Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

Public TV
Last updated: July 6, 2023 9:46 am
Public TV
Share
3 Min Read
yuva
SHARE

ಯುವರಾಜ್‌ಕುಮಾರ್ (Yuva Rajkumar) ಹಾಗೂ ಶ್ರೀದೇವಿ (Sridevi)  ದಂಪತಿ ತಾತನ ಮನೆಯ ಮಡಿಲಲ್ಲಿ ಒಂದು ದಿನ ಕಳೆದಿದ್ದಾರೆ. ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ಅಣ್ಣಾವ್ರು ಹುಟ್ಟಿ ಬೆಳೆದ ಜಾಗದಲ್ಲಿ ಓಡಾಡಿದ್ದಾರೆ. ಆ ಪುಟ್ಟ ಗುಡಿಸಲಲ್ಲಿ ಜೋಗುಳ ಕೇಳಿಸಿಕೊಂಡಿದ್ದ ರಾಜ್‌ಕುಮಾರ್ ದೇವರನ್ನು ನೆನೆದು ಆಶೀರ್ವಾದ ಬೇಡಿದ್ದಾರೆ. ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಹೊಸ ಕುದುರೆ ಓಡುತ್ತಿದೆ. ಏನೆಂದು ಬೇಡಿಕೊಂಡರು ಯುವರಾಜ್‌ಕುಮಾರ್ ? ಅಪ್ಪು ನೆನೆದು ಯಾಕೆ ಭಾವುಕರಾದರು? ಯುವ ಸಿನಿಮಾ ಎಲ್ಲಿಗೆ ಬಂದಿದೆ? ಏನಾಯ್ತು.. ಇಲ್ಲಿದೆ ಅಪ್‌ಡೇಟ್

yuva rajkumar

ಅಣ್ಣಾವ್ರು..ಮೂರು ಅಕ್ಷರಗಳ ಈ ಶಬ್ದ ಕೇಳಿದರೆ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಅದೊಂದು ಕಣ್ಣಿಗೆ ಕಂಡ ದೇವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ಇದ್ದರೆ ಇರಬೇಕಪ್ಪಾ ನಮಗೆ ರಾಜ್ಕುಮಾರ್‌ರಂಥ ಮಗ ಎಂದು ಭಾವುಕರಾಗುತ್ತಾರೆ. ಅದು ಅಣ್ಣಾವ್ರು ಗಳಿಸಿದ ಆಸ್ತಿ. ಕನ್ನಡಿಗರ ಮನದಲ್ಲಿ ಬೇರು ಬಿಟ್ಟ ಕಿತ್ತಿ ಒಗೆಯಲಾದ ಶಕ್ತಿ. ರಾಜ್ ಕೇವಲ ಸಿನಿಮಾದಿಂದ ಮಾತ್ರ ನಮ್ಮಲ್ಲಿ ಪ್ರೀತಿ ಹುಟ್ಟಿಸಲಿಲ್ಲ. ಅದನ್ನು ಮೀರಿದ ಜೀವನ ಪಾಠ ಕಲಿಸಿದರು. ಎಷ್ಟೇ ಎತ್ತರಕ್ಕೆ ಬೆಳೆದರೂ ನಿಂತ ನೆಲ ಮರೆಯಬೇಡ ಹತ್ತಿ ಬಂದ ಏಣಿಯನ್ನು ದೂರ ತಳ್ಳಬೇಡ ಇದನ್ನೆಲ್ಲ ಅವರು ಹೇಳಲಿಲ್ಲ. ಹಾಗೆಯೇ ಬದುಕಿ ಬಿಟ್ಟರು. ಆ ಹಾದಿಯಲ್ಲಿ ಶಿವಣ್ಣ, ರಾಘಣ್ಣ- ಅಪ್ಪು ನೀರು ಚೆಲ್ಲುತ್ತಾ ನಡೆದರು. ಇದನ್ನೂ ಓದಿ:‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್

yuvaraj kumar

ಅಪ್ಪು…ಅದೊಂದು ಜೀವವನ್ನು ನೆನೆಸಿಕೊಳ್ಳುವುದೇ ಸಣ್ಣ ಕರುಳಿಗೆ ಸಂಕಟ. ಎಲ್ಲೇ ರಾಜರತ್ನನ ಭಾವಚಿತ್ರ ನೋಡಲಿ…ಯಾರೇ ಆಗಿರಲಿ…ಕ್ಷಣ ಮನಸು ಕಲ್ಲವಿಲ…ಅಲ್ಲಕಲ್ಲೋಲ. ನಿಜಕ್ಕೂ ಪುನೀತ್ ನಮ್ಮ ಜೊತೆ ಇಲ್ಲವಾ? ಅದು ಸಾಧ್ಯವಾಗಿದ್ದು ಸತ್ಯವಾ? ಈ ಪ್ರಶ್ನೆಗಳೆ ಎದೆಯಲ್ಲಿ ಜೋಕಾಲಿ. ಏನು ಮಾಡಿದರೂ…ಎಷ್ಟು ನಿತ್ರಾಣವಾದರೂ. ಇಲ್ಲ…ಅಪ್ಪು ಮತ್ತೆ ಕಣ್ಣ ಮುಂದೆ ನಿಲ್ಲುವುದಿಲ್ಲ. ಅದನ್ನು ಅರಗಿಸಿಕೊಳ್ಳಲಾಗದೆ ನಾವು ಹೈರಾಣುವುದು ತಪ್ಪುವುದಿಲ್ಲ. ಇದೇ ಅಪ್ಪು, ಅಪ್ಪಾಜಿಯ ಜೀವಜ್ಜೀವ ಕೂಸಾಗಿದ್ದರು. ಕೊನೇ ಮಗ…ಅಚ್ಚೆ ಅಚ್ಚೇ ಮಾಡಿ ಬೆಳೆಸಿದ ಕಂದನ ಸಾವನ್ನು ಅಪ್ಪ ಅಮ್ಮ ನೋಡಲಿಲ್ಲವಲ್ಲ…ಅದೇ ಅಗತ್ಯಕ್ಕಿಂತ ಹೆಚ್ಚಲ್ಲದ ಸಮಾಧಾನ.

YUVA

ಪುನೀತ್ ಕೂಡ ಗಾಜನೂರಿಗೆ (Gajunuru) ಹೋಗುತ್ತಿದ್ದರು. ಬಾಲ್ಯದಲ್ಲಿ ಹಳ್ಳಿಯ ಮಣ್ಣಿನಲ್ಲಿ ಮಗುವಾಗುತ್ತಿದ್ದರು. ತೋಟದಲ್ಲಿ ಹಣ್ಣು ಕೀಳುತ್ತಾ, ಬಾವಿಯಲ್ಲಿ ಈಜಾಡುತ್ತಾ, ಹೊಟ್ಟೆ ಹಸಿದಾಗ ಅಜ್ಜಿ ಕೈ ತುತ್ತು ಹೊಟ್ಟೆಗಿಳಿಸುತ್ತಾ ಬೆಳೆದರು. ದೊಡ್ಡವರಾದ ಮೇಲೂ ಆ ನೆನಪನ್ನು ಅಳಿಸಿ ಹಾಕಲಿಲ್ಲ. ಗಾಜನೂರಿನ ಸುತ್ತ ಮುತ್ತ ಶೂಟಿಂಗ್ ನಡೆದರೆ ಸಾಕು…ಅಪ್ಪ ಹುಟ್ಟಿದ ಮನೆಯ ಕದ ತಟ್ಟುತ್ತಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ ಯುವರಾಜ್‌ಕುಮಾರ್. ತಾತನ ಜೊತೆ ಇದೇ ಹಳ್ಳಿಯಲ್ಲಿ ಓಡಾಡಿದ್ದು, ತುತ್ತು ಗಂಟಲಿಗೆ ಇಳಿಸಿದ್ದನ್ನು ನೆನೆಯುತ್ತಾರೆ. ಅಪ್ಪು ಚಿಕ್ಕಪ್ಪನ ಹೆಗಲ ಮೇಲೆ ಕುಂತಿದ್ದು…ಎಲ್ಲವೂ ಈಗತಾನೇ ಅರಳಿದ ಹೂವಿನ ಘಮಲು. ಮತ್ತೆ ಅದೇ ಗುಡಿಸಲಿ ಮುಂದೆ ಯುವ ದಂಪತಿ…

YUVA

ಯುವರಾಜ್‌ಕುಮಾರ್, ಶ್ರೀದೇವಿ…ಇಬ್ಬರೂ ಬಿಡುವು ಮಾಡಿಕೊಂಡು ಗಾಜನೂರಿಗೆ ಹೋಗಿದ್ದಾರೆ. ಊರಿನ ತುಂಬಾ ಸುತ್ತಾಡಿದ್ದಾರೆ. ಬಾಲ್ಯದ ನೆನಪುಗಳಿಗೆ ಮರು ಜೀವ ನೀಡಿದ್ದಾರೆ. ತಾತನ ಜೊತೆ ಬಂದಿದ್ದು ಸಂಭ್ರಮ.ಅಪ್ಪು ಜೊತೆ ಇರಲಾರದ್ದು ತೀರಲಾಗದ ಸಂಕಟ. ಎರಡನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಾ. ಆ ಇಬ್ಬರು ದೇವರ ಆಶೀರ್ವಾದ ಬೇಡಿದ್ದಾರೆ. ನಿಮ್ಮ ಹೆಸರನ್ನು ಉಳಿಸಿ ಬೆಳೆಸುವ ಶಕ್ತಿ ಕೊಡು ಎಂದು ಕೈ ಮುಗಿದಿದ್ದಾರೆ. ಕಾರಣ ಯುವ ಸಿನಿಮಾ ಕೆಲವೇ ತಿಂಗಳಲ್ಲಿ ಮೆರವಣಿಗೆ ಹೊರಡಲಿದೆ. ಅಪ್ಪು ಬಿಟ್ಟು ಹೋದ ಜಾಗವನ್ನು ತುಂಬಬೇಕಾದ ಅಗತ್ಯ ಹಾಗೂ ಜವಾಬ್ದಾರಿ ಯುವ ಹೆಗಲ ಮೇಲಿದೆ. ದೊಡ್ಮನೆ ಬಾವುಟ ಹಾರಿಸುವ ಶಪಥ ಬಾಕಿ ಇದೆ.

‘ಯುವ’ (Yuva Kannada Film) ಚಿತ್ರ ಈಗಾಗಲೇ ಶೇಕಡಾ ಐವತ್ತರಷ್ಟು ಮುಗಿದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ಕ್ಯಾಮೆರಾ ಹಿಂದೆ ನಿಂತು…ಯುವ ರಾಜನ ಕಿರೀಟಕ್ಕೆ ಮುತ್ತಿನ ಹರಳನ್ನು ಪೋಣಿಸುತ್ತಿದ್ದಾರೆ. ಯುವ ಕೂಡ ಅಷ್ಟೇ ನಿಯತ್ತಿನಿಂದ ಬಣ್ಣ ಹಚ್ಚುತ್ತಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ಖಜಾನೆ ತೆಗೆದು ಕುಳಿತಿದೆ. ಎಲ್ಲರ ಕಣ್ಣಲ್ಲಿ ಮನಸಲ್ಲಿ ಒಂದೇ ಒಂದು ಆಸೆ ಒಂದೇ ಒಂದು ಗುರಿ ಅದೇ ಯುವರಾಜನ ಮಹಾ ಜಾತ್ರೆ. ಕನ್ನಡಿಗರು ಮತ್ತೆ ದೊಡ್ಮನೆಯ ಕುಡಿಯನ್ನು ಹೊತ್ತು ಮೆರೆಸಬೇಕು. ಅಪ್ಪು ನೋವನ್ನು ಮರೆಸಬೇಕು. ಇದಷ್ಟೇ ಕಾಳಜಿ ಕಕ್ಕುಲಾತಿ. ಅಣ್ಣಾವ್ರ ಮೊಮ್ಮಗ, ಅಪ್ಪು ಚಿಕ್ಕಪ್ಪನ ಮಗನಿಗೆ ನವಿಲು ಗರಿ ಬೀಸಣಿಕೆ ಬೀಸದಿರುತ್ತಾರಾ ಕನ್ನಡಿಗರು?

ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್

TAGGED:Hombale FilmsPuneeth Rajkumarsrideviyuva filmyuvarajkumarಯುವ ರಾಜ್ ಕುಮಾರ್ಯುವ ಸಿನಿಮಾಶ್ರೀದೇವಿಸಪ್ತಮಿ ಗೌಡಹೊಂಬಾಳೆ ಫಿಲ್ಮ್ಸ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
12 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
13 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
16 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
1 day ago

You Might Also Like

Ahmedabad Planecrash
Latest

ದುರಂತಕ್ಕೀಡಾದ ಏರ್ ಇಂಡಿಯಾ ವಿಮಾನದ 12ರಲ್ಲಿ 9 ಸಿಬ್ಬಂದಿ ಮುಂಬೈ ವಾಸಿಗಳು

Public TV
By Public TV
17 minutes ago
CRIME
Bengaluru City

1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್

Public TV
By Public TV
44 minutes ago
krs dam selfie
Latest

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಭದ್ರತಾ ವೈಫಲ್ಯ?- ಡ್ಯಾಂನ ಕ್ರಸ್ಟ್ ಗೇಟ್ ಬಳಿ ಓಡಾಡುತ್ತ ಸೆಲ್ಫಿ ವೀಡಿಯೋ

Public TV
By Public TV
1 hour ago
Haveri Car Bus Accident
Crime

ಹಾವೇರಿ | ಸಾರಿಗೆ ಬಸ್‌ಗೆ ಕಾರು ಡಿಕ್ಕಿ – ಇಬ್ಬರು ದುರ್ಮರಣ, ಓರ್ವ ಗಂಭೀರ

Public TV
By Public TV
2 hours ago
Narayanapura Dam
Districts

ನಾರಾಯಣಪುರ ಜಲಾಶಯಕ್ಕೆ ಒಳಹರಿವು ಹೆಚ್ಚಳ – ಕೃಷ್ಣಾ ನದಿಗೆ 29,226 ಕ್ಯೂಸೆಕ್ ನೀರು ಬಿಡುಗಡೆ

Public TV
By Public TV
2 hours ago
Ahmedabad Air India Plane Crash 2
Latest

ಏರ್‌ ಇಂಡಿಯಾ ವಿಮಾನ ದುರಂತ – ಸಾವಿನ ಸಂಖ್ಯೆ 274ಕ್ಕೆ ಏರಿಕೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
Welcome Back!

Sign in to your account

Username or Email Address
Password

Lost your password?