Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

Cinema

ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

Public TV
Last updated: December 19, 2022 6:10 pm
Public TV
Share
3 Min Read
FotoJet 6 15
SHARE

ರಂಗಕರ್ಮಿ, ನಾಡಿನ ಹೆಸರಾಂತ ಸಿನಿಮಾ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಹೆಸರಿನಲ್ಲಿ ರಂಗಪಯಣ ತಂಡವು ‘ಶಂಕರ್ ನಾಗ್ ನಾಟಕೋತ್ಸವ’ವನ್ನು ಆಯೋಜನೆ ಮಾಡಿದೆ. ಡಿಸೆಂಬರ್ 26 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಹಲವು ತಂಡಗಳು ಭಾಗಿಯಾಗಲಿವೆ.

FotoJet 7 9

ನಾಟಕೋತ್ಸವಕ್ಕೆ ಡಿ.26ರಂದು ಚಾಲನೆ ಸಿಗಲಿದ್ದು, ಅಂದು ಸಂಜೆ 6 ಗಂಟೆಗೆ ಸಾತ್ವಿಕ ರಂಗತಂಡದವರಿಂದ ರಂಗಗೀತೆ ಹೇಳುವ ಮೂಲಕ ಚಾಲನೆ ನೀಡಲಾಗುತ್ತಿದೆ. ಅವತ್ತು ಸಂಜೆ 6:30ಕ್ಕೆ ‘ನೀನಾರಿಗಲ್ಲಾದವಳು ಬಿದಿರು’ ಕಾರ್ಯಕ್ರಮವನ್ನು ಪ್ರಸ್ತುತಿ ಪಡಿಸಲಾಗುತ್ತಿದೆ. ನಂತರ ನರಸಿಂಹ ಮೂರ್ತಿ, ಉಮಾ ವೈ.ಜಿ ಹಾಗೂ ತಾಯಿ ಲೋಕೇಶ್ ಅವರಿಗೆ ಶಂಕರ್ ನಾಗ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬನಶಂಕರಿ ಅಂಗಡಿ, ಬಲವಂತ್ ರಾವ್ ಪಾಟೀಲ್, ಸಂದೇಶ ಜವಳಿ, ಕೆ.ಎಸ್.ಡಿ.ಎಲ್ ಚಂದ್ರು, ಗಂಗಾಧರ್, ರಮೇಶ್ ಭಟ್ ಮತ್ತು ಮಂಡ್ಯ ರಮೇಶ್ ಅವರು ಅಂದು ವೇದಿಕೆಯ ಮೇಲೆ ಇರಲಿದ್ದಾರೆ. ಸಂಜೆ 7:30ಕ್ಕೆ ಭೂಮಿಕ ತಂಡದ, ಮಾಲತೇಶ್ ಬಡಿಗೇರ್ ನಿರ್ದೇಶನ ಮಾಡಿರುವ ನಿರಂಜನರ ‘ಚಿರಸ್ಮರಣೆ’ ನಾಟಕದ ಪ್ರದರ್ಶನ ಕೂಡ ಇರಲಿದೆ.

FotoJet 8 7

ಡಿಸೆಂಬರ್ 27ರಂದು ಸಂಜೆ 5 ಗಂಟೆಗೆ ಮಕ್ಕಳ ರಂಗಭೂಮಿ ಕುರಿತಾದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸುಷ್ಮಾ ಎಸ್.ವಿ ಮತ್ತು ಚಂದ್ರಕೀರ್ತಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮನಸ್ವಿನಿ ಮತ್ತು ದಕ್ಷ ಮಂಜುನಾಥ್ ಗೌಡ ಮಕ್ಕಳಿಂದ ‘ಕಥೆ ಹೇಳುವ ಮಕ್ಕಳು’ ಕಾರ್ಯಕ್ರಮ ಕೂಡ ಇದೆ. ಸಂಜೆ 6:05ಕ್ಕೆ ಕಥನವಾದ ಸಂಕಥನ ಕಾರ್ಯಕ್ರಮ ಕೂಡ ಆಯೋಜನೆಗೊಂಡಿದ್ದು ಡಾ.ಲಕ್ಷ್ಮಿ ಬಿ ಪ್ರಸಾದ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7:15ಕ್ಕೆ ದೃಶ್ಯಕಾವ್ಯ ತಂಡದಿಂದ, ನಂಜುಂಡೇ ಗೌಡ ಸಿ ನಿರ್ದೇಶನ ಮಾಡಿರುವ, ಡಿ.ಕೆ.ಚೌಟ ರಚನೆಯ ‘ಹುಲಿ ಹಿಡಿದ ಕಡಸು’ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

FotoJet 12 2

ಡಿಸೆಂಬರ್ 28 ರಂದು ಸಂಜೆ 5ಕ್ಕೆ ಮನಜನ ಅರ್ಪಿಸುವ ಪದ್ಯ ಕಾರ್ಯಕ್ರಮವಿದ್ದು, ಎಂ.ಆರ್. ಕಮಲ, ಮೌಲ್ಯ ಸ್ವಾಮಿ, ಚೇತನ ಪ್ರಸಾದ್, ವಸಂತ ಕೃಷ್ಣಮೂರ್ತಿ, ಅಮೃತಾ ಹೆಗಡೆ, ಮುರಳಿ ಮೋಹನ ಕಾಟಿ, ಅರಕಲಗೂಡು ಜಯರಾಮ್, ಗಿರೀಶ್ ಹಂದಲಗೆರೆ, ಅಶ್ವಿನಿ ಕೋಟ್ಯಾನ್, ಸಂಯುಕ್ತ ಪುಲಿಗಲ್ ಇವರುಗಳು ಕವಿತೆಯನ್ನು ವಾಚಿಸಲಿದ್ದಾರೆ. ಸಂಜೆ 6ಕ್ಕೆ ಜ್ಯೋತಿ ಹಿಟ್ನಾಳ್ ಅವರ ಮುಟ್ಟು ಮತ್ತು ಆರೋಗ್ಯ ಪುಸ್ತಕ ಬಿಡುಗಡೆಗೊಳ್ಳಲಿದೆ. ವಸುಂಧರಾ ಭೂಪತಿ ಅವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಮೂಗ್ ಸುರೇಶ್ ಅವರಿಂದ ನಾಗರಕಟ್ಟೆ ಹೆಸರಿನ ಕಾರ್ಯಕ್ರಮ ಕೂಡ ನಡೆಯಲಿದೆ. ಸಂಜೆ 7 ಗಂಟೆಗೆ ರೂಪಾಂತರ ತಂಡದ, ಆರ್.ನಾಗೇಶ್ ರಂಗರೂಪ ಮಾಡಿರುವ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನದ, ಕೆ.ಶಿವರಾಮ್ ಕಾರಂತರ ‘ಚೋಮನ ದುಡಿ’ ನಾಟಕ ಪ್ರದರ್ಶನವಾಗಲಿದೆ.

FotoJet 10 2

ಡಿಸೆಂಬರ್ 29 ರಂದು ಸಂಜೆ 5ಕ್ಕೆ ಕಾರ್ಮಿಕ ರಂಗಭೂಮಿ ಕುರಿತಾದ ಕಾರ್ಯಕ್ರಮವಿದ್ದು, ರಾಮಸ್ವಾಮಿ ಆರ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಮೈಕೋ ಸೋಮಶೇಖರ್, ಮೈಕೋ ಶಿವಶಂಕರ್, ಮೈಕೋ ಮುರುಡಯ್ಯ ಅವರಿಂದ ರಾಷ್ಟಕವಿ ಕುವೆಂಪು ಅವರ ರಚನೆಯ ಜಲಗಾರ ನಾಟಕದ ತುಣುಕು ಪ್ರದರ್ಶನ ಕೂಡ ಇದೆ. ಸಂಜೆ 6:05ಕ್ಕೆ ಜಗದ ಕವಿ ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ಅವರ ಮೋಡಣ್ಣನ ತಮ್ಮ, ನನ್ನ ಗೋಪಾ ನಾಟಕಗಳನ್ನು ಓದಲಾಗುತ್ತದೆ. ಓಹಿಲೇಶ್ ಮತ್ತು ನಯನ ಸೂಡ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಶಿವ ಪ್ರಸಾದ್ ಪಟ್ಟಣಗೆರೆ ಮತ್ತು ಪುನೀತ್ ತಥಾಗತ ಅವರಿಂದ ಕುವೆಂಪು ಅವರ ಆಯ್ದ ಪದ್ಯಗಳನ್ನು ಓದಲಾಗುತ್ತದೆ. ನಂತರ ಮುತ್ತಮ್ಮ  ಅವರು ಕುವೆಂಪು ಅವರ ಆಯ್ದ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಸಂಜೆ 7ಕ್ಕೆ ರಂಗಪಯಣ ತಂಡದ, ರಾಜ್ ಗುರು ನಿರ್ದೇಶನ ಮಾಡಿರುವ ‘ಪೂಲನ್ ದೇವಿ’ ನಾಟಕದ ಪ್ರದರ್ಶನವಿದೆ.

FotoJet 9 5

ಡಿಸೆಂಬರ್ 30ರಂದು ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6ಕ್ಕೆ ರಂಗ ಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಬಿ.ಸುರೇಶ್, ಮೈಮ್ ರಮೇಶ್, ಪಾಪಣ್ಣ,  ಅರೆಹೊಳೆ ಸದಾಶಿವ, ಮಂಜುನಾಥ್, ಸುಧಾಕರ್, ನರೇಂದ್ರ ಬಾಬು, ಬಿ.ಟಿ.ಮಂಜುನಾಥ್ ಕೋಮಣ್ಣ, ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವರು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7ಕ್ಕೆ ಅರೆಹೊಳೆ ಪ್ರತಿಷ್ಠಾನ ಮತ್ತು ಕಲಾಬಿ ಥಿಯೇಟರ್ ಪ್ರಸ್ತುತಿ ಪಡಿಸುವ, ಪ್ರಶಾಂತ್ ಉದ್ಯಾವರ ನಿರ್ದೇಶನದ ‘ದ್ವಯ’ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

TAGGED:BangaloreKuvempuNatakotsavaRajagurushankar nagಕುವೆಂಪುನಾಟಕೋತ್ಸವಬೆಂಗಳೂರುರಾಜಗುರುಶಂಕರ್ ನಾಗ್
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Sheikh Jaber Al Ahmad Al Sabah Sea Bridge in Kuwait
Latest

ಶೀಘ್ರವೇ ಸೌದಿ, ಯುಎಇ ಸೇರಿ 5 ದೇಶಗಳ 8 ದೊಡ್ಡ ಸೇತುವೆಗಳ ಮೇಲೆ ದಾಳಿ – ಇರಾನ್‌ನಿಂದ ಹಿಟ್‌ ಲಿಸ್ಟ್‌ ರಿಲೀಸ್‌

Public TV
By Public TV
14 minutes ago
POCSO Special Court
Bengaluru City

POCSO Act – ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್

Public TV
By Public TV
54 minutes ago
Chikkaballapura APMC 2
Chikkaballapur

ಟೊಮೆಟೊ ಕೆಜಿ 10 ರೂ., ಕ್ಯಾರೆಟ್‌ 8 ರೂ. – ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಭಾರೀ ಇಳಿಕೆ

Public TV
By Public TV
1 hour ago
Abhishek Sharma
Cricket

IPL 2026 | ಅಂಪೈರ್‌ ಜೊತೆಗೆ ಕಿತ್ತಾಡಿದ ಅಭಿಷೇಕ್‌ ಶರ್ಮಾಗೆ ಭಾರೀ ದಂಡ

Public TV
By Public TV
1 hour ago
plane
Latest

ಕೇಂದ್ರದಿಂದ ಯೂಟರ್ನ್‌ – ವಿಮಾನಗಳಲ್ಲಿ 60% ಸೀಟು ಉಚಿತ ಆಯ್ಕೆ ನಿಯಮಕ್ಕೆ ತಾತ್ಕಾಲಿಕ ತಡೆ

Public TV
By Public TV
1 hour ago
Basangouda Patil Yatnal has been called for campaigning as BJP fears defeat in Bagalkot by Election CM Siddaramaiah
Bagalkot

ಸೋಲಿನ ಭಯ ಕಾಣಿಸಿದ್ದಕ್ಕೆ ಯತ್ನಾಳ್‌ರಿಂದ ಪ್ರಚಾರ: ಬಿಜೆಪಿಗೆ ಸಿಎಂ ಗುದ್ದು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?