Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cricket

ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

Public TV
Last updated: November 19, 2023 8:33 am
Public TV
Share
3 Min Read
world cup team india
SHARE

ಅಹಮದಾಬಾದ್: ಸೋಲಿಗೆ ಸೇಡು ತೀರಿಸಿಕೊಂಡಿದ್ದ ಟೀಂ ಇಂಡಿಯಾ (Team India) ಇಂದು ಮತ್ತೊಂದು ಅಂತಹದ್ದೆ ಮೆಗಾ ರೈವರ್ಲಿಗೆ ಸಜ್ಜಾಗಿದೆ. ಆದರೆ ಇದು ನಿನ್ನೆ ಮೊನ್ನೆಯ ಸೇಡಲ್ಲ, ಬರೊಬ್ಬರಿ 20 ವರ್ಷಗಳ ಹಿಂದಿನ ಸೇಡು.

ಕಳೆದ 20 ವರ್ಷಗಳ ಹಿಂದೆ ಅಂದರೆ 2003ರ ವಿಶ್ವಕಪ್ (World Cup) ಫೈನಲ್ ಪಂದ್ಯ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧವೇ ಮುಗ್ಗರಿಸಿತ್ತು. 2ನೇ ಬಾರಿಗೆ ಫೈನಲ್‌ಗೇರಿ ಚಾಂಪಿಯನ್ ಆಗೇಬಿಡುತ್ತೆ ಎಂದು ಕಾದು ಕುಳಿತಿದ್ದ ಕೋಟಿ ಕೋಟಿ ಭಾರತೀಯ ಅಭಿಮಾನಿಗಳ ಆಸೆ ನೂಚ್ಚುನೂರಾಗಿದ್ದ ದಿನ ಅದು. ಆ ದಿನ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಈಗ ಹಳೆಯ ಸೋಲಿನ ನೋವನ್ನು ಮುಯ್ಯಿ ಸಮೇತ ವಾಪಸ್ ಕೊಡಲು ರೆಡಿ ಆಗಿದೆ.

WORLD CUP 2023. IND Vs AUSpng

ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಮುಖಾಮುಖಿಯ ಬಲವನ್ನು ನೋಡುವುದಾದರೆ ಭಾರತ ತಂಡಕ್ಕಿಂತ ಆಸ್ಟ್ರೇಲಿಯಾ ತಂಡವೇ ಬಲಿಷ್ಠವಾಗಿರೋದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ವಿಶ್ವಕಪ್ ಇತಿಹಾಸದಲ್ಲಿ 13 ಬಾರಿಗೆ ಮುಖಾಮುಖಿ ಆಗಿರೋ ಉಭಯ ತಂಡಗಳಲ್ಲಿ ಭಾರತ ಗೆದ್ದಿರೋದು ಕೇವಲ 5 ಪಂದ್ಯಗಳು ಮಾತ್ರ. ಉಳಿದಂತೆ ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡುವುದಾದರೆ ಕಳೆದ 3 ಬಾರಿಯ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತವೇ ಪ್ರಾಬಲ್ಯ ಮೆರೆದಿರೋದು. 2011-2023 ರವರೆಗೆ ಒಟ್ಟು 4 ಬಾರಿ ಎದುರಾಗಿದ್ದು, ಭಾರತ 3 ಬಾರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

ಆಸೀಸ್ ಮುಖಾಮುಖಿಯ ಅಂಕಿ ಅಂಶಗಳು:
* 1983ರ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಭಾರತಕ್ಕೆ 162 ರನ್‌ಗಳ ಸೋಲು.
* 1984ರ ವಿಶ್ವಕಪ್‌ನಲ್ಲೆ 2ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಜಯ. ಆಸೀಸ್ ವಿರುದ್ಧ 118 ರನ್‌ಗಳ ಜಯ.
* 1987 ರಲ್ಲಿ 3ನೇ ಮುಖಾಮುಖಿ. ಭಾರತಕ್ಕೆ 1 ರನ್‌ಗಳ ವಿರೋಚಿತ ಸೋಲು.
* 1987 ರಲ್ಲಿ 4ನೇ ಬಾರಿ ಮುಖಾಮುಖಿ. ಭಾರತಕ್ಕೆ 56 ರನ್‌ಗಳ ಜಯ.
* 1992 ರಲ್ಲಿ 5ನೇ ಮುಖಾಮುಖಿ. ಭಾರತಕ್ಕೆ 3 ರನ್‌ಗಳ ವಿರೋಚಿತ ಸೋಲು.
* 1996 ರಲ್ಲಿ 6ನೇ ಮುಖಾಮುಖಿ. ಲೀಗ್ ಭಾರತಕ್ಕೆ 16 ರನ್‌ಗಳ ಸೋಲು.
* 2003 ರಲ್ಲಿ 7ನೇ ಮುಖಾಮುಖಿ. ಲೀಗ್ ಮ್ಯಾಚ್‌ನಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಸೋಲು.
* 2003ರ ಫೈನಲ್‌ನಲ್ಲಿ 8ನೇ ಬಾರಿಗೆ ಮುಖಾಮುಖಿ. 125 ರನ್‌ಗಳ ಸೋಲು.
* 2011 ರಲ್ಲಿ 9ನೇ ಮುಖಾಮುಖಿ. ಸೆಮಿಸ್‌ನಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಜಯ.
* 2015ರಲ್ಲಿ 10ನೇ ಮುಖಾಮುಖಿ ಸೆಮಿಸ್‌ನಲ್ಲಿ ಭಾರತಕ್ಕೆ 95 ರನ್‌ಗಳ ಸೋಲು.
* 2019 ರಲ್ಲಿ 11ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 36 ರನ್‌ಗಳ ಜಯ.
* 2023 ರಲ್ಲಿ ಲೀಗ್‌ನಲ್ಲಿ 12ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 6 ವಿಕೆಟ್‌ಗಳ ಜಯ.

ಒಟ್ಟಾರೆ ಇಲ್ಲಿಯತನಕ ಒಂದು ಲೆಕ್ಕ ಆದರೆ, ಇಂದಿನಿಂದ ಮತ್ತೊಂದು ಲೆಕ್ಕ. ಟೀಂ ಇಂಡಿಯಾ ಇಂದಿನ ಫೈನಲ್ ಗೆಲ್ಲೋ ಮೂಲಕ 2003 ನಿಮ್ಮ ಸಮಯ ಆದರೆ, 2023 ನಮ್ಮ ಸಮಯ ಅನ್ನೋದನ್ನು ತೋರಿಸಬೇಕಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

TAGGED:Ahmedabadaustraliacricketindiamodi stadiumTeam indiaworld cupWorld Cup 2023ಅಹಮದಾಬಾದ್ಆಸ್ಟ್ರೇಲಿಯಾಕ್ರಿಕೆಟ್ಟೀಂ ಇಂಡಿಯಾಭಾರತಮೋದಿ ಸ್ಟೇಡಿಯಂವಿಶ್ವಕಪ್ವಿಶ್ವಕಪ್‌ 2023
Share This Article
Facebook Whatsapp Whatsapp Telegram

Cinema Updates

Arjun Janya
ಅರ್ಜುನ್ ಜನ್ಯ ನಿರ್ದೇಶನದ ಚಿತ್ರಕ್ಕೆ ಉಗಾಂಡ ಕಲಾವಿದರ ಮೆರಗು
37 minutes ago
Timmana Mottegalu 4
ತಿಮ್ಮನ ಮೊಟ್ಟೆಗಳು ಟ್ರೈಲರ್‌ಗೆ ಭಾರೀ ಮೆಚ್ಚುಗೆ
46 minutes ago
Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
18 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
20 hours ago

You Might Also Like

neet topper mahesh kumar
Latest

NEET-UG 2025 ಫಲಿತಾಂಶ ಪ್ರಕಟ; ರಾಜಸ್ಥಾನದ ಅಭ್ಯರ್ಥಿ ಟಾಪರ್‌, ಕರ್ನಾಟಕದ ನಿಖಿಲ್‌ಗೆ 17ನೇ ರ‍್ಯಾಂಕ್‌

Public TV
By Public TV
9 minutes ago
Rajasthan Youth Tea Selling 1
Latest

ಅತ್ತೆ ಮನೆ ಮುಂದೆ ಅಳಿಯನ ಟೀ ಅಂಗಡಿ – ಕೈಗೆ ಕೋಳ ಧರಿಸಿ ಚಹಾ ಮಾರಾಟ

Public TV
By Public TV
51 minutes ago
Nikhil Kumaraswamy 1 2
Bengaluru City

ಕೇಂದ್ರ ಜಾತಿಗಣತಿ ಮಾಡೋವಾಗ ರಾಜ್ಯ ಸರ್ಕಾರದಿಂದ ಜಾತಿಗಣತಿ ಬೇಡ: ನಿಖಿಲ್ ಕುಮಾರಸ್ವಾಮಿ

Public TV
By Public TV
54 minutes ago
Nikhil Kumaraswamy
Bengaluru City

ರಾಜ್ಯಕ್ಕೆ ಅನುದಾನದ ಕೊರತೆ ಆಗಿದ್ದರೆ ಪ್ರಧಾನಿಗಳ ಜೊತೆ ಸಿಎಂ ಮಾತಾಡಲಿ: ನಿಖಿಲ್ ಕುಮಾರಸ್ವಾಮಿ

Public TV
By Public TV
1 hour ago
Ram Mohan Naidu
Latest

ಏರ್‌ ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್‌ಲೈನ್: ಸಚಿವ ರಾಮಮೋಹನ್ ನಾಯ್ಡು

Public TV
By Public TV
1 hour ago
Payal Khatik 2
Latest

Plane Crash | ಇಂಜಿನಿಯರ್‌ ಆಗುವ ಕನಸು ಕಂಡಿದ್ದ ಆಟೋ ಚಾಲಕನ ಮಗಳ ದುರಂತ ಅಂತ್ಯ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?