ದಾವಣಗೆರೆ: ಕೆಮ್ಮಿನ ಲಸಿಕೆ ಹಾಕಿದ ತಕ್ಷಣ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹನುಮನಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯನಾಯ್ಕ್ ಎಂಬರಿಗೆ ಸೇರಿದ 20 ಕುರಿಗಳಾಗಿದ್ದು, ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಸೂರ್ಯ ಏಜೆನ್ಸಿಯಲ್ಲಿ ಲಸಿಕೆ ತೆಗೆದುಕೊಂಡು ಹೋಗಿದ್ದರು. ಪ್ರತಿ ಕುರಿಗೆ 10ಎಂಎಲ್ ಲಸಿಕೆ ಹಾಕುವಂತೆ ಹೇಳಿದ್ದರು. ಅದರಂತೆ ಜಯನಾಯ್ಕ್ ಲಸಿಕೆಯನ್ನು ಹಾಕಿದ್ದಾರೆ. ಲಸಿಕೆ ಹಾಕಿದ ತಕ್ಷಣ 20 ಕುರಿಗಳು ಸಾವನ್ನಪ್ಪಿವೆ.
ಮೃತಪಟ್ಟಿದ್ದ ಕುರಿಗಳನ್ನು ಔಷಧಿ ಅಂಗಡಿ ಮುಂದಿಟ್ಟು ರೈತರು ಹಾಗೂ ಕದಂಬ ಸಂಘಟನೆಯವರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಸುದ್ದಿ ಮಾಡಲು ತೆರಳಿದ್ದ ಪಬ್ಲಿಕ್ ಟಿವಿಯ ಸಿಬ್ಬಂದಿ ಮೇಲೆ ಅಂಗಡಿಯ ಮಾಲೀಕ ಹಲ್ಲೆ ಯತ್ನ ನಡೆಸಿ, ಕ್ಯಾಮೆರಾ ಕಸಿದುಕೊಂಡು ವಿಡಿಯೋ ಮಾಡದಂತೆ ತಡೆ ಹಿಡಿದಿದ್ದಾನೆ.
ಕುರಿಗಳನ್ನು ಕಳೆದುಕೊಂಡಿದ್ದ ಜಯನಾಯ್ಕ್ ಅವರಿಗೆ ಪರಿಹಾರ ಕೊಡುವಂತೆ ರೈತರು ಒತ್ತಾಯಿಸಿದ್ದರು. ಬಳಿಕ ಗಲಾಟೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕೆಟಿಜೆ ನಗರ ಪೊಲೀಸ್ ಠಾಣಾ ಪೊಲೀಸರು ಆಗಮಿಸಿದ್ದು, ಅಂಗಡಿ ಮಾಲೀಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv