ಬೆಂಗಳೂರು: ಪುನರ್ವಸತಿ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ನಡೆದಿದೆ.
ಪ್ರೇಮ್(20) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಪ್ರೇಮ್ ಪೋಷಕರು ಕುಡಿತ ಬಿಡಿಸಲು 25 ದಿನಗಳ ಹಿಂದೆ ಸುಂಕದಕಟ್ಟೆಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು. ಆದರೆ ಶುಕ್ರವಾರ ಪ್ರೇಮ್ ಕೇಂದ್ರದಲ್ಲಿಯೇ ಸಾವನ್ನಪ್ಪಿದ್ದಾನೆ.
- Advertisement 2
ಮೃತ ಪ್ರೇಮ್ ಅಮೇಜಾನ್ನಲ್ಲಿ ಕೆಲಸ ಮಾಡುತ್ತಿದ್ದನು. ಆದರೆ ಪ್ರೇಮ್ ಕುಡಿತ ಹಾಗೂ ಗಾಂಜಾ ಚಟಕ್ಕೆ ಬಿದ್ದಿದ್ದನು. ಹೀಗಾಗಿ ಕುಡಿತ ಬಿಡಿಸಲು ಪೋಷಕರು ಸುಂಕದಕಟ್ಟೆಯಲ್ಲಿರುವ ಮದ್ಯಪಾನ, ಮಾದಕ ವ್ಯಸನಿಗಳ ಹಾಗೂ ಮನೋರೋಗ ಚಿಕಿತ್ಸಾ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.
- Advertisement 3
ಚಿಕಿತ್ಸೆ ವೇಳೆ ಪುನರ್ವಸತಿ ಕೇಂದ್ರದವರೇ ವಯರ್ ನಿಂದ ಪ್ರೇಮ್ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ನಮ್ಮ ಮಗನ ಕತ್ತಿನ ಮೇಲೆ ಗಾಯದ ಗುರುತುಗಳಿವೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಈ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರೇಮ್ ಪೋಷಕರು ಪ್ರಕರಣ ದಾಖಲಿಸಿದ್ದಾರೆ.