ಹೋಗುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರ ಪರಿಹಾರವನ್ನ ಸಮರ್ಪಕವಾಗಿ ವಿತರಿಸದೇ ಪರಸ್ಪರ ಆರೋಪಗಳಲ್ಲಿ ತೊಡಗಿದ್ದು, ಸರ್ಕಾರದ ಮೇಲಿನ ವಿಶ್ವಾಸವನ್ನ ಜನ ಕಳೆದುಕೊಂಡಿದ್ದಾರೆ. ಕಳೆದ ವರ್ಷಕ್ಕಿಂತ ಇನ್ನೂ ಭೀಕರ ಬರಗಾಲದ ಮುನ್ಸೂಚನೆಯಿರುವುದರಿಂದ ರೈತರು ಮಾರ್ಚ್ ಆರಂಭದಲ್ಲೇ ಗುಳೆ ಹೋಗುತ್ತಿದ್ದಾರೆ.

RCR 10 3 17 BARA GULE 1

 

TAGGED:droughtsloanmigrationmoneyPublic TVraichurrainಪಬ್ಲಿಕ್ ಟಿವಿಬರಗಾಲಮಳೆರಾಯಚೂರುವಲಸೆಸಾಲಹಣ
Share This Article
Facebook Whatsapp Whatsapp Telegram

You Might Also Like

DK Shivakumar Siddaramaiah
Districts

ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತೆ: ಒಟ್ಟಾಗಿಯೇ ಇದ್ದೇವೆ ಎಂದು ಹೇಳಿ ಡಿಕೆಶಿಯ ಕೈ ಎತ್ತಿದ ಸಿಎಂ

Public TV
By Public TV
5 minutes ago
Tamilnadu Newlywed bride Suicide by dowry harassement
Crime

70 ಲಕ್ಷದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆ ಕಿರುಕುಳ – ನವವಿವಾಹಿತೆ ಆತ್ಮಹತ್ಯೆ

Public TV
By Public TV
26 minutes ago
A housewife a professor and a government employee died of heart attacks Hassan
Districts

ಹಾಸನ| ಇಂದು ಒಂದೇ ದಿನ ಗೃಹಿಣಿ, ಪ್ರೊಫೆಸರ್‌, ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ

Public TV
By Public TV
29 minutes ago
Kareena Kapoor
Bollywood

ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್

Public TV
By Public TV
34 minutes ago
ganesh
Cinema

ಮನೆ ಹತ್ತಿರ ಬರಬೇಡಿ ಎಂದಿದ್ಯಾಕೆ ಗಣೇಶ ?

Public TV
By Public TV
45 minutes ago
Increase in number of heart attack cases in Hassan Government forms special committee to investigate
Bengaluru City

ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

Public TV
By Public TV
56 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?