Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

Public TV
Last updated: August 26, 2024 7:20 am
Public TV
Share
5 Min Read
krishna ashtami
SHARE

ಎಲ್ಲೆಲ್ಲೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಸಂಭ್ರಮ. ಹರೇ ರಾಮ.. ಹರೇ ಕೃಷ್ಣ.. ಕೃಷ್ಣ ಕೃಷ್ಣ.. ಹರೇ ಹರೇ.. ಎಂದು ಭಜಿಸಿ ಪರಮಾತ್ಮನ ನಾಮ ಸ್ಮರಣೆ ಮಾಡುವ ದಿನ. ಬಾಲ್ಯದಲ್ಲಿ ತುಂಟ, ಪ್ರಾಯ ಪ್ರಣಯದಲ್ಲಿ ರಾಧಾ ಲೋಲ, ವಯಸ್ಸಿನಲ್ಲಿ ಆಪದ್ಭಾಂದವ, ಯುಗ ಯುಗದ ಅವತಾರ ಪುರುಷ. ಶ್ರೀಕೃಷ್ಣನ ಸ್ಮರಣೆಯೆಂದರೆ, ಅದು ಕೊಳಲ ನಿನಾದದಲ್ಲಿನ ತಲ್ಲೀನತೆ.

ಭಾರತದಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಮನೆ ಮನೆಗಳಲ್ಲಿ ಮಕ್ಕಳು ರಾಧಾ-ಕೃಷ್ಣರಾಗುತ್ತಾರೆ. ಮಕ್ಕಳಿಗೆ ರಾಧಾ-ಕೃಷ್ಣನ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸುತ್ತಾರೆ. ಹುಡುಗರು ಎತ್ತರಕ್ಕೆ ಬೆಣ್ಣೆ ಇರುವ ಮಡಿಕೆ ಕಟ್ಟಿ ಒಡೆಯುತ್ತಾರೆ. ಬಾಲಕೃಷ್ಣ ಬೆಣ್ಣೆ ಕದ್ದು ತಿನ್ನುವ ಸಂದರ್ಭವನ್ನು ಸ್ಮರಿಸುತ್ತಾರೆ. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಭಕ್ತಿ-ಭಾವ ಮೆರೆಯುತ್ತಾರೆ.

ಶ್ರೀಕೃಷ್ಣ ವೈಷ್ಣವ ಧರ್ಮದ ಪ್ರತೀಕ. ಭಗವಾನ್ ಕೃಷ್ಣನ ಜನ್ಮಸ್ಥಳ ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ವಿಶೇಷವಾಗಿರುತ್ತದೆ. ‘ದಹಿ ಹಂಡಿ’ ಒಡೆಯುವುದು ಹಬ್ಬದ ಪ್ರಮುಖ ಆಕರ್ಷಣೆ. ತಮಿಳುನಾಡಿನಲ್ಲಿ ಜನ್ಮಾಷ್ಟಮಿಯನ್ನು ಜನ ಸಾಮಾನ್ಯವಾಗಿ ಗೀತೆಗಳನ್ನು ಪಠಿಸುವ ಮೂಲಕ ಮತ್ತು ಮನೆಯಲ್ಲಿ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ಆಚರಿಸುತ್ತಾರೆ. ವಿಶಿಷ್ಟ ಆಚರಣೆಗಳು ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ.

ಇಸ್ಕಾನ್ (Iskcon) ವೈಷ್ಣವ ಧರ್ಮವನ್ನು ಜನಪ್ರಿಯಗೊಳಿಸಿದ ಮಥುರಾದಲ್ಲಿ ಜನ್ಮಾಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿ ಭಾಗವಹಿಸುತ್ತಾರೆ. ಸಾಮೂಹಿಕ ಪೂಜೆಗಾಗಿ ಸಮುದಾಯಗಳು ಒಟ್ಟಾಗಿ ಸೇರುತ್ತವೆ. ಆಚರಣೆಗಳಿಗೆ ಅವಿಭಾಜ್ಯವಾದ ರಾಸ್ ಲೀಲಾ ಅಥವಾ ಕೃಷ್ಣ ಲೀಲಾ ಪ್ರದರ್ಶನಗಳು ಶ್ರೀಕೃಷ್ಣನ ದೈವಿಕ ಕಾಲಕ್ಷೇಪಗಳನ್ನು ಸ್ಪಷ್ಟವಾಗಿ ಚಿತ್ರಿಸುತ್ತವೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆ ಸಮ್ಮಿಲನವಾಗುತ್ತದೆ. ಈ ವರ್ಷ ಹಿಂದೂ ಸಂಪ್ರದಾಯದ ಪ್ರಕಾರ ಭಗವಾನ್ ಕೃಷ್ಣನ 5,251 ಜನ್ಮ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಗರಿಗರಿ ಉದ್ದಿನಬೇಳೆ ಚಕ್ಕುಲಿ

krishna ashtami mathura

ಬೃಂದಾವನ, ಮಥುರಾ:
ಜನ್ಮಾಷ್ಟಮಿಯ ಸಮಯದಲ್ಲಿ ಮಥುರಾದ (Mathura) ಬೀದಿಗಳು ರೋಮಾಂಚಕ ಶೋಭಾ ಯಾತ್ರೆಯ ಮೆರವಣಿಗೆಗಳೊಂದಿಗೆ ಜೀವಂತವಾಗುತ್ತವೆ. ಅಲಂಕೃತ ರಥಗಳು, ಸಾಂಪ್ರದಾಯಿಕ ಸಂಗೀತ ಮತ್ತು ಅಪಾರ ಉತ್ಸಾಹದಿಂದ ಆಚರಿಸುವ ಉತ್ಸಾಹಿ ಭಕ್ತಸಾಗರವೇ ಇಲ್ಲಿ ನೆರೆದಿರುತ್ತದೆ. ಗೋವರ್ಧನ ಬೆಟ್ಟಕ್ಕೂ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಬೆಟ್ಟದಲ್ಲಿ ಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ಶ್ರೀಕೃಷ್ಣನನ್ನು ಪಾರ್ಥಿಸುತ್ತಾರೆ. ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಜನ್ಮಾಷ್ಟಮಿಯಂದು ಅತ್ಯಂತ ಪೂಜ್ಯ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಭಕ್ತರನ್ನು ಸೆಳೆಯುವ ದೇವಾಲಯ ಹಬ್ಬದ ಕೇಂದ್ರಬಿಂದುವಾಗಿದೆ.

ವೃಂದಾವನದಲ್ಲಿರುವ ಪ್ರಶಾಂತ ಪರಿಸರದ ತಾಣ ರಾಧಾ ರಾಮನ್ ದೇವಾಲಯದಲ್ಲೂ ಜನ್ಮಾಷ್ಟಮಿಯನ್ನು ವಿಜೃಂಭಣೆಯಿAದ ಆಚರಿಸಲಾಗುತ್ತದೆ. ಶ್ರೀಕೃಷ್ಣನು ರಾಧೆಯೊಂದಿಗೆ ರಾಸಲೀಲೆ ಆಡಿದನೆಂದು ನಂಬಲಾದ ‘ಸೇವಾ ಕುಂಜ್’ ಕೃಷ್ಣ ಜನ್ಮಾಷ್ಟಮಿಯಂದು ಭೇಟಿ ನೀಡುವ ಮತ್ತೊಂದು ಆಧ್ಯಾತ್ಮಿಕ ಮಹತ್ವದ ತಾಣ. ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲ್ಪಟ್ಟ ಈ ಶಾಂತಿಯುತ ತಾಣವು ಆಳವಾದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಭಕ್ತರಿಗೆ ಪ್ರಶಾಂತವಾದ ಏಕಾಂತವನ್ನು ನೀಡುತ್ತದೆ.

Dhai Handi

ಮಹಾರಾಷ್ಟ್ರ:
ಜನ್ಮಾಷ್ಟಮಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ದಹಿ ಹಂಡಿ (Dahi Handi) ಒಡೆಯುವ ಸಂಪ್ರದಾಯ ಇಲ್ಲಿ ಜನಪ್ರಿಯ. ಗೋವಿಂದಾಸ್ ತಂಡಗಳು ಮಾನವ ಪಿರಮಿಡ್‌ಗಳನ್ನು ರಚಿಸಿ, ಎತ್ತರದ ಭಾಗದಲ್ಲಿರುವ ಮೊಸರು ತುಂಬಿದ ಮಡಿಕೆ ಹೊಡೆಯುತ್ತಾರೆ. ಆ ಮೂಲಕ ಬೆಣ್ಣೆ ಕದ್ದ ಬಾಲಕೃಷ್ಣನನ್ನು ಸ್ಮರಿಸುತ್ತಾರೆ. ಮುಂಬೈ ಮತ್ತು ಪುಣೆಯಂತಹ ನಗರಗಳು ಈ ರೋಮಾಂಚಕ ಆಚರಣೆಗಳೊಂದಿಗೆ ಗಮನ ಸೆಳೆಯುತ್ತವೆ. ದೊಡ್ಡ ಜನಸಮೂಹವನ್ನು ಹಬ್ಬದಂದು ನಗರಗಳು ಸೆಳೆಯುತ್ತವೆ.

ಮುಂಬೈನ ಇಸ್ಕಾನ್ ದೇವಾಲಯ ಮತ್ತು ಪಂಢರಪುರದ ವಿಠ್ಠಲ್ ರುಕ್ಮಿಣಿ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ, ಭಜನೆ ಮತ್ತು ಕೀರ್ತನೆಗಳನ್ನು ಆಯೋಜಿಸಲಾಗುತ್ತದೆ. ಆರಾಧನೆಗಾಗಿ ಭಕ್ತರನ್ನು ಆಕರ್ಷಿಸುತ್ತವೆ. ಮನೆಗಳಲ್ಲಿ ಶ್ರೀಕೃಷ್ಣನಿಗೆ ಅರ್ಪಿಸಲು ಪೇಡಾಸ್ ಮತ್ತು ಶ್ರೀಖಂಡದಂತಹ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ. ಇದು ಹಬ್ಬದ ಉತ್ಸಾಹವನ್ನು ಹೆಚ್ಚಿಸುತ್ತದೆ. ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿಯು ಆಳವಾದ ಭಕ್ತಿ ಮತ್ತು ರೋಮಾಂಚಕ ಸಂದರ್ಭದ ಸಮ್ಮಿಶ್ರಣವಾಗಿದೆ.

ಉಡುಪಿ:
ಉಡುಪಿಯಲ್ಲಿ ಜನ್ಮಾಷ್ಟಮಿಯನ್ನು ವಿಶೇಷವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಪಾರ ಭಕ್ತಿ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಕರ್ನಾಟಕದ (Karnataka) ಪ್ರಮುಖ ಯಾತ್ರಾಸ್ಥಳವಾದ ಈ ದೇವಾಲಯವು ಉತ್ಸವಗಳ ಕೇಂದ್ರಬಿಂದುವಾಗಿದೆ. ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಭಕ್ತಿ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ದೇವಾಲಯವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಭಗವಾನ್ ಕೃಷ್ಣನ ವಿಗ್ರಹವು ಸೊಗಸಾದ ವಸ್ತ್ರಗಳು ಮತ್ತು ಆಭರಣಗಳಿಂದ ಅಲಂಕೃತಗೊಂಡು ಭಕ್ತರಲ್ಲಿ ಪರವಶ ಭಾವವನ್ನು ಮೂಡಿಸುತ್ತದೆ. ಉಡುಪಿಯಲ್ಲಿ ಜನ್ಮಾಷ್ಟಮಿಯ ವೈಶಿಷ್ಟ್ಯವೆಂದರೆ ಮುದ್ದು ಕೃಷ್ಣ ಸ್ಪರ್ಧೆ. ಅಲ್ಲಿ ಮಕ್ಕಳು ಚಿಕ್ಕ ಕೃಷ್ಣನ ವೇಷಭೂಷಣ ತೊಡುತ್ತಾರೆ. ಭಕ್ತರು ಉಪವಾಸ, ಪ್ರಾರ್ಥನೆ ಮಾಡುತ್ತಾರೆ. ಪ್ರಸಾದ ವಿತರಣೆಯಲ್ಲಿ ಭಾಗವಹಿಸುತ್ತಾರೆ.

krishna ashtami udupi

ದ್ವಾರಕ:
ದ್ವಾರಕಾದಲ್ಲಿ ಜನ್ಮಾಷ್ಟಮಿಯು ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯ ಆಚರಣೆಯಾಗಿದೆ. ಉತ್ಸವಗಳು ಪೂಜ್ಯ ದ್ವಾರಕಾದೀಶ್ ದೇವಾಲಯದ ಸುತ್ತ ಸುತ್ತುತ್ತವೆ. ಮಧ್ಯರಾತ್ರಿಯ ಮಂಗಳ ಆರತಿಯು ಶ್ರೀಕೃಷ್ಣನ ದೈವಿಕ ಜನ್ಮವನ್ನು ಸೂಚಿಸುತ್ತದೆ. ಗರ್ಬಾ ಮತ್ತು ದಾಂಡಿಯಾ ರಾಸ್‌ನಂತಹ ಸಾಂಪ್ರದಾಯಿಕ ನೃತ್ಯಗಳು ರೋಮಾಂಚಕವಾಗಿರುತ್ತವೆ. ಸಂಭ್ರಮಾಚರಣೆಯ ವಾತಾವರಣವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತದೆ. ಕೃಷ್ಣನ ಮೂರ್ತಿಗೆ ಸ್ನಾನ ಮಾಡಿಸಿ, ಅಲಂಕರಿಸಿ ನಂತರ ಭವ್ಯ ಮೆರವಣಿಗೆಗಳು ಸೇರಿದಂತೆ ವಿಶಿಷ್ಟ ಆಚರಣೆಗಳನ್ನು ಮಾಡಲಾಗುತ್ತದೆ. ವಿಶೇಷ ಪ್ರಸಾದ ವಿತರಣೆ ಇರುತ್ತದೆ.

ಮಣಿಪುರ:
ಮಣಿಪುರದಲ್ಲಿ ಜನ್ಮಾಷ್ಟಮಿಯು ಶ್ರೀಮಂತ ವೈಷ್ಣವ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ಗೋವಿಂದಜೀ ಸೇರಿದಂತೆ ಅನೇಕ ದೇವಾಲಯಗಳು ವಿಶೇಷ ಪ್ರಾರ್ಥನೆ, ಭಕ್ತಿಗೀತೆಗಳನ್ನು ಆಯೋಜಿಸಲಾಗುತ್ತದೆ. ಭಗವದ್ಗೀತೆ ಪಠಣವೂ ಇರುತ್ತದೆ. ಕೃಷ್ಣ ಮತ್ತು ರಾಧೆಯ ದೈವಿಕ ಪ್ರೀತಿಯನ್ನು ಚಿತ್ರಿಸುವ ಶಾಸ್ತ್ರೀಯ ಮಣಿಪುರಿ ನೃತ್ಯ ನಾಟಕವಾದ ಸಾಂಪ್ರದಾಯಿಕ ರಾಸ್ ಲೀಲಾ ಪ್ರದರ್ಶನಗಳಿಂದ ಉತ್ಸವವು ಹೈಲೈಟ್ ಆಗಿದೆ. ಭಕ್ತರು ಉಪವಾಸ ಮತ್ತು ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಆಚರಣೆಗಳು ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತವೆ.

ದಕ್ಷಿಣ ಭಾರತ:
ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಆಚರಣೆಗಳು ವಿಭಿನ್ನವಾಗಿವೆ. ಜನರು ಉಪವಾಸ ಆಚರಿಸುತ್ತಾರೆ. ಕೋಲಂಗಳನ್ನು ಎಳೆಯುತ್ತಾರೆ. ಭಗವದ್ಗೀತೆ ಪಠಿಸುತ್ತಾರೆ. ಆಂಧ್ರಪ್ರದೇಶದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಮಕ್ಕಳು ಕೃಷ್ಣನಂತೆ ವೇಷಧರಿಸಿ ಗಮನ ಸೆಳೆಯುತ್ತಾರೆ. ವೆರ್ಕಡಲೈ ಉರುಂಡೈಯಂತಹ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತದೆ.

west bengal krishna ashtami

ಪಶ್ಚಿಮ ಬಂಗಾಳ, ಒಡಿಶಾ:
ಜನ್ಮಾಷ್ಟಮಿಯಂದು ಕೋಲ್ಕತ್ತಾದಲ್ಲಿ ಭವ್ಯವಾದ ಮೆರವಣಿಗೆ ಇರುತ್ತದೆ. ಇದು ಕೃಷ್ಣನ ಜೀವನದ ದೃಶ್ಯಗಳನ್ನು ಚಿತ್ರಿಸುವ ವಿಸ್ತಾರವಾಗಿ ಅಲಂಕರಿಸಿದ ಫ್ಲೋಟ್‌ಗಳು ಮತ್ತು ರೋಮಾಂಚಕ ಸಂಗೀತವನ್ನು ಒಳಗೊಂಡಿರುತ್ತದೆ. ಈ ನಗರವು ಸಂದೇಶ ಮತ್ತು ರಸಗುಲ್ಲಾದಂತಹ ವಿಶೇಷ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದೆ. ಇದನ್ನು ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ. ಬಳಿಕ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಕಾಳಿಘಾಟ್ ದೇವಾಲಯವನ್ನು ಅಲಂಕರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಭಜನೆಗಳು ಮತ್ತು ಕೀರ್ತನೆಗಳು ಸೇರಿದಂತೆ ಭಕ್ತಿ ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿರುತ್ತವೆ.

ಒಡಿಶಾದಲ್ಲಿ ಜನ್ಮಾಷ್ಟಮಿ ಆಚರಣೆಗಳು ಪುರಿಯ ಜಗನ್ನಾಥ ದೇವಾಲಯದ ಸುತ್ತಲೂ ಕೇಂದ್ರೀಕೃತವಾಗಿವೆ. ದೇವರಿಗೆ ಮಾಡುವ ‘ಅಭಿಷೇಕಂ’ ಇಲ್ಲಿ ವಿಶಿಷ್ಟ. ಸಾಂಪ್ರದಾಯಿಕ ಒಡಿಸ್ಸಿ ನೃತ್ಯ ಮತ್ತು ಒಡಿಯಾ ಪಾಕಪದ್ಧತಿ ಹಬ್ಬದ ಪ್ರಮುಖ ಆಕರ್ಷಣೆ. ಭಕ್ತಿಗೀತೆ ಮತ್ತು ನೃತ್ಯದೊಂದಿಗೆ ಬೀದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳನ್ನು ಹೊತ್ತುಕೊಂಡು ಮೆರವಣಿಗೆ ಮಾಡಲಾಗುತ್ತದೆ.

TAGGED:KrishnaKrishna Janmashtamitempleudupiಅಷ್ಟಮಿಉಡುಪಿದ್ವಾರಕಶ್ರೀಕೃಷ್ಣ ಜನ್ಮಾಷ್ಟಮಿ
Share This Article
Facebook Whatsapp Whatsapp Telegram

Cinema News

Rajath Kishan
ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು
Bengaluru City Cinema Latest Top Stories
love u muddu
ಮಹಾರಾಷ್ಟ್ರದಲ್ಲಿ ನಡೆದ ಕಥೆಗೆ ಸಿದ್ದು ನಾಯಕ
Cinema Latest Sandalwood Top Stories
Thalapathy Vijay Jana Nayagan
ಮಲೇಷಿಯಾದಲ್ಲಿ ರಿಲೀಸ್ ಆಗಲಿದೆ ‘ಜನನಾಯಗನ್’ ಆಡಿಯೋ
Cinema Latest Top Stories
madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post
Jothe Neeniralu Serial
ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ
Cinema Latest Top Stories TV Shows

You Might Also Like

Philippines President Ferdinand R. Marcos Jr visits to bengaluru
Bengaluru City

ಬೆಂಗಳೂರಿಗೆ ಫಿಲಿಪೈನ್ಸ್ ಅಧ್ಯಕ್ಷರ ಭೇಟಿ – ರಾಜ್ಯಪಾಲರ ಜೊತೆ ಸಂವಾದ

Public TV
By Public TV
5 hours ago
Yuva Nidhi Scheme
Bengaluru City

ಆ.14ಕ್ಕೆ ಯುವನಿಧಿ ಯೋಜನೆಯಡಿ ಅಭ್ಯರ್ಥಿಗಳ ನೋಂದಣಿ ಕಾರ್ಯಕ್ರಮ

Public TV
By Public TV
5 hours ago
car driver commits suicide by writing k sudhakars name
Chikkaballapur

ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್‌ – ಸಂಸದ ಡಾ. ಕೆ.ಸುಧಾಕರ್ ವಿರುದ್ಧ FIR ದಾಖಲು

Public TV
By Public TV
5 hours ago
Vidhana Soudha
Bengaluru City

ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ ಹಲವು ಮಸೂದೆಗಳಿಗೆ ಸಂಪುಟ ಒಪ್ಪಿಗೆ

Public TV
By Public TV
6 hours ago
Prahlad Joshi 1
Latest

ವಿಧಾನಸಭೆ ಚುನಾವಣೆ ಹೇಗೆ ಗೆದ್ದಿರಿ ಉತ್ತರಿಸಿ – ರಾಹುಲ್ ಗಾಂಧಿಗೆ ಜೋಶಿ ಸವಾಲು

Public TV
By Public TV
6 hours ago
Rahul Gandhi
Bengaluru City

ಮತಗಳ್ಳತನ ಆರೋಪ; ನಿಮ್ಮ ಆರೋಪಕ್ಕೆ ದಾಖಲೆ ಸಲ್ಲಿಸಿ – ರಾಹುಲ್ ಗಾಂಧಿ ಆರೋಪ ಅಲ್ಲಗಳೆದ ಚುನಾವಣಾ ಆಯೋಗ

Public TV
By Public TV
6 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?