ನವದೆಹಲಿ: ಕೇಂದ್ರ ಸರ್ಕಾರದ (Government Of India) ರೋಜ್ಗಾರ್ ಮೇಳದ (Rozgar Mela) ಅಡಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕವಾದ 71 ಸಾವಿರ ಉದ್ಯೋಗಿಗಳಿಗೆ ವರ್ಚುವಲ್ ಆಗಿ ಪ್ರಧಾನಿ ಮೋದಿ (Narendra Modi) ನೇಮಕಾತಿ ಪತ್ರಗಳನ್ನ ವಿತರಿಸಿದರು.
बीते 9 वर्षो में हमने सरकारी भर्ती प्रक्रिया को ज्यादा से ज्यादा सरल और पारदर्शी बनाने का प्रयास किया है। इसका सबसे बड़ा फायदा ये हुआ है कि भ्रष्टाचार और भाई-भतीजावाद की संभावनाएं खत्म हो गई हैं। pic.twitter.com/N9Ke1B1r7i
— Narendra Modi (@narendramodi) May 16, 2023
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನೇಮಕಾತಿ ವ್ಯವಸ್ಥೆಯ ಬದಲಾವಣೆಗಳು ಭ್ರಷ್ಟಾಚಾರಗಳನ್ನು ಕೊನೆಗೊಳಿಸಿವೆ ಎಂದು ವ್ಯಾಖ್ಯಾನಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಪಡೆ ಹಾರಿಸಿದ 18 ಕ್ಷಿಪಣಿಗಳನ್ನು ಉಡೀಸ್ ಮಾಡಿದ ಉಕ್ರೇನ್
ದೇಶಾದ್ಯಂತ ಒಟ್ಟು 45 ಕಡೆ ಉದ್ಯೋಗ ಮೇಳ ನಡೆದಿದೆ. ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆದಿದೆ.
ಬೆಂಗಳೂರು ಕಾರ್ಯಕ್ರಮದ ನೇತೃತ್ವವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮೈಸೂರು ಕಾರ್ಯಕ್ರಮದ ನೇತೃತ್ವವನ್ನು ಸಚಿವೆ ಶೋಭಾ ಕರಂದ್ಲಾಜೆ ವಹಿಸಿಕೊಂಡಿದ್ದರು. ಮೋದಿ ಭಾಷಣದ ವೇಳೆ ಸಂಸದ ತೇಜಸ್ವಿ ಸೂರ್ಯ ನಿದ್ದೆಗೆ ಜಾರಿದ್ದು ಕಂಡುಬಂದಿತು. ಇದನ್ನೂ ಓದಿ: ಕಾಶ್ಮೀರಿ ಪ್ರತ್ಯೇಕತಾವಾದಿ ಹತ್ಯೆಗೈದು ತಲೆಮರೆಸಿಕೊಂಡಿದ್ದ ಮುಜಾಹಿದ್ದೀನ್ ಉಗ್ರರು 33 ವರ್ಷಗಳ ಬಳಿಕ ಅರೆಸ್ಟ್