Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಕರ್ನಾಟಕದ ಇಬ್ಬರು ಸೇರಿ 34 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ

Public TV
Last updated: January 25, 2024 11:30 pm
Public TV
Share
5 Min Read
PADMASHRI AWARD
SHARE

ನವದೆಹಲಿ: 2024ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದವರ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದ ಇಬ್ಬರು ಸೇರಿ 34 ಮಂದಿ ವಿವಿಧ ಕ್ಷೇತ್ರಗಳ ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

34 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ..

ಪರ್ಬತಿ ಬರುವಾ: ಮಾವುತರಾಗಿ ಕೆಲಸ ಮಾಡುವ ಭಾರತದ ಮೊದಲನೇ ಮಹಿಳೆ ಇವರಾಗಿದ್ದಾರೆ. ಸಾಮಾನ್ಯವಾಗಿ ಪುರುಷರೇ ಮಾವುತರಾಗಿರುತ್ತಾರೆ. ಇವರು ಆ ಸಂಪ್ರದಾಯವನ್ನು ಮುರಿದು ತಮ್ಮದೇ ಛಾಪು ಮೂಡಿಸಿದ್ದಾರೆ.

ಜಾಗೇಶ್ವರ್ ಯಾದವ್: ಇವರು ಜಶ್‍ಪುರದ ಬುಡಕಟ್ಟು ಕಲ್ಯಾಣ ಕಾರ್ಯಕರ್ತರು. ಅವರು ಅಂಚಿನಲ್ಲಿರುವ ಬಿರ್ಹೋರ್ ಮತ್ತು ಪಹಾಡಿ ಕೊರ್ವಾ ಜನರ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಚಾಮಿ ಮುರ್ಮು: ಸೆರೈಕೆಲಾ ಖಾರ್ಸಾವನ್ ಇವರು, ಬುಡಕಟ್ಟು ಪರಿಸರವಾದಿ ಮತ್ತು ಮಹಿಳಾ ಸಬಲೀಕರಣದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಗುವಿರ್ಂದರ್ ಸಿಂಗ್: ಹರಿಯಾಣದ ಇವರು, ನಿರಾಶ್ರಿತರು, ನಿರ್ಗತಿಕರು, ಮಹಿಳೆಯರು, ಅನಾಥರು ಮತ್ತು ದಿವ್ಯಾಂಗರ ಸುಧಾರಣೆಗಾಗಿ ಕೆಲಸದಲ್ಲಿ ತೊಡಗಿದ್ದಾರೆ.

ಸತ್ಯನಾರಾಯಣ ಬೇಲೇರಿ: ಕಾಸರಗೋಡಿನ ರೈತರಾದ ಇವರು, 650 ಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ಭತ್ತದ ಬೆಳೆ ಸಂರಕ್ಷಕರಾಗಿದ್ದಾರೆ.

ದುಖು ಮಾಝಿ: ಪಶ್ಚಿಮ ಬಂಗಾಳದ ಸಿಂಡ್ರಿ ಗ್ರಾಮದ ಬುಡಕಟ್ಟು ಪರಿಸರವಾದಿ. ಸುಮಾರು 5000 ಆಲದ ಮರ, ಮಾವು ಸೇರಿದಂತೆ ಹಲವಾರು ಗಿಡ ಮರಗಳನ್ನು ಇವರು ಬೆಳೆಸಿದ್ದಾರೆ.

ಕೆ ಚೆಲ್ಲಮ್ಮಾಳ್: ದಕ್ಷಿಣ ಅಂಡಮಾನ್‍ನ ಸಾವಯವ ಕೃಷಿಕ, 10 ಎಕರೆ ಸಾವಯವ ಕೃಷಿಯನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು. ಸುಮಾರು 150 ರೈತರಿಗೆ ಇವರು ಪ್ರೇರಣೆಯಾಗಿದ್ದಾರೆ.

ಸಂಗತಂಕಿಮಾ: ಮಿಜೋರಾಂನ ಅತಿದೊಡ್ಡ ಅನಾಥಾಶ್ರಮ `ತುಟಕ್ ನುನ್‍ಪುಟು ತಂಡ’ವನ್ನು ನಡೆಸುತ್ತಿದ್ದು ಇವರ ಈ ವಿಶೇಷ ಸೇವೆಗೆ ಪದ್ಮಶ್ರೀ ಗೌರವ ಸಿಕ್ಕಿದೆ.

ಹೇಮಚಂದ್ ಮಾಂಝಿ: ಇವರು ಚತ್ತೀಸ್‍ಗಢದ ನಾರಾಯಣಪುರದ ಸಾಂಪ್ರದಾಯಿಕ ವೈದ್ಯರು, 5 ದಶಕಗಳಿಂದ ಗ್ರಾಮಸ್ಥರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದಾರೆ. ಇವರು 15ನೇ ವಯಸ್ಸಿನಿಂದಲೇ ನಿರ್ಗತಿಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದ್ದರು.

ಯಾನುಂಗ್ ಜಮೋಹ್ ಲೆಗೊ: ಪೂರ್ವ ಸಿಯಾಂಗ್ ಮೂಲದ ಗಿಡಮೂಲಿಕೆ ಔಷಧಿ ತಜ್ಞರು 10,000 ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಆರೈಕೆಯನ್ನು ಒದಗಿಸಿದ್ದಾರೆ. 1 ಲಕ್ಷ ವ್ಯಕ್ತಿಗಳಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಔಷಧೀಯ ಗಿಡಮೂಲಿಕೆಗಳ ಬಗ್ಗೆ ಶಿಕ್ಷಣ ನೀಡಿದ್ದಾರೆ.

ಸೋಮಣ್ಣ: ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ, 4 ದಶಕಗಳಿಂದ ಜೇನು ಕುರುಬ ಜನಾಂಗದ ಅಭ್ಯುದಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಸರ್ಬೇಶ್ವರ ಬಾಸುಮತರಿ: ಇವರು ಅಸ್ಸಾಂನ ಬುಡಕಟ್ಟು ರೈತರು, ಮಿಶ್ರ, ಸಮಗ್ರ ಕೃಷಿ ವಿಧಾನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ತೆಂಗು, ಕಿತ್ತಳೆ, ಭತ್ತ, ಲಿಚಿಸ್ ಮತ್ತು ಮೆಕ್ಕೆಜೋಳದಂತಹ ವಿವಿಧ ಬೆಳೆಗಳನ್ನು ಇವರು ಕೃಷಿ ಮಾಡಿದ್ದಾರೆ.

ಪ್ರೇಮಾ ಧನರಾಜ್: ಕರ್ನಾಟಕದ ವೈದ್ಯೆ. ಪ್ಲಾಸ್ಟಿಕ್ ಸರ್ಜರಿ, ಸುಟ್ಟ ಸಂತ್ರಸ್ತರ ಆರೈಕೆ ಮತ್ತು ಪುನರ್ವಸತಿಗಾಗಿ ದುಡಿಯುತ್ತಿದ್ದಾರೆ.

ವಿಶ್ವನಾಥ ದೇಶಪಾಂಡೆ: ಮಹಾರಾಷ್ಟ್ರದ ಇವರು, ಅಂತಾರಾಷ್ಟ್ರೀಯ ಮಲ್ಲಕಂಬ ತರಬೇತುದಾರರು, ಜಾಗತಿಕ ಮಟ್ಟದಲ್ಲಿ ಕ್ರೀಡೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಜನಪ್ರಿಯಗೊಳಿಸುವಲ್ಲಿ ಅವಿರತವಾಗಿ ಶ್ರಮಿಸಿದವರು. 50 ದೇಶಗಳ ಸುಮಾರು 5000 ಜನರಿಗೆ ಇವರು ತರಬೇತಿ ನೀಡಿದ್ದಾರೆ.

ಯಜ್ದಿ ಮಾನೇಕ್ಷಾ ಇಟಲಿಯ: ಗುಜರಾತ್‍ನ ಇವರು, ಭಾರತದ ಚೊಚ್ಚಲ ಸಿಕಲ್ ಸೆಲ್ ಅನೀಮಿಯಾ ನಿಯಂತ್ರಣ ಕಾರ್ಯಕ್ರಮದ (ಎಸ್‍ಸಿಎಸಿಪಿ) ಅಭಿವೃದ್ಧಿಯ ಪ್ರವರ್ತಕರಾದ ಖ್ಯಾತ ಸೂಕ್ಷ್ಮ ಜೀವಶಾಸ್ತ್ರಜ್ಞರು.

ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್: ಇವರು ಬಿಹಾರ್‍ನ ದುಸಾಧ್ ಸಮುದಾಯದ ದಂಪತಿ, ಜಾಗತಿಕವಾಗಿ ಗುರುತಿಸಲ್ಪಟ್ಟ ಗೋಡ್ನಾ ವರ್ಣಚಿತ್ರಕಾರರು. ಜಪಾನ್ ಮತ್ತು ಹಾಂಗ್ ಕಾಂಗ್‍ನಂತಹ ದೇಶಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. 20,000 ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ.

ರತನ್ ಕಹಾರ್: ಬಿರ್ಭೂಮ್‍ನ ಹೆಸರಾಂತ ಬದು ಜಾನಪದ ಗಾಯಕ, 60 ವರ್ಷಗಳಿಂದ ಜಾನಪದ ಸಂಗೀತಕ್ಕಾಗಿ ದುಡಿದಿದ್ದಾರೆ.

ಅಶೋಕ್ ಕುಮಾರ್ ಬಿಸ್ವಾಸ್: ಬಿಹಾರ್‍ನ ಸಮೃದ್ಧ ಟಿಕುಲಿ ವರ್ಣಚಿತ್ರಕಾರರು, ಕಳೆದ 5 ದಶಕಗಳಲ್ಲಿ ತಮ್ಮ ಪ್ರಯತ್ನಗಳ ಮೂಲಕ ಮೌರ್ಯ ಯುಗದ ಕಲಾಪ್ರಕಾರದ ಪುನರುಜ್ಜೀವನ ಮತ್ತು ಮಾರ್ಪಾಡುಗಾಗಿ ಮನ್ನಣೆ ಪಡೆದಿದ್ದಾರೆ.

ಬಾಲಕೃಷ್ಣನ್ ಸದನಂ ಪುತಿಯಾ ವೀಟಿಲ್: ಕೇರಳದ ಇವರು, 60 ವರ್ಷಗಳಿಂದ ಪ್ರಸಿದ್ಧ ಕಲ್ಲುವಾಝಿ ಕಥಕ್ಕಳಿ ನರ್ತಕರಾಗಿದ್ದಾರೆ. ಇದೊಂದು ವಿಶೇಷವಾದ ನೃತ್ಯವಾಗಿದ್ದು ಇಲ್ಲಿ ಬಳಕೆಯಾಗುವ ಸಂಗೀತ ಅನುಕರಣ ಅವ್ಯಯಗಳಂತೆ ಇದ್ದು, ನೃತ್ಯಕ್ಕೆ ವಿಶೇಷ ಮೆರುಗು ನೀಡುತ್ತದೆ.

ಉಮಾ ಮಹೇಶ್ವರಿ ಡಿ: ಆಂದ್ರಪ್ರದೇಶದ ಇವರು, ಮೊದಲ ಮಹಿಳಾ ಹರಿಕಥಾ ನಿರೂಪಕಿ, ಸಂಸ್ಕøತ ವಾಚನದಲ್ಲಿ ವಿಶೇಷ ಕೌಶಲ್ಯ ಹೊಂದಿದ್ದಾರೆ.

ಗೋಪಿನಾಥ್ ಸ್ವೈನ್: ಒಡಿಸ್ಸಾದ ಗಂಜಾಂನ ಇವರು, ಕೃಷ್ಣ ಲೀಲಾ ಗಾಯಕರು, ಸಂಪ್ರದಾಯವನ್ನು ಉಳಿಸಲು ಮತ್ತು ಪ್ರಚಾರ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.

ಸ್ಮೃತಿ ರೇಖಾ ಚಕ್ಮಾ: ತ್ರಿಪುರಾದ ಇವರು ಚಕ್ಮಾ ಲೋಯಿನ್‍ಲೂಮ್ ಶಾಲ್ ನೇಕಾರರು, ಪರಿಸರ ಸ್ನೇಹಿ ಬಣ್ಣ ಬಳಸಿ ಹತ್ತಿ ಎಳೆಗಳನ್ನು ಸಾಂಪ್ರದಾಯಿಕ ವಿನ್ಯಾಸಗಳಾಗಿ ಪರಿವರ್ತಿಸಿ, ನೈಸರ್ಗಿಕ ಬಣ್ಣಗಳ ಬಳಕೆಗೆ ಉತ್ತೇಜನ ನೀಡಿದ್ದಾರೆ.

ಓಂಪ್ರಕಾಶ್ ಶರ್ಮಾ: ಮಧ್ಯಪ್ರದೇಶದ ಇವರು ಮಾಲ್ವಾ ಪ್ರದೇಶದ ಈ 200 ವರ್ಷಗಳ ಹಳೆಯ ಸಾಂಪ್ರದಾಯಿಕ ನೃತ್ಯ ನಾಟಕವನ್ನು ಪ್ರಚಾರ ಮಾಡಲು ತಮ್ಮ ಜೀವನದ 7 ದಶಕಗಳನ್ನು ಮೀಸಲಿಟ್ಟ ಮ್ಯಾಕ್ ಥಿಯೇಟರ್ ಕಲಾವಿದರಾಗಿದ್ದಾರೆ.

ನಾರಾಯಣನ್ ಇಪಿ: ಕೆರಳದ ಕಣ್ಣೂರಿನ ಹಿರಿಯ ತೆಯ್ಯಂ ಜಾನಪದ ನೃತ್ಯಗಾರರು – ವಸ್ತ್ರ ವಿನ್ಯಾಸ ಮತ್ತು ಮುಖವರ್ಣಿಕೆ ತಂತ್ರಗಳನ್ನು ಒಳಗೊಂಡಂತೆ ಇಡೀ ತೆಯ್ಯಂನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ.

ಭಗಬತ್ ಪದಾನ್: ಒಡಿಸ್ಸಾದ ಇವರು, ಬಾರ್ಗಢ್‍ನ ಶಬ್ದ ನೃತ್ಯ ಜಾನಪದ ನೃತ್ಯದ ಕಲಾವಿದರು.

ಸನಾತನ ರುದ್ರ ಪಾಲ್: ಪಶ್ಚಿಮ ಬಂಗಾಳದ ಇವರು, 5 ದಶಕಗಳ ಅನುಭವ ಹೊಂದಿರುವ ಪ್ರತಿಷ್ಠಿತ ಶಿಲ್ಪಿ, ಸಾಂಪ್ರದಾಯಿಕ ಕಲಾ ಪ್ರಕಾರವನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ – ಸಬೇಕಿ ದುರ್ಗಾ ವಿಗ್ರಹಗಳನ್ನು ರಚಿಸುವಲ್ಲಿ ಪರಿಣತಿ ಹೊಂದಿದ್ದಾರೆ.

ಬದ್ರಪ್ಪನ್ ಎಂ: ಕೊಯಮತ್ತೂರಿನ ವಲ್ಲಿ ಓಯಿಲ್ ಕುಮ್ಮಿ ಜಾನಪದ ನೃತ್ಯದ ಪ್ರತಿಪಾದಕ – `ಮುರುಗ್ಗನ್’ ಮತ್ತು `ವಲ್ಲಿ’ ದೇವತೆಗಳ ಕಥೆಗಳ ಹಾಡು ಮತ್ತು ನೃತ್ಯ ಪ್ರದರ್ಶನದ ಕಲಾವಿದರಾಗಿದ್ದಾರೆ.

ಜೋರ್ಡಾನ್ ಲೆಪ್ಚಾ: ಸಿಕ್ಕಿಮ್‍ನ ಲೆಪ್ಚಾ ಬುಡಕಟ್ಟಿನ ಸಾಂಸ್ಕೃತಿಕ ಪರಂಪರೆಯನ್ನು ಪೆÇೀಷಿಸುವ ಮಂಗನ್‍ನ ಬಿದಿರಿನ ಕುಶಲಕರ್ಮಿಯಾಗಿದ್ದಾರೆ. 25 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.

ಮಚಿಹನ್ ಸಾಸಾ: ಮಣಿಪುರದ ಉಖ್ರುಲ್‍ನ ಲಾಂಗ್‍ಪಿ ಪ್ರಾಚೀನ ಮಣಿಪುರಿ ಸಾಂಪ್ರದಾಯಿಕ ಕುಂಬಾರಿಕೆಯನ್ನು ಸಂರಕ್ಷಿಸಲು 5 ದಶಕಗಳನ್ನು ಮೀಸಲಿಟ್ಟರು, ಇದು ನವಶಿಲಾಯುಗದ ಅವಧಿಗೆ (ಕ್ರಿ.ಪೂ. 10,000) ಹಿಂದಿನದ್ದಾಗಿದೆ.

ಗಡ್ಡಂ ಸಮ್ಮಯ್ಯ: ತೆಲಂಗಾಣದ ಇವರು, 5 ದಶಕಗಳಿಂದ 19,000 ಪ್ರದರ್ಶನಗಳಲ್ಲಿ ಈ ಶ್ರೀಮಂತ ಪರಂಪರೆಯ ಕಲಾ ಪ್ರಕಾರವನ್ನು ಪ್ರದರ್ಶಿಸುತ್ತಿರುವ ಜನಾಂವ್‍ನ ಖ್ಯಾತ ಚಿಂದು ಯಕ್ಷಗಾನಂ ರಂಗಭೂಮಿ ಕಲಾವಿದರು.

ಜಂಕಿಲಾಲ್: ರಾಜಸ್ಥಾನದ ಭಿಲ್ವಾರದ ಬೆಹ್ರುಪಿಯಾ ಕಲಾವಿದ, ಮರೆಯಾಗುತ್ತಿರುವ ಕಲಾ ಪ್ರಕಾರವನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು 6 ದಶಕಗಳಿಂದ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದಾರೆ.

ದಾಸರಿ ಕೊಂಡಪ್ಪ: ತೆಲಂಗಾಣದ ನಾರಾಯಣಪೇಟೆಯ ದಾಮರಗಿಡ್ಡ ಗ್ರಾಮದ ಮೂರನೇ ತಲೆಮಾರಿನ ಬುರ್ರವೀಣಾ ವಾದಕ ಕಲಾಕೃತಿಯನ್ನು ಉಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ.

ಬಾಬು ರಾಮ್ ಯಾದವ್: ಸಾಂಪ್ರದಾಯಿಕ ಕರಕುಶಲ ತಂತ್ರಗಳನ್ನು ಬಳಸಿಕೊಂಡು ಸಂಕೀರ್ಣವಾದ ಹಿತ್ತಾಳೆ ಕಲಾಕೃತಿಗಳನ್ನು ರಚಿಸುವಲ್ಲಿ 6 ದಶಕಗಳ ಅನುಭವ ಹೊಂದಿರುವ ಹಿತ್ತಾಳೆ ಮರೋರಿ ಕುಶಲಕರ್ಮಿ.

ನೇಪಾಳ ಚಂದ್ರ ಸೂತ್ರಧರ್: ಪಶ್ಚಿಮ ಬಂಗಾಳದ ಇವರು ಛೌ ಮುಖವಾಡ ತಯಾರಿಕೆಯ ಸಂರಕ್ಷಣೆಯಲ್ಲಿ ಕಳೆದ 50 ವರ್ಷಗಗಳಿಂದ ಕೆಲಸ ಮಾಡುತ್ತಿದ್ದಾರೆ. 70 ಕ್ಕೂ ಹೆಚ್ಚು ಛೌ ನೃತ್ಯ ಗುಂಪುಗಳಿಗೆ ತರಬೇತಿ ನೀಡಿದ್ದಾರೆ.

TAGGED:Padma Awards 2024Padma Shrirepublic day
Share This Article
Facebook Whatsapp Whatsapp Telegram

Cinema Updates

Son of Sardaar
ಸನ್ ಆಫ್ ಸರ್ದಾರ್‌ -2 ರಿಲೀಸ್ ಡೇಟ್ ಮುಂದೂಡಿಕೆ
Bollywood Cinema Latest Top Stories
Darshan Devil 3
ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ
Cinema Latest Main Post Sandalwood
Dalapathi Vijay
ಸಂಕ್ರಾಂತಿಗೆ ವಿಜಯ್ ದಳಪತಿ-ಶಿವಕಾರ್ತಿಕೇಯನ್ ಮುಖಾಮುಖಿ
Cinema Latest South cinema Top Stories
shah rukh khan small
ಶೂಟಿಂಗ್ ವೇಳೆ ನಟ ಶಾರುಖ್ ಖಾನ್‌ಗೆ ಗಾಯ
Bollywood Cinema Latest Main Post
fish venkat
ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ
Cinema Latest South cinema Top Stories

You Might Also Like

janardhan reddy sriramulu
Koppal

ಮುನಿಸು ಮರೆತು ಒಂದಾದ ರೆಡ್ಡಿ-ರಾಮುಲು; ಇಬ್ಬರ ಕೈ ಹಿಡಿದೆತ್ತಿದ ವಿಜಯೇಂದ್ರ

Public TV
By Public TV
5 minutes ago
B Y Vijayendra
Districts

ಸಿಎಂ ಮೊದಲು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಉತ್ತರ ನೀಡಲಿ: ವಿಜಯೇಂದ್ರ ಸವಾಲು

Public TV
By Public TV
6 minutes ago
Dharmasthala 3
Bengaluru City

ಧರ್ಮಸ್ಥಳ ಫೈಲ್ಸ್ – ಸಮಾಧಿಯೊಳಗಿನ `ಸತ್ಯ’ ಹೇಳುತ್ತಾ ಅಸ್ಥಿಪಂಜರ?

Public TV
By Public TV
8 minutes ago
BBMP
Bengaluru City

ಬಿಬಿಎಂಪಿ ಪಂಚ ಭಾಗ – ಕೇಸರಿ ತೀವ್ರ ವಿರೋಧ, ಹೋರಾಟದ ಎಚ್ಚರಿಕೆ

Public TV
By Public TV
26 minutes ago
R Ashok 1
Bengaluru City

ಡಿಕೆಶಿಯನ್ನು ಮುಗಿಸಲು ನಡೆಸಿದ ಸಮಾವೇಶ: ಆರ್.ಅಶೋಕ್

Public TV
By Public TV
32 minutes ago
Tamil Nadu Wife Stabbed By Husband In Hospital
Crime

Tamil Nadu | ಪತಿಯೊಂದಿಗೆ ಜಗಳ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಗಂಡ

Public TV
By Public TV
45 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?