Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ನಂಜನಗೂಡು ನಂಜುಂಡೇಶ್ವರನ ಬಳಿ ಯಶ್ ಕೇಳಿದ್ದೇನು?

Public TV
Last updated: June 23, 2023 12:55 pm
Public TV
Share
3 Min Read
yash 1
SHARE

ಯಶ್ (Yash) ನಯಾ ಯುದ್ಧಕ್ಕೆ ಸಜ್ಜಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಸಿನಿಮಾದ ಮಾಹಿತಿ ಜಗತ್ತಿನ ಮುಂದೆ ಇಡಲಿದ್ದಾರೆ. ಅಖಾಡ ಸಿದ್ಧವಾಗಿದೆ. ಕುದುರೆ ಏರುವುದೊಂದೇ ಬಾಕಿ. ಅದಕ್ಕೂ ಮುನ್ನ ಮನೆ ದೇವರು ನಂಜುಂಡೇಶ್ವರನ (Nanjundeshwar) ಪಾದಕ್ಕೆ ಶರಣಾಗಿದ್ದಾರೆ. ಮಹಾ ಗೆಲುವಿಗಾಗಿ ಬೇಡಿಕೊಂಡಿದ್ದಾರೆ. ಇನ್ನೇನು ಕೋರಿಕೊಂಡರು ರಾಕಿಭಾಯ್? ನಯಾ ಸಿನಿಮಾ ಘೋಷಣೆ ಯಾವಾಗಂತೆ? ಬಾಲಿವುಡ್‌ಗೆ ಹೋಗಲಿದ್ದಾರಾ ರಾಮಾಚಾರಿ? ಇಂತಹ ಪ್ರಶ್ನೆಗಳು ಸಹಜವಾಗಿಯೇ ಅಭಿಮಾನಿಗಳಲ್ಲಿ ಮೂಡಿವೆ.

Yash 2

ರಾಕಿಭಾಯ್ ಚಿತ್ತ. ಹೊಸ ಸಿನಿಮಾದತ್ತ. ಈ ಹಿಂದೆ ಮಾಡಿದ ಸಿನಿಮಾಗಳದ್ದು ಒಂದು ತೂಕವಾದರೆ. ಈಗ ಮಾಡಲಿರುವ ಚಿತ್ರದ್ದು ಭೂಮಿ ತೂಕ. ಅದಕ್ಕಾಗಿಯೇ ಕಳೆದ ಎರಡು ಮೂರು ವರ್ಷಗಳಿಂದ ಹುಡುಕಿ ಹುಡುಕಿ ಕತೆ ಮಾಡಿಸಿದ್ದಾರೆ. ಈಗಾಗಲೇ ಚಿತ್ರಕತೆ ಒಂದು ಹಂತಕ್ಕೆ ಬಂದಿದೆ. ತಿದ್ದುವಿಕೆ ನಡೆಯುತ್ತಲೇ ಇರುತ್ತದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಟರ್ ಪಟ್ಟದಲ್ಲಿ ಕುಳಿತಿದ್ದಾರೆ. ಒಂದೊಂದು ವಿಭಾಗವೂ ಹಗಲು ರಾತ್ರಿ ಬೆವರು ಸುರಿಸುತ್ತಿದೆ. ಈ ಸಮಯದಲ್ಲಿಯೇ ರಾಕಿಭಾಯ್ ಮನೆ ದೇವರು ನಂಜನಗೂಡು (Nanjangudu) ನಂಜುಂಡೇಶ್ವರನ ಪಾದಕ್ಕೆ ಅಡ್ಡ ಬಿದ್ದಿದ್ದಾರೆ. ದಿವ್ಯ ಗೆಲುವನ್ನು ನೀಡು ಎಂದು ಕೈಮುಗಿದಿದ್ದಾರೆ.

Yash 3

ಯಶ್ ಬಾಲ್ಯದಿಂದಲೇ ಓಡಾಡಿ ಬೆಳೆದ ಜಾಗ ಈ ನಂಜುಂಡೇಶ್ವರನ ಸನ್ನಿಧಿ. ಮೈಸೂರಿನಿಂದ ಹಬ್ಬ ಹರಿದಿನಗಳಲ್ಲಿ ಅಪ್ಪ ಅಮ್ಮ ಹಾಗೂ ಇಬ್ಬರು ಮಕ್ಕಳು ಈ ದೈವ ದರ್ಶನಕ್ಕೆ ಹೋಗುತ್ತಿದ್ದರು. ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಅದನ್ನು ನಿವಾರಿಸು ಭಗವಂತ ಎಂದು ಕೋರುತ್ತಿದ್ದರು. ಡ್ರೈವರ್ ಆಗಿದ್ದ ಅಪ್ಪ. ಮನೆ ಒಡತಿಯಾಗಿದ್ದ ಅಮ್ಮ. ಇಬ್ಬರೂ ಮಕ್ಕಳಿಗೆ ಏನೇನು ಬೇಕೊ ಎಲ್ಲವನ್ನೂ ಕೊಟ್ಟು ಭಾವುಕರಾಗುತ್ತಿದ್ದರು. ಅದೇ ದೇವರ ಮೆಟ್ಟಿಲ ಮೇಲೆ ಇಂದು ಯಶ್ ಮೀಸೆ ತಿರುವುತ್ತಾ ನಿಂತಿದ್ದಾರೆ. ನಂಜುಂಡೇಶ್ವರನ ಅನುಗ್ರಹದಿಂದಲೇ ಈಗ ನ್ಯಾಶನಲ್ ಸ್ಟಾರ್ ಪಟ್ಟದಲ್ಲಿ ಕುಳಿತಿದ್ದಾರೆ.

Yash Radhika Pandit

ಅದೊಂದು ಕಾಲದಲ್ಲಿ ಅಪ್ಪ ಅಮ್ಮನ ಜೊತೆ ಈ ಸನ್ನಿಧಿಗೆ ಹೋಗುತ್ತಿದ್ದ ಯಶ್ ಈಗ ಪತ್ನಿ ರಾಧಿಕಾ ಹಾಗೂ ಇಬ್ಬರು ಮಕ್ಕಳ ಸಮೇತ ಹೋಗುವ ಸಮಯ ಬಂದಿದೆ. ಅಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಕಿ ಈಗ ಕೋಟಿ ಕೋಟಿ ಬೆಲೆ ಬಾಳು ಐಷಾರಾಮಿ ಕಾರಿನಲ್ಲಿ ಹೋಗಿದ್ದಾರೆ. ಇವರಿಗಾಗಿ ವಿಶೇಷ ಪೂಜೆ ಕೂಡ ಮಾಡಲಾಯಿತು. ಕೆಜಿಎಫ್ ಮುಗಿದ ಮೇಲೆ ಯಶ್ ಎಲ್ಲೇ ಸಿಗಲಿ ಎಲ್ಲರೂ ಕೇಳುವುದು ಒಂದೇ ಪ್ರಶ್ನೆ. `ಯಾವಾಗ ಹೊಸ ಸಿನಿಮಾ ಅನೌನ್ಸ್ಮೆಂಟ್ ?’ ಅದಕ್ಕೆ ಸಿದ್ಧರಾಗಿಯೇ ಬಂದಂತಿದ್ದ ಯಶ್ ಮತ್ತೆ ಅದೇ ಮಾತನ್ನು ರಿಪೀಟ್ ಮಾಡಿದರು. ಸದ್ಯದಲ್ಲೇ ಎಲ್ಲವನ್ನೂ ತಿಳಿಸುತ್ತೇನೆ ಎಂದರು. ಇದನ್ನೂ ಓದಿ:ಅನಿಮಲ್ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

Geethu Mohan Das with yash

ಕಾಸು ಕೊಟ್ಟು ನೋಡುವ ಪ್ರೇಕ್ಷಕರಿಗೆ ಯಾವುದೇ ರೀತಿ ಬೇಸರ ಆಗಬಾರದು. ಅಂಥ ಸಿನಿಮಾಕ್ಕಾಗಿಯೇ ಒಂದು ನಿಮಿಷ ವ್ಯರ್ಥ ಮಾಡದೇ ದುಡಿಯುತ್ತಿದ್ದೇನೆ ಎಂದು ಹೇಳಿ ಇನ್ನಷ್ಟು ಕುತೂಹಲ ಮೂಡಿಸಿದರು. ಈ ನಡುವೆ ತೂರಿ ಬಂದ ಪ್ರಶ್ನೆ ಒನ್ಸ್ ಅಗೇನ್ ಅದೇ. ಬಾಲಿವುಡ್‌ನ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರಂತೆ. ಈಗಾಗಲೇ ರಾಮಾಯಣ ತಂಡ ಸಂಪರ್ಕ ಮಾಡಿದೆಯಂತೆ. ಇದೇ ಕೆಲವು ದಿನಗಳಿಂದ ಗಿರಕಿ ಹೊಡೆಯುತ್ತಿತ್ತು. ಹಾಗೆಯೇ ರಜನಿ ಜೊತೆ ಯಶ್ ನಟಿಸಲಿದ್ದಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಅದಕ್ಕೆಲ್ಲ ಖಡಕ್ ಉತ್ತರ ಕೊಟ್ಟು ನಕ್ಕರು.

ಈಗಾಗಲೇ ಯಶ್ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಜಿಎಫ್ (KGF) ಗೆಲುವು ಸುಮ್ಮನೆ ಬಂದಿಲ್ಲ ಎನ್ನುವುದನ್ನು ಅವರು ಸಾಬೀತು ಪಡಿಸಬೇಕಿದೆ. ಕಾರಣ ಕಣ್ಣ ಮುಂದಿದೆ. ಬಾಹುಬಲಿ ನಂತರ ಟಾಲಿವುಡ್ ಸ್ಟಾರ್ ಪ್ರಭಾಸ್ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಎಲ್ಲವೂ ಅಟ್ಟರ್ ಫ್ಲಾಪ್. ರಾಜಮೌಳಿ ಇದ್ದಿದ್ದಕ್ಕೇ ಬಾಹುಬಲಿ ಗೆದ್ದಿತು ಎನ್ನುವ ಮಾತು ಶುರುವಾಗಿದೆ. ಅದೇ ರೀತಿ ಪ್ರಶಾಂತ್ ನೀಲ್ ಮಾತ್ರ ಗೆಲುವಿಗೆ ಕಾರಣ ಎನ್ನುವಂತೆ ಆಗಬಾರದಲ್ಲವೆ? ಅದಕ್ಕಾಗಿ ಹೊಸ ಸಿನಿಮಾ ಜಗತ್ತಿನ ತುಂಬಾ ಮೆರವಣಿಗೆ ಹೊರಡಬೇಕಿದೆ. ಅದೆಲ್ಲ ಲೆಕ್ಕಾಚಾರ ತಲೆಯಲ್ಲಿ ಇಟ್ಟುಕೊಂಡು ಯಶ್ ಯಾಗಕ್ಕೆ ಮೊದಲ ಹೆಜ್ಜೆ ಇಡಲಿದ್ದಾರೆ.

TAGGED:Hosa CinemakgfnanjanguduNanjundeshwarRakibhaiYashಕೆಜಿಎಫ್ನಂಜನಗೂಡುನಂಜುಡೇಶ್ವರಯಶ್ರಾಕಿಭಾಯ್ಹೊಸ ಸಿನಿಮಾ
Share This Article
Facebook Whatsapp Whatsapp Telegram

You Might Also Like

UT Khader Om Birla
Latest

ಲೋಕಸಭಾಧ್ಯಕ್ಷ ಓಂ ಬಿರ್ಲಾರನ್ನು ಭೇಟಿ ಮಾಡಿದ ಯು.ಟಿ.ಖಾದರ್

Public TV
By Public TV
8 minutes ago
weather
Districts

Rain Alert | ಹಾಸನ ಜಿಲ್ಲೆಯ 3, ಉತ್ತರ ಕನ್ನಡ ಜಿಲ್ಲೆಯ 2 ತಾಲೂಕಿನ ಶಾಲೆಗಳಿಗೆ ಗುರುವಾರ ರಜೆ

Public TV
By Public TV
38 minutes ago
donald trump 1
Latest

ಇರಾನ್‌ ಮೇಲೆ ಅಮೆರಿಕ ದಾಳಿ ಸಂಪೂರ್ಣ ಯಶಸ್ವಿಯಾಗಿಲ್ಲ – ಟ್ರಂಪ್ ಮುಜುಗರಕ್ಕೆ ಕಾರಣವಾದ ಗುಪ್ತಚರ ವರದಿ

Public TV
By Public TV
54 minutes ago
Honeymoon Murder 4
Crime

Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

Public TV
By Public TV
56 minutes ago
Jagdeep Dhankar
Latest

ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

Public TV
By Public TV
1 hour ago
Cargo ship
Latest

3,000 ವಾಹನಗಳನ್ನು ಹೊತ್ತೊಯ್ಯುತ್ತಿದ್ದ ಕಾರ್ಗೋ ಶಿಪ್ ಪೆಸಿಫಿಕ್ ಸಾಗರದಲ್ಲಿ ಮುಳುಗಡೆ

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?