Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ

Public TV
Last updated: May 7, 2024 12:49 pm
Public TV
Share
5 Min Read
HD KUMARASWAMY 1
SHARE

– ಸಿಎಂ, ಡಿಕೆಶಿ ವಿರುದ್ಧ ಮಾಜಿ ಸಿಎಂ ಕಿಡಿ
– ಹೆಣ್ಣು ಮಕ್ಕಳ ರಕ್ಷಣೆ ಸರ್ಕಾರಕ್ಕೆ ಬೇಕಿಲ್ಲ
– ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ
– ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ಸೃಷ್ಟಿ

ಬೆಂಗಳೂರು: ವೈರಲ್ ಆಗಿರುವ ವೀಡಿಯೋದಲ್ಲಿ ಯಾರೇ ಇದ್ರೂ ಕ್ರಮ. ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ನಗರದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆ ನಡೆದಿದೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕು. ಅಂತಹ ಬದುಕಿಗೆ ಯಾವ ರೀತಿ ಧಕ್ಕೆ ಉಂಟಾಗಿದೆ. ಇದು ನೋವಿನ ಸಂಗತಿಯಾಗಿದೆ. ಏ.21 ರಂದು ಪೆನ್‍ಡ್ರೈವ್ ಅನ್ನು ಇಡೀ ರಾಜ್ಯಾದ್ಯಂತ ಬಿಡುಗಡೆ ಮಾಡಿದ್ರು. ಪೊಲೀಸ್ ಅಧಿಕಾರಿಗಳನ್ನ ಇಟ್ಟು ಹಂಚಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಸೇರಿ ಹಲವು ಕಡೆ ಮಾಡಿದ್ದಾರೆ ಎಂದು ದೂರಿದರು.

ಪೂರ್ಣ ಚಂದ್ರ ಅಂತ ಪ್ರಜ್ವಲ್ ಏಜೆಂಟ್ ಇದ್ದರು. ಅವರು ಈ ಸಂಬಂಧ ಏಪ್ರಿಲ್ 22 ರಂದು ಹಾಸನ ಡಿಸಿಗೆ ದೂರು ಕೊಟ್ರು. ಚುನಾವಣೆ ಅಧಿಕಾರಿಗಳೂ ದೂರು ಕೊಟ್ಟಿದ್ದಾರೆ. 21 ರಂದು ರಾತ್ರಿ ಪ್ರಜ್ವಲ್ ವಿಡಿಯೋ ಬಿಡುಗಡೆ ಕ್ಷಣಗಣನೆ ಅಂತ ಲಿಂಕ್ ಕೊಟ್ಟಿದ್ದಾರೆ. ವೀಡಿಯೋದಲ್ಲಿ ಯಾರೇ ಇದ್ದರೂ ರಕ್ಷಣೆ ಕೊಡಲ್ಲ. ನಮ್ಮ ಕುಟುಂಬದವರೇ ಆದರು ರಕ್ಷಣೆ ಮಾಡಲ್ಲ ಎಂದು ಹೆಚ್‍ಡಿಕೆ ಖಡಕ್ ಆಗಿ ತಿಳಿಸಿದ್ದಾರೆ.

SIDDARAMAIAH DKSHI

ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿ. ನಮ್ಮ ನಾಡಿನ ತಾಯಂದಿರ ಮುಂದೆ ಹೇಳ್ತೀನಿ. ಯಾವ ವ್ಯಕ್ತಿಯನ್ನೂ ನಾನು ರಕ್ಷಣೆ ಮಾಡಲ್ಲ. ವೀಡಿಯೋ ಬಿಡುಗಡೆ ಮಾಡ್ತೀನಿ ಅಂತ ನವೀನ್ ಗೌಡ ರಾತ್ರಿ 8ಕ್ಕೆ ಹೇಳಿದ್ದಾನೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಾಗಿದೆ. ನವೀನ್, ಕಾರ್ತಿಕ್, ಚೇತನ್, ಪುಟ್ಟರಾಜು ಮೇಲೆ ದೂರು ಕೊಟ್ಟರು. ಎಫ್‌ಐಆರ್‌ ಹಾಕಿದ್ರೂ ಈ  ಕ್ಷಣದವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಏ. 24ರಂದು ಚುನಾವಣಾ ಆಯೋಗದವರು ಹಿಂಬರಹವನ್ನು ಕೊಟ್ಟಿದ್ದಾರೆ. ಏಜೆಂಟ್ ದೂರು ಕೊಟ್ಟ ಮೇಲೆ ಸರ್ಕಾರದ ಗಮನಕ್ಕೆ ಹೋಯ್ತು. ಇದಾದ ಮೇಲೆ ಹಾಸನದಲ್ಲಿ 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಹಂಚಿಕೆಯಾಗಿದೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಯಾವುದೇ ಕ್ರಮ ಆಗಿಲ್ಲ. ಇಂತಹ ದೊಡ್ಡ ಪ್ರಕರಣದ ಬಗ್ಗೆ ಈ ಕ್ಷಣದವರೆಗೆ 5 ಜನ ಮೇಲೆ ಆಕ್ಷನ್ ತಗೊಂಡಿಲ್ಲ. ಸಣ್ಣ ಪುಟ್ಟ ಕೇಸ್ ಗೆ ದೊಡ್ಡ ವಿಷಯ ಮಾಡೋರು ಈ ಕೇಸ್ ನಲ್ಲಿ ಕ್ರಮ ಮಾಡಿಲ್ಲ. ಪೆನ್ ಡ್ರೈವ್ ನಲ್ಲಿ ಯಾರ್ ಯಾರ್ ಪಾತ್ರ ಇದೆ. ಸತ್ಯ ಹೊರಗೆ ಬರಬೇಕು ಎಂದು ಹೆಚ್‍ಡಿಕೆ ಕಿಡಿಕಾರಿದರು.

h.d.revanna prajwal revanna

ಪದೇ ಪದೇ ನನ್ನ ಬಗ್ಗೆ ಸಿಎಂ ಮಾತಾಡಿದ್ರು. ಡಿ.ಕೆ ಶಿವಕುಮಾರ್ ಏಕವಚನದಲ್ಲಿ ನನ್ನ ಬಗ್ಗೆ ಮಾತಾಡಿದ್ರು. ಮಹಿಳೆಯರು ಹೋರಾಟ ಮಾಡಿ ಅಂತ ಕರೆ ಕೊಟ್ರು. ಇದೆಲ್ಲ ಆದ ಮೇಲೆ ಏ.26 ಚುನಾವಣೆ ಅಗೋವರೆಗೆ ನಮ್ಮ ಏಜೆಂಟ್ ಕೊಟ್ಟ ದೂರಿನ ಮೇಲೆ ಯಾವುದೇ ಕ್ರಮ ಆಗಿಲ್ಲ. ಏ.25 ರಂದು ಮಹಿಳಾ ಆಯೋಗದ ಅಧ್ಯಕ್ಷೆ ವಿಶೇಷ ತಂಡ ರಚನೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದರು.

ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಪೆನ್ ಡ್ರೈವ್ ಬಿಡುಗಡೆ ಮಾಡಿದವರ ಮೇಲೆ ಕ್ರಮ ಆಗಬೇಕು ಅಂತ ಪತ್ರ ಬರೆದರು. ಈ ಪತ್ರದಲ್ಲಿ ರೇವಣ್ಣ (HD Revanna), ಪ್ರಜ್ವಲ್ ರೇವಣ್ಣ (Prajwal Revanna) ಹೆಸರು ಇಲ್ಲ. ಆದರೂ ಸಿಎಂ, ಪ್ರಜ್ವಲ್ ರೇವಣ್ಣ ಅಂತ ಟ್ವೀಟ್ ಮಾಡ್ತಾರೆ. ಏ.27 ರಂದು ಸಿಎಂ ಎಸ್‍ಐಟಿ ರಚನೆ ಮಾಡಿದ್ರು.

28 ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಡಿಜಿಟಲ್ ಮೂಲಕ ಇಲ್ಲಿ ಟೈಪ್ ಮಾಡಿ ಎರಡು ಹೆಣ್ಣು ಮಕ್ಕಳ ಹೆಸರಲ್ಲಿ ಹೊಳೆನರಸೀಪುರ ಸ್ಟೇಷನ್ ಗೆ ಕಳಿಸಿದ್ರು. ಎಸ್‍ಐಟಿ ಕೊಟ್ಟಾಗ ಪಾರದರ್ಶಕವಾಗಿ ನಡೆಯುತ್ತೆ ಅಂತಾ. ಆದರೆ ಆಮೇಲೆ ಗೊತ್ತಾಯ್ತು. ಎಸ್‍ಐಟಿ (SIT) ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಕೇಷನ್ ಟೀಂ ಹಾಗೂ ಡಿಕೆಶಿವಕುಮಾರ್ ಇನ್ವೆಸ್ಟಿಂಗ್ ಟೀಂ ಆಗಿದೆ. ಇದು ನಿಜವಾದ ಎಸ್‍ಐಟಿ ಎಂದು ಹೆಚ್‍ಡಿಕೆ ಕಿಡಿಕಾರಿದರು.

PRAJWAL REVANNA

ಸರ್ಕಾರಕ್ಕೆ ಹೆಣ್ಣು ಮಕ್ಕಳ ರಕ್ಷಣೆ ಬೇಕಾಗಿಲ್ಲ: ಪ್ರತಿನಿತ್ಯ ಇವರು ಮಾತುಕತೆ ಮಾಡಿದ್ದಾರೆ. ಇವರು ಮಾತಾಡ್ತಿರೋ ಕಾಲ್ ರೆಕಾರ್ಡ್ ಎಲ್ಲಾ ಹೊರ ಬರಬೇಕು. ಈಗಲೂ ಹೇಳ್ತೀನಿ ಪ್ರಜ್ವಲ್ ವಿಷಯಕ್ಕೆ ಅಡಚಣೆ ಮಾಡಲ್ಲ. ಪ್ರಜ್ವಲ್ ನನ್ನ ನಾನು ವಹಿಸಿಕೊಳ್ಳಲ್ಲ. ಈ ಬಗ್ಗೆ ತನಿಖೆ ಆಗಲಿ. ಆದರೆ ತನಿಖೆ ಹೇಗೆ ಹೋಗ್ತಿದೆ ಅಂದರೆ ಏ.28ಕ್ಕೆ ಹೊಳೆನರಸೀಪುರದಲ್ಲಿ ಕೇಸ್ ಆಗುತ್ತೆ. ಅಲ್ಲಿ ಬೇಲ್ ಆಗೋ ಸೆಕ್ಷನ್ ಹಾಕಿದ್ದಾರೆ. ಬೇಲ್ ಸೆಕ್ಷನ್ ಅಂತ ಬಂತು ಆಗ ಇನ್ನೊಂದು ದೂರು ಮಾಡಿಸಿದ್ರಿ. ಜಿಲ್ಲಾ ಪಂಚಾಯ್ತಿ ಸದಸ್ಯೆಗೆ ಗನ್ ಪಾಯಿಂಟ್ ಇಟ್ಟು ಬೆದರಿಕೆ ಅಂತ ದೂರು ಕೊಟ್ರಿ. ಈ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು?. ತನಿಖೆ ವೇಳೆ ಮಾಹಿತಿ ಸೋರಿಕೆ ಆಗಬಾರದು. ಈ ಸರ್ಕಾರಕ್ಕೆ ಬೇಕಿರೋದು ಹೆಣ್ಣುಮಕ್ಕಳ ರಕ್ಷಣೆ ಅಲ್ಲ. ಯಾರನ್ನು ತೇಜೋವಧೆ ಮಾಡೋಕೆ ಇದು ಬಳಸಿಕೊಂಡಿದ್ದಾರೆ ಎಂದು ಗರಂ ಆದರು.

ಮೇ.2 ರಂದು ದೂರು ಹಾಕಿದ್ರಿ. ದೂರು ಕೊಟ್ಟ ಹೆಣ್ಣು ಮಗಳು ಏ. 28 ಕ್ಕೆ ಬೇಲೂರಿನಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಆರೋಪ ಪ್ರಜ್ವಲ್ ಪಕ್ಕದಲ್ಲಿ ಇರೋ ಹೆಣ್ಣು ಮಗಳು ಯಾರು? ಮೊದಲ ಪೆನ್ ಡ್ರೈವ್ ನಲ್ಲಿ ಬಿಡುಗಡೆಯಾದ ಮಹಿಳೆ 21ಕ್ಕೆ ಪ್ರಜ್ವಲ್ ಜೊತೆ ಪ್ರಚಾರ ಮಾಡಿದ್ರು. 22ಕ್ಕೆ ಅವಳ ವೀಡಿಯೋ ಲಿರೀಸ್ ಮಾಡಿದ್ರಿ. ಈಗ ಗನ್ ಪಾಯಿಂಟ್ ಅಂತ ಇನ್ನೊಂದು ದೂರು. ಇದು ನಿಮ್ಮ ದೂರು. ಡಿಕೆ ಶಿವಕುಮಾರ್ ಅವರೇ, ಸಿಎಂ ಅವರೇ ಇದು ನಿಮ್ಮ ತನಿಖೆ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

ಯಾರು ರೇವಣ್ಣ ಮೇಲೆ ನೇರವಾಗಿ ದೂರು ಕೊಟ್ಟಿಲ್ಲ. ಅಮೇಲೆ ಕಿಡ್ನಾಪ್ ಅಂತ ಸೃಷ್ಟಿ ಮಾಡಿದ್ರು. ಕಿಡ್ನಾಪ್ ಆದ ಹೆಣ್ಣುಮಗಳನ್ನ ಎಲ್ಲಿಂದ ಕರೆದುಕೊಂಡು ಬಂದ್ರಿ. ತೋಟದ ಮನೆ ಅಂತಾರೆ. ತೋಟದ ಮನೆ ಮಹಜರ್ ಮಾಡಿದ್ರಾ?. ಆಕೆ ಹೇಳಿಕೆ ಕೊಡಲಿಲ್ಲವಾ..?, ನ್ಯಾಯಾಧೀಶರ ಮುಂದೆ ಆಕೆಯನ್ನ ಯಾಕೆ ಪ್ರೊಡ್ಯೂಸ್ ಮಾಡಿಲ್ಲ. ಯಾರನ್ನ ಕರೆದುಕೊಂಡು ಒತ್ತಡ ಹಾಕಿಸಿದ್ದೀರಾ ಎಂದು ಪ್ರಶ್ನಿಸಿದರು.

ಏ. 30ರಂದು ಕಾರ್ತಿಕ್ ಪ್ರೆಸ್ ಮುಂದೆ ಬರದೇ ವೀಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರಿ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಅವನು ಎಲ್ಲಿ ಇದ್ದಾನೆ ಅಂತ ಎಸ್‍ಐಟಿ ಹುಡುಕಿಲ್ಲ. ಸರ್ಕಾರಕ್ಕೆ ಕೇಳ್ತೀನಿ ಈ ಕೇಸ್ ರೇವಣ್ಣ, ಪ್ರಜ್ವಲ್ ಮೇಲೆ ಮಾತ್ರ ಮಾಡ್ತಿರೋದೋ ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್ ಡ್ರೈವ್ ಬಿಡುಗಡೆ ಮಾಡಿರೋರ ಮೇಲೆ ತನಿಖೆ ಆಗುತ್ತೋ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಅಲ್ಲದೇ 21 ರಂದು ವಿಡಿಯೋ ಬಿಡುಗಡೆ ಮಾಡ್ತೀನಿ ಎಂದ ನವೀನ್ ಗೌಡ ಯಾಕೆ ಬಂಧನ ಮಾಡಿಲ್ಲ. 14 ದಿನ ಆಗಿದೆ. ಪೆನ್ ಡ್ರೈವ್ ಅನ್ನ ಬಿಡುಗಡೆ ಮಾಡಿದ್ದೇನೆ ಅಂತಾನೆ ಎಂದು ನವೀನ್ ಗೌಡ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದರು.

TAGGED:bengaluruhd kumaraswamyPendrive Caseprajwal revannaಪೆನ್‌ಡ್ರೈವ್ ಕೇಸ್ಪ್ರಜ್ವಲ್ ರೇವಣ್ಣಬೆಂಗಳೂರುಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema Updates

Deepika padukone
ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಘೋಷಿಸಿದ ದೀಪಿಕಾ ಪಡುಕೋಣೆ
1 hour ago
Kamal Hassan Surya 2
ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌
5 hours ago
Nandamuri Balakrishna
ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ
5 hours ago
Bro code ravi mohan
ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ
5 hours ago

You Might Also Like

Anekal 2 1
Bengaluru City

ಆನೇಕಲ್‌ | ಆಟವಾಡ್ತಿದ್ದಾಗ ಕರೆಂಟ್ ಶಾಕ್‌ ತಗುಲಿ 11 ವರ್ಷದ ಬಾಲಕಿ ಸಾವು

Public TV
By Public TV
18 minutes ago
Raja Raghuvanshi Sister
Crime

ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು

Public TV
By Public TV
26 minutes ago
KRS Brindavan 3
Districts

KRSನಲ್ಲಿ ಕಾವೇರಿ ಆರತಿ, ಅಮ್ಯೂಸ್ಮೆಂಟ್ ಪಾರ್ಕ್‌ ಮಾಡೇ ಮಾಡ್ತೀವಿ – ಗಣಿಗ ರವಿಕುಮಾರ್

Public TV
By Public TV
35 minutes ago
Sonam Raghuvanshi
Crime

`ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

Public TV
By Public TV
50 minutes ago
Banas River
Crime

ಸ್ನಾನ ಮಾಡಲು ನದಿಗೆ ಇಳಿದಿದ್ದ 8 ಮಂದಿ ಸಾವು – ಮೂವರ ರಕ್ಷಣೆ

Public TV
By Public TV
2 hours ago
Vatal Nagaraj 1
Bengaluru City

ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ತಲಾ 5 ಕೋಟಿ ಪರಿಹಾರ ಕೊಡ್ಬೇಕು: ವಾಟಾಳ್‌ ನಾಗರಾಜ್‌ ಆಗ್ರಹ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?