ಭೋಪಾಲ್/ಮುಂಬೈ: ಬಾಲಿವುಡ್ ನಟ ಶಾರೂಕ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ವಿರುದ್ಧ ಹಿಂದೂ ಸಂಘಟನೆಗಳ (Hindu organisations) ಆಕ್ರೋಶದ ಜ್ವಾಲೆ ಹೆಚ್ಚಾಗ್ತಿದ್ದಂತೆ, ಮಧ್ಯಪ್ರದೇಶದ ಉಲೇಮಾ ಮಂಡಳಿಯ ಅಧ್ಯಕ್ಷ ಸೈಯದ್ ಅನಸ್ ಅಲಿ ಅವರು `ಪಠಾಣ್’ (Pathan) ಹೆಸರು ಬಳಕೆಗೆ ಆಕ್ಷೇಪಿಸಿದ್ದಾರೆ.
ಮುಸ್ಲಿಮರಲ್ಲಿ ಪಠಾಣ್ (Pathan) ಸಮುದಾಯವಿದ್ದು, ಇದು ಸಮುದಾಯ ಮಾತ್ರವಲ್ಲ, ಇಡೀ ಮುಸ್ಲಿಂ ಸಮುದಾಯಕ್ಕೆ (Muslim Community) ಮಾಡಿದ ಅವಮಾನವಾಗಿದೆ. ದೀಪಿಕಾ ಅಸಭ್ಯ ನೃತ್ಯ ಸಿನಿಮಾವನ್ನೇ ನೋಡದಂತೆ ಮಾಡಿದೆ. ಕೂಡಲೇ ಸಿನಿಮಾದ ಶೀರ್ಷಿಕೆ ಬದಲಿಸಬೇಕು. ಇಲ್ಲದಿದ್ದರೇ ಮಧ್ಯಪ್ರದೇಶ (Madhya Pradesh) ಮಾತ್ರವಲ್ಲ ಇಡೀ ದೇಶದಲ್ಲಿ ಎಲ್ಲೂ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕೇಸರಿ ಬಿಕಿನಿಗೆ ನೆಟ್ಟಿಗರು ಗರಂ: ಬೈಕಾಟ್ ಪಠಾಣ್ ಟ್ರೆಂಡ್
ಕೇಸರಿ ಬಿಕಿನಿ (Saffron Bikini) ಬಣ್ಣವನ್ನು ಬದಲಾಯಿಸಿ, ಇಲ್ಲವೇ ಪರಿಣಾಮ ಎದುರಿಸಿ ಅಂತಾ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಂ ಎಚ್ಚರಿಸಿದ್ದಾರೆ. ನಿಮ್ಮ ಮಗಳ ಜೊತೆ ಕೂತು `ಬೇಷರಂ ರಂಗ್’ ಹಾಡನ್ನು ನೀವು ನೋಡ್ತೀರಾ? ಯಾಕೆ ಹಿಂದೂ ಧರ್ಮವನ್ನೇ ಗುರಿಯಾಗಿಸಲಾಗ್ತಿದೆ? ಅಂತಾ ಮಧ್ಯಪ್ರದೇಶದ ಸ್ಪೀಕರ್ ಗಿರೀಶ್ ಗೌತಮ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಆಯ್ತು, ಈಗ ಕಂಗನಾ ರಣಾವತ್ಗೂ ಕೇಸರಿ ಕಂಟಕ
ಶಾರೂಖ್ ಖಾನ್ ಮಾತ್ರ ತಮ್ಮ ನಿಲುವಿಗೆ ಬದ್ಧವಾಗಿದ್ದಾರೆ. ಸಂಕುಚಿತ ಮನಸ್ಥಿತಿಯವರು ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ, ಋಣಾತ್ಮಕತೆಯನ್ನೇ ಹರಡುತ್ತಿದ್ದಾರೆ ಅಂದಿದ್ದಾರೆ.
ಈ ಮಧ್ಯೆ, ನಟಿ ಕಂಗನಾಗೂ (Kangana Ranaut) ವಿವಾದ ತಾಕಿದೆ. `ಲಾಕಪ್’ ಪೋಸ್ಟರ್ನಲ್ಲಿ ಕೇಸರಿ ಬಣ್ಣದ ಮೇಲೆ ಕಂಗನಾ ಬೂಟು ಇಟ್ಟಿದ್ದು, ಈಗ ಇದರ ವಿರುದ್ಧ ಪ್ರತಿಭಟನೆ ನಡೆಸಲ್ವಾ ಅಂತಾ ನೆಟ್ಟಿಗರು ಕಾಲೆಳೆದಿದ್ದಾರೆ.