ಕೃಷ್ಣಾ ನದಿಯಲ್ಲಿ ಪತ್ತೆಯಾದ ವಿಷ್ಣು ವಿಗ್ರಹ ಪ್ರಾಚ್ಯ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರ

Public TV
1 Min Read
Idols

ರಾಯಚೂರು: ಜಿಲ್ಲೆಯ ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ (Krishna River) ಪತ್ತೆಯಾಗಿದ್ದ 3 ವಿಗ್ರಹಗಳಲ್ಲಿ ಅಯೋಧ್ಯೆ ಬಾಲಕರಾಮನ ವಿನ್ಯಾಸ ಹೋಲುವ ದಶಾವತಾರಿ ವಿಷ್ಣು ವಿಗ್ರಹ (Vishnu Idol) ಈಗ ಪುರಾತತ್ವ ಇಲಾಖೆ ವಸ್ತುಸಂಗ್ರಹಾಲಯ ಸೇರಿದೆ. ಒಂದು ವಿಗ್ರಹ ರಾಜ್ಯಕ್ಕೆ ಸೇರಿದರೆ ಇನ್ನೂ ಎರಡು ವಿಗ್ರಹಗಳು ತೆಲಂಗಾಣದ ಪಾಲಾಗಿವೆ.

Raichur idol

ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇರಿಸಿದ್ದ ವಿಷ್ಣು ಮೂರ್ತಿಯನ್ನ ಪುರಾತತ್ವ ಇಲಾಖೆ (Department of Archaeology) ಅಧಿಕಾರಿಗಳು ಪರಿಶೀಲನೆ ನಡೆಸಿ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಿದ್ದಾರೆ. ರಾಯಚೂರಿನ (Raichur) ನವರಂಗ್ ದರ್ಗಾದಲ್ಲಿನ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಆದ್ರೆ ವಿಗ್ರಹದ ಕಾಲಾವಧಿ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. 400 ವರ್ಷಗಳಷ್ಟು ಹಳೆಯ ವಿಗ್ರಹ ಎಂದು ನಿರೀಕ್ಷಿಲಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಸಿಕ್ಕ ಶಿವಲಿಂಗ, ವಿಷ್ಣುವಿನ ವಿಗ್ರಹಕ್ಕೆ ಅಂತಾರಾಜ್ಯ ಪೈಪೋಟಿ

Idols 2

ಮತ್ತೊಂದು ವಿಷ್ಣು ವಿಗ್ರಹ ಹಾಗೂ ಶಿವಲಿಂಗ ತೆಲಂಗಾಣ ಪಾಲಾಗಿವೆ. ಎರಡು ರಾಜ್ಯಗಳ ಗಡಿಯಲ್ಲಿ ಮೂರ್ತಿಗಳು ದೊರೆತ ಹಿನ್ನೆಲೆ ಪೈಪೋಟಿ ನಡೆದಿತ್ತು. ತೆಲಂಗಾಣದ ಭಕ್ತರು ತೆಗೆದುಕೊಂಡು ಹೋದ ವಿಷ್ಣು ವಿಗ್ರಹ ಹಾಗೂ ಶಿವಲಿಂಗ ಕುರಿತು ತೆಲಂಗಾಣದ ಅಧಿಕಾರಿಗಳು ಅಧ್ಯಯನ ನಡೆಸಿದ್ದಾರೆ. ವಿಗ್ರಹಗಳ ಸಂಪೂರ್ಣ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಚುನಾವಣೆ ಮತ ಎಣಿಕೆ ಅಂತ್ಯ; ಇಮ್ರಾನ್ ಖಾನ್ ಮುನ್ನಡೆ, ನವಾಜ್ ಷರೀಫ್‌ಗೆ ಸೇನೆ ಬೆಂಬಲ

Raichur

ರಾಯಚೂರು ಜಿಲ್ಲೆಯ ದೇವಸುಗೂರು ಬಳಿಯ ಕೃಷ್ಣಾ ನದಿಯಲ್ಲಿ ಕಳೆದ ಐದು ದಿನಗಳ ಹಿಂದೆ ಎರಡು ವಿಷ್ಣು ಅವತಾರದ ವೆಂಕಟೇಶ್ವರ ಸ್ವಾಮಿ ಮೂರ್ತಿಗಳು ಹಾಗೂ ಶಿವಲಿಂಗ ಮೂರ್ತಿ ಪತ್ತೆಯಾಗಿತ್ತು. ವೆಂಕಟೇಶ್ವರನ ಮೂರ್ತಿಯೊಂದು ಅಯೋಧ್ಯೆ ಬಾಲಕರಾಮನ ವಿನ್ಯಾಸವನ್ನೇ ಹೋಲುವಂತಿತ್ತು. ನದಿಯಲ್ಲಿ ನೀರು ಬತ್ತಿದ್ದು, ಇದ್ದಷ್ಟೇ ನೀರಿನಲ್ಲಿ ಮೀನುಗಾರರು ಮೀನು ಹಿಡಿಯುತ್ತಿದ್ದ ವೇಳೆ ಮೂರ್ತಿಗಳು ಪತ್ತೆಯಾಗಿದ್ದವು. ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

Share This Article