ಗಲಾಟೆಯ ವಿಚಾರಣೆ ಮುಗಿಸಿ ವಾಪಸ್ಸು ಹೊರಟಿದ್ದ ASI ಬೈಕ್ ಅಪಘಾತದಲ್ಲಿ ಸಾವು

Public TV
1 Min Read
davanagere accident

ದಾವಣಗೆರೆ: ತರಳುಬಾಳು ಹುಣ್ಣಿಮೆ ಸಂದರ್ಭದಲ್ಲಿ ಬೈಕ್ ರ‍್ಯಾಲಿ ಮಾಡುತ್ತಿರುವ ಯುವಕರಿಗೆ ಹಾಗೂ ಕಾಳಪುರ ಗ್ರಾಮಸ್ಥರ ‌ನಡುವೆ ಗಲಾಟೆಯಾಗಿದ್ದು, ಇದರ ವಿಚಾರಣೆಗೆ ನಡೆಸಲು ಆಗಮಿಸಿದ್ದ ಎಎಸ್ಐ ವಾಪಸ್ಸು ಹೋಗುತ್ತಿರುವಾಗ ಬೈಕ್‌ಗಳ (Bike) ಮುಖಾಮುಖಿ ಅಪಘಾತದಲ್ಲಿ‌ (Accident) ಸಾವನ್ನಪ್ಪಿರುವ ಘಟನೆ‌ ನಡೆದಿದೆ.

ದಾವಣಗೆರೆಯ (Davanagere) ಜಗಳೂರು ಪಟ್ಟಣದ ಹೊರವಲಯದ ಚಿನ್ನು ಡಾಬಾ ಬಳಿ ಘಟನೆ ನಡೆದಿದ್ದು, ವಿಜಯನಗರ ಜಿಲ್ಲೆಯ ಹಂಪಿ ನಿವಾಸಿಯಾಗಿರುವ ಶಬೀರ್ ಹುಸೇನ್ (59) ಅಪಘಾತದಲ್ಲಿ ಮೃತಪಟ್ಟ ಎಎಸ್‌ಐ ಆಗಿದ್ದು, ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಕೊಟ್ಟೂರು ತರಳುಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಕಾಳಾಪುರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವಿಚಾರವಾಗಿ ಮಾಹಿತಿ ಕಲೆ ಹಾಕಲು ಆಗಮಿಸಿದ್ದ ಶಬೀರ್ ಹುಸೇನ್ ವಿಚಾರಣೆ ಮುಗಿಸಿ ಬಳಿಕ ಮನೆಗೆ ಹೊರಟಿದ್ದರು. ಇದನ್ನೂ ಓದಿ: ಸರಣಿ ಅಪಘಾತದಲ್ಲಿ ಟಾಟಾ ಏಸ್ ಚಾಲಕ ಸಾವು- ಬೈಕ್ ಸವಾರ ಅದೃಷ್ಟವಶಾತ್ ಪಾರು

police jeep 1

ಈ ವೇಳೆ ಪರಸ್ಪರ ಎರಡು ಬೈಕ್‌ಗಳ‌ ನಡುವೆ ಡಿಕ್ಕಿ ಹೊಡೆದ ರಭಸಕ್ಕೆ ಎಎಸ್ಐ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಆತನನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಜಗಳೂರು ತಾಲೂಕು ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಿದ್ದು, ಅಂಗಾಗಗಳ ದಾನಕ್ಕೆ ಕುಟುಂಬಸ್ಥರು ಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಮೃತಪಟ್ಟು ಬಹಳ ಸಮಯವಾಗಿದ್ದರಿಂದ ಅಂಗಾಂಗಗಳ ದಾನಕ್ಕೆ ಸಾಧ್ಯವಾಗಲಿಲ್ಲ. ಇನ್ನು ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಒಂಟೆಗೆ ಕಾರು ಡಿಕ್ಕಿ – ಮಂಗಳೂರಿನ ಮೂವರು ಸೇರಿ ನಾಲ್ವರು ಸೌದಿಯಲ್ಲಿ ದುರ್ಮರಣ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *