Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಖರ್ಗೆ ಒಂದೇ ವಿಳಾಸಕ್ಕೆ ಮೂರು ಸೈಟು, ಸರ್ಕಾರಕ್ಕೆ 500 ಕೋಟಿ ನಷ್ಟ: ನಾರಾಯಣಸ್ವಾಮಿ

Public TV
Last updated: August 28, 2024 3:22 pm
Public TV
Share
5 Min Read
Chalavadi Narayanaswamy
SHARE

– ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ
– ಜಾಸ್ತಿ ಮಾತನಾಡಿದ್ರೆ ಕೋರಮಂಗಲ, ಗುಲ್ಬರ್ಗಾದಲ್ಲಿರುವ ಆಸ್ತಿ ವಿವರ ಹೊರಗೆ ಬರುತ್ತೆ
– ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ನೀಡಬೇಕು

ಬೆಂಗಳೂರು: ಕೆಐಎಡಿಬಿಯಿಂದ ಸಿಎ ನಿವೇಶನ ಮಾರಾಟ ಪ್ರಕರಣದಲ್ಲಿ ಲೋಪವಾಗಿದೆ. ಒಂದೇ ವಿಳಾಸಕ್ಕೆ ಎರಡು ಮೂರು ಸೈಟು ಕೊಟ್ಟಿದ್ದಾರೆ. ಖರ್ಗೆ ಸ್ವಜನ ಪಕ್ಷಪಾತಕ್ಕೆ ಇದೇ ಸಾಕ್ಷಿ ಎಂದು ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖರ್ಗೆಯವರ ಟ್ರಸ್ಟ್‌ಗೆ ಭೂಮಿ ನೀಡುವ ವಿಚಾರದಲ್ಲಿ ಲೋಪ ಆಗಿದೆ. ಭೂಮಿ ಮೀಸಲಿಡುವಾಗ ನಿರ್ದಿಷ್ಟ ಉದ್ದೇಶವನ್ನು ಸ್ಪಷ್ಟಪಡಿಸಿರಲಿಲ್ಲ. ಕೆಐಎಡಿಬಿಯಿಂದ (KIADB) ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ ಎಂದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಪ್ರಭಾವ ಬೀರಿ ಇದನ್ನು ಪಡೆದುಕೊಂಡಿದ್ದಾರೆ. ಸೈಟು ಹಂಚಿಕೆ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿದಿದೆ. ಒಂದೇ ಕುಟುಂಬದ ಐವರಿಗೆ ಸೈಟು ಹಂಚಿಕೆ ಆಗಿದೆ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ಇದನ್ನೂ ಓದಿ: ವಾಲ್ಮೀಕಿ ಹಗರಣ – ನಾಗೇಂದ್ರ ಆಪ್ತರ ಮನೆ ಮೇಲೆ ED ದಾಳಿ

ಈ ವರ್ಷ ಫೆ.5 ರಂದು ಭೂಮಿ ನೀಡಲು ಕೆಐಎಡಿಬಿ ತೀರ್ಮಾನ ಮಾಡಿತ್ತು. ಅದೇ ತಿಂಗಳ 8 ರಂದು ಭೂಮಿ ನೀಡುವ ಪ್ರಕ್ರಿಯೆ ಆರಂಭ ಆಗಿತ್ತು. ಅದಾದ ಬಳಿಕ ಮಾ.5 ರಂದು ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಭೂಮಿ ನೀಡಲು ನಿರ್ಣಯ ಮಾಡಲಾಗಿತ್ತು. ಮಾ.6 ರಂದು ಭೂಮಿ ಹಂಚಿಕೆಗೆ ಆದೇಶ ನೀಡಲಾಗಿತ್ತು. ಹಂಚಿಕೆ ಮಾಡುವಾಗ ಎಸ್‌ಸಿಗಳಿಗೆ ಕಡಿಮೆ ಭೂಮಿ ನೀಡಲಾಗಿದೆ. ಸಚಿವರು ಸದಸ್ಯರಾಗಿರುವ ಟ್ರಸ್ಟ್‌ಗೆ ಹೆಚ್ಚು ಭೂಮಿ ಕೊಡಲಾಗಿದೆ. ಇಲ್ಲಿ ಅಧಿಕಾರ ದುರ್ಬಳಕೆ ಆಗಿದೆ. ಅದಕ್ಕೆ ಸಚಿವ ಪ್ರಿಯಾಂಕಾ ಖರ್ಗೆ (Priyank Kharge) ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮ ಎಸಗಿದ್ದಕ್ಕೆ ರಾಜ್ಯಪಾಲರನ್ನು ನಾವು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಏರೋಸ್ಪೇಸ್ ಪಾರ್ಕ್‌ನಲ್ಲಿ 71 ಜನ ದಲಿತ ಉದ್ಯಮಿಗಳಿಗೆ 2022 ರಲ್ಲಿ ಭೂಮಿ ಹಂಚಿಕೆಯಾಗಿದೆ. ಎರಡೂವರೆ ವರ್ಷ ಕಳೆದರೂ ಅವರಿಗೆ ಭೂಮಿ ಕೊಟ್ಟಿಲ್ಲ. ಸಚಿವ ಪ್ರಿಯಾಂಕಾ ಖರ್ಗೆಯವರು ಸದಸ್ಯರಾಗಿರುವ ಟ್ರಸ್ಟ್‌ಗೆ ಭೂಮಿ ಶೀಘ್ರವಾಗಿ ಪಡೆದಿದ್ದಾರೆ. ಆದರೆ ದಲಿತ ಉದ್ಯಮಿಗಳಿಗೆ ಹಂಚಿಕೆಯಾದ ಭೂಮಿ ಕೊಡಲು ಹಿಂದೇಟು ಹಾಕುತ್ತಾರೆ. ಇವರಿಗೊಂದು ನ್ಯಾಯ? ಅವರಿಗೊಂದು ನ್ಯಾಯನಾ? ಕೆಐಎಡಿಬಿಯಿಂದ ಭೂಮಿ ಹಂಚಿಕೆಯಾದ ಕ್ರಮ ಸರಿಯಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ನಷ್ಟ ಆಗಿದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿ ನೀಡಲಾಗಿದೆ. ಇವರೂ ಲೂಟಿ ಮಾಡುವ ದುರುದ್ದೇಶವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಎಸ್‌ಆರ್ ಬೆಲೆ ಕಟ್ಟುವಿಕೆಯಲ್ಲೂ ಸರ್ಕಾರಕ್ಕೆ ವಂಚನೆ ಆಗಿದೆ. ಹೀಗಾಗಿ ಈ ಸೈಟು ಹಂಚಿಕೆ ಅಕ್ರಮದ ರೂಪ ಪಡೆದಿದೆ. ಈ ಕಾರಣದಿಂದ ಈ ಸೈಟು ಹಂಚಿಕೆ ನೋಟಿಫಿಕೇಷನ್ ವಾಪಾಸ್ ಪಡೆಯಬೇಕು. ಮರು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜನ್‌ಧನ್ ಯೋಜನೆಯಿಂದ ಕೋಟ್ಯಂತರ ಜನರಿಗೆ ಅನುಕೂಲ – 10ರ ಸಂಭ್ರಮಕ್ಕೆ ಮೋದಿ ಹರ್ಷ

ಪ್ರಿಯಾಂಕ್ ಖರ್ಗೆ ನನ್ನ ಸಹೋದರ. ಅವರು ಕೆಲವೊಮ್ಮೆ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ ಮಾತಾಡಲು ಬಿಜೆಪಿ ನಾರಾಯಣ ಸ್ವಾಮಿ ಅವರನ್ನು ನೇಮಿಸಿದ್ದಾರೆ ಎಂದಿದ್ದಾರೆ. ನೀವು ತಪ್ಪು ಮಾಡಿದ್ದೀರಿ, ಹಾಗಾಗಿ ನಾನು ಮಾತಾಡುತ್ತೇನೆ. ನನಗೆ ಇಂಗ್ಲೀಷ್ ಬರಲ್ಲ ಎಂದು ಹೇಳಿದ್ದೀರಿ. ಹೌದು ನನಗೆ ಇಂಗ್ಲಿಷ್ ಬರಲ್ಲ ನಿಜ. ನಮ್ಮಪ್ಪ ಕೂಲಿ ಮಾಡ್ತಿದ್ದವರು, ಇಂಗ್ಲಿಷ್ ಸ್ವಲ್ಪ ಕಲಿತಿದ್ದೇನೆ. ಇಂಗ್ಲಿಷ್ ಸಂವಹನಕ್ಕೆ ಅಷ್ಟೇ ಇರುವ ಭಾಷೆ. ನೀವು ಕಾನ್ವೆಂಟ್‌ನಲ್ಲಿ ಓದಿದವರು, ಇಂಗ್ಲಿಷ್ ಕಲಿತಿದ್ದೀರಿ. ಆದ್ರೆ ನೀವು ಎಷ್ಟು ಓದಿದ್ದೀರಿ, ಎಲ್ಲಿ ಫೇಲ್ ಆಗಿದ್ದೀರಿ ಅನ್ನೋದು ನಮಗೆ ಗೊತ್ತಿದೆ. ನಾನು ವಾಟಾಳ್ ನಾಗರಾಜ್, ನಾರಾಯಣಗೌಡ ಜೊತೆ ಕನ್ನಡಪರ ಹೋರಾಟ ಮಾಡಿಕೊಂಡು ಬಂದವನು. ನನ್ನ ವಿರುದ್ಧ ವೈಯಕ್ತಿಕ ದಾಳಿ ಮಾಡಿದ್ರೆ, ಸರಿ ಇರಲ್ಲ. ಮೈಂಡ್ ಯುವರ್ ಲಾಂಗ್ವೇಜ್ ಮಿಸ್ಟರ್ ಪ್ರಿಯಾಂಕ್ ಖರ್ಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನನಗೂ ನಮ್ಮಪ್ಪನ ಹೆಸರು ನನ್ನ ಮುಂದಿದೆ ಅದನ್ನು ಬಳಸಿಕೊಂಡಿಲ್ಲ. ಆದ್ರೆ ನಿಮ್ಮ ಹೆಸರಿನ ಮುಂದೆ, ಮಲ್ಲಿಕಾರ್ಜುನ ಖರ್ಗೆ ಅಂತಿದೆ ಅದನ್ನು ಬಳಸಿಕೊಂಡು ಬೆಳೆದಿದ್ದೀರಿ. ನೀನು ಯಾವ ಹೋರಾಟ ಮಾಡಿ ಬೆಳೆದಿದ್ದೀಯಪ್ಪಾ? ನಾನು ಗೋಣೀಚೀಲ ಹೊದ್ದು ಮಲಗಿದವನು. ನೀನು ಯಾವ ಗೋಣೀಚೀಲ ಹೊದ್ದು ಮಲಗಿದ್ದೀಯಾ? ನಿನ್ನ ಹಾಗೆ ಗೋಲ್ಡ್ ಸ್ಪೂನ್ ಇಟ್ಟುಕೊಂಡು ಹುಟ್ಟಿಲ್ಲ. ನಿಮ್ಮ ಅಣ್ಣ ರಾಹುಲ್ ಖರ್ಗೆ ನಿಮ್ಮ ಹಾಗೆ ಅಲ್ಲ. ಅವರು ಚೆನ್ನಾಗಿ ಓದಿಕೊಂಡವರು, ಅವರ ಬಗ್ಗೆ ನಾನು ಮಾತಾಡಲ್ಲ. ಅವರು ಐಆರ್‌ಎಸ್ (IRS) ಮಾಡಿದವರು, ರಾಜಕಾರಣಕ್ಕೆ ಬರಲಿಲ್ಲ. ಪರ್ಸನಲ್ ಅಟ್ಯಾಕ್ ಮಾಡಿದ್ರೆ ನಾನು ಸುಮ್ಮನೇ ಕೂರಲ್ಲ. ದಾಳಿ ಮಾಡುತ್ತಾ ಹೋದ್ರೆ ಕೋರಮಂಗಲದಲ್ಲಿ ನಿಮ್ಮ ಆಸ್ತಿ ಎಲ್ಲಿದೆ? ಬೆಂಗಳೂರಿನ ಬೇರೆ ಕಡೆ ಎಲ್ಲಿದೆ, ಗುಲ್ಬರ್ಗಾದಲ್ಲಿ ಎಲ್ಲೆಲ್ಲಿದೆ ಎಲ್ಲವೂ ಹೊರಗೆ ಬರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ‘ಕೂಲಿ’ ಚಿತ್ರಕ್ಕಾಗಿ 30 ವರ್ಷಗಳ ನಂತರ ಒಂದಾದ ರಜನಿಕಾಂತ್, ಆಮೀರ್ ಖಾನ್

5-2-2024 ರಂದು ತೀರ್ಮಾನ ಮಾಡಿ ಫೆ. 8ರಿಂದ ವೆಬ್ ಸೈಟಿನಲ್ಲಿ ಅರ್ಜಿ ಲಭಿಸುತ್ತದೆ, ಅದನ್ನು ಡೌನ್‍ಲೋಡ್ ಮಾಡಿ ಫೆ. 23ರೊಳಗೆ ಅರ್ಜಿಗಳನ್ನು ಹಾಕಲು ತಿಳಿಸಿದ್ದರು. ಒಂದು ತಿಂಗಳ ಬದಲಾಗಿ ಕೇವಲ 14 ದಿನಗಳನ್ನು ಕೊಟ್ಟಿದ್ದರು. ಇದು ಯಾರಿಗೂ ಗೊತ್ತಾಗಬಾರದೆಂಬ ಉದ್ದೇಶದಿಂದಲೇ ಕೇವಲ 14 ದಿನಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.

ಮಾ.4 ರಂದು ಸಿಂಗಲ್ ವಿಂಡೋ ಏಜೆನ್ಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಒಂದೇ ದಿನ ಇಷ್ಟೂ ಅರ್ಜಿಗಳನ್ನು ಪರಿಶೀಲಿಸಿ, ಮರುದಿನವೇ ಸಂಜೆ 5 ಗಂಟೆಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಸಭೆ ಸೇರಿ ತೀರ್ಮಾನ ಮಾಡಿದ್ದಾರೆ. 6 ರಿಂದ ಮಂಜೂರಾತಿ ಪತ್ರ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಅತ್ಯಂತ ದೊಡ್ಡ ಪ್ರಮಾದ…
12 ಜಿಲ್ಲೆಗಳಲ್ಲಿ 193 ಸಿ.ಎ ಸೈಟ್‍ಗಳಿವೆ. ಒಟ್ಟು 377.69 ಎಕರೆ ಇದ್ದು, 283 ಅರ್ಜಿಗಳಿದ್ದವು. 30 ದಿನಗಳ ಕಾಲ ನೀಡಿದ್ದರೆ ಇನ್ನಷ್ಟು ಅರ್ಜಿ ಬರುತ್ತಿತ್ತು. ಅಧಿಸೂಚನೆ ಹೊರಡಿಸಿದ್ದೇ ಜನರಿಗೆ ಗೊತ್ತಿಲ್ಲ. 14 ದಿನಗಳಲ್ಲಿ ಅರ್ಜಿ ಸ್ವೀಕರಿಸಿ, 15ನೇ ದಿನ ಪರಿಶೀಲಿಸಿ, 16ನೇ ದಿನವೇ ಮಂಜೂರಾತಿ ಆಗಿದೆ. ಇದು ಕೆಐಎಡಿಬಿ ಚರಿತ್ರೆಯ ಬಹು ದೊಡ್ಡ ಪ್ರಮಾದ ಎಂದು ಟೀಕಿಸಿದ್ದಾರೆ.

ವಿಜಯಪುರದ ಹಲಗನಿಯ ಈಶ್ವರ್ ಸಂಗಪ್ಪ ಬದ್ರಿ ಅವರ 3 ಸ್ಟಾರ್ ಹೋಟೆಲ್‍ಗೆ ಸಿ.ಎ. ಸೈಟ್ ಕೊಡಲಾಗಿದೆ. ಅದು ವಾಣಿಜ್ಯ ಉದ್ದೇಶದ್ದು, ಅದನ್ನು ಏಲಂ ಮಾಡಬೇಕಿತ್ತು. 2.5 ಎಕರೆಗೆ ದುಪ್ಪಟ್ಟು ದರದಲ್ಲಿ ಕಡಿಮೆ ಎಂದರೂ 12.5 ಕೋಟಿ ಸಿಗಬೇಕಿತ್ತು ಎಂದು ಉದಾಹರಣೆ ಕೊಟ್ಟರು.ಇದನ್ನೂ ಓದಿ: Kolkata Horror | ಕ್ರಿಮಿನಲ್‌ ಮನಸ್ಥಿತಿ ಬರೋದು ಏಕೆ? ಮನೋವಿಜ್ಞಾನಿಗಳು ಏನ್‌ ಹೇಳ್ತಾರೆ?

ಬಿಡದಿಯಲ್ಲಿ ಸುನಿತಾ ರಾಜಶೇಖರ್ ಅವರಿಗೆ ಅಪಾರ್ಟ್‍ಮೆಂಟ್ ನಿರ್ಮಿಸಲು ಜಾಗ ಕೊಟ್ಟಿದ್ದು, ಇದು ಸೌಲಭ್ಯದಡಿ ಬರುವುದೇ? ಅಥವಾ ವಾಣಿಜ್ಯ ಉದ್ದೇಶದ್ದೇ? ಎಂದರು. ಹಾರೋಹಳ್ಳಿಯಲ್ಲಿ ಸ್ಕಿಲ್ ಡೆವಲಪ್‍ಮೆಂಟ್ ಸಂಸ್ಥೆಗೆ 2.5 ಎಕರೆ ಕೊಟ್ಟಿದ್ದಾರೆ. ಎಸ್‍ಸಿಗಳಿಗೆ ಕೇವಲ ಕಾಲು ಎಕರೆ ಜಾಗ ಕೊಟ್ಟಿದ್ದಾರೆ. 5 ಎಕರೆ, ಆರು ಎಕರೆ ಯಾರಿಗೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TAGGED:bengaluruchalavadi narayanaswamyKIADBmallikarjun khargePriyank Khargeಕೆಐಎಡಿಬಿಛಲವಾದಿ ನಾರಾಯಣಸ್ವಾಮಿಪ್ರಿಯಾಂಕಾ ಖರ್ಗೆಬೆಂಗಳೂರುಮಲ್ಲಿಕಾರ್ಜುನ ಖರ್ಗೆ
Share This Article
Facebook Whatsapp Whatsapp Telegram

Cinema Updates

Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
11 hours ago
rakshitha prem
ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ
14 hours ago
Khushi Mukherjee
ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ
15 hours ago
jayam ravi
ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ
15 hours ago

You Might Also Like

Elon Musk Trump
Latest

ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

Public TV
By Public TV
22 minutes ago
Elon Musk
Latest

ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

Public TV
By Public TV
22 minutes ago
CRIME
Crime

ಕಲಬುರಗಿ | ಹಳೇ ದ್ವೇಷಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

Public TV
By Public TV
1 hour ago
bengaluru stambede rcb
Bengaluru City

Chinnaswamy Stampede | ಡಿಎನ್‌ಎ ಕಂಪನಿ ಮುಖ್ಯಸ್ಥ ನಾಪತ್ತೆ

Public TV
By Public TV
1 hour ago
Bengaluru Chinnaswamy Stadium Stampede Case RCBs Marketing Head Nikhil Sosale Arrested in Airport
Bengaluru City

ಪರಾರಿಯಾಗುತ್ತಿದ್ದ ಆರ್‌ಸಿಬಿಯ ನಿಖಿಲ್‌ ಸೋಸಲೆ ವಿಮಾನ ನಿಲ್ದಾಣದಲ್ಲಿ ಅರೆಸ್ಟ್‌

Public TV
By Public TV
2 hours ago
BJP Women Leader
Crime

ತನ್ನ ಬಾಯ್‌ಫ್ರೆಂಡ್‌ನಿಂದ ಮಗಳ ಮೇಲೆಯೇ ರೇಪ್‌ ಮಾಡಿಸಿದ್ದ ಬಿಜೆಪಿ ನಾಯಕಿ ಅರೆಸ್ಟ್‌

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?