ಕಾರಿಗೆ ಡಿಕ್ಕಿಯಾಗಿ ಗಿಡ, ಮರದ ರೆಂಬೆಗಳ ನಡುವೆ ನುಗ್ಗಿ ಹಳ್ಳಕ್ಕೆ ಇಳಿದ KSRTC ಬಸ್- ಐವರಿಗೆ ಗಾಯ

Public TV
1 Min Read
MND

ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಐವರಿಗೆ ಗಾಯವಾಗಿದ್ದು, ಬಸ್ ಪ್ರಯಾಣಿಕರು ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಈ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಂತಾಪುರ ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಸುನೀಲ್, ಪ್ರಭಾಕರ್, ಸಚಿನ್, ಮುತ್ತು, ಮದನ್ ಎಂಬುವವರು ಗಾಯಗೊಂಡಿದ್ದಾರೆ.

MND ACCIDENT AV 2

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ರಸ್ತೆ ಬದಿ ಹಳ್ಳಕ್ಕೆ ಇಳಿದಿದ್ದು, ಗಿಡ ಮತ್ತು ಮರದ ರೆಂಬೆಗಳ ನಡುವೆ ನುಗ್ಗಿದೆ. ಇದ್ರಿಂದ ಭಯಗೊಂಡ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಆದ್ರೆ ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

MND ACCIDENT 2

MND ACCIDENT 3

MND ACCIDENT 4

MND ACCIDENT 5

MND ACCIDENT 6

MND ACCIDENT 7

MND ACCIDENT 8

MND ACCIDENT 9

MND ACCIDENT 10

MND ACCIDENT 11

MND ACCIDENT AV 1

Share This Article
Leave a Comment

Leave a Reply

Your email address will not be published. Required fields are marked *