– ನೆಮ್ಮದಿ ಕೆಡಿಸಿದ ಮುಂಬೈ ವ್ಯಕ್ತಿ
– ವಿವಿಧ ನಗರಗಳಲ್ಲಿ ಭಿಕ್ಷಾಟನೆ ಮಾಡಿರುವ 9ಜನ
ಕೊಪ್ಪಳ: ಲಾಕ್ಡೌನ್ ಆರಂಭವಾದಗಿಂದ ಸೋಮವಾರದವರೆಗೆ ಒಂದೇ ಒಂದು ಪಾಸಿಟಿವ್ ಕೇಸ್ ಹೊಂದಿರದ ಕೊಪ್ಪಳ ಜಿಲ್ಲೆಯಲ್ಲಿ ಇದೀಗ ಮುಂಬೈನಿಂದ ಬಂದ ವ್ಯಕ್ತಿ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿದ್ದ 9 ಜನ ಭಿಕ್ಷುಕರು ಜಿಲ್ಲೆಯ ಜನರನ್ನು ತೀವ್ರ ಆತಂಕಕ್ಕೀಡು ಮಾಡಿದ್ದಾರೆ.
ವಲಸೆ ಕಾರ್ಮಿಕರು ಜಿಲ್ಲೆಗೆ ಬರಲು ಆರಂಭಿಸಿದಾಗಿನಿಂದ ಕೊಪ್ಪಳ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಅದು ಸೋಮವಾರ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವುದರ ಮೂಲಕ ವಲಸೆ ಕಾರ್ಮಿಕರು ಕೊಪ್ಪಳ ಜನರ ವೃತವನ್ನು ಭಂಗ ಮಾಡಿದರು. ಮಾಹಾರಾಷ್ಟ್ರ ಮೂಲದ ಇಬ್ಬರು ಹಾಗೂ ತಮಿಳುನಾಡಿನ ಓರ್ವ ಕೊರೊನಾ ಹೊತ್ತು ತಂದಿದ್ದಾರೆ. ಅದರಲ್ಲಿ ಪ್ರಮುಖವಾಗಿ ರೋಗಿ ನಂ.1173 ಕೊರೊನಾ ಸೋಂಕಿತ ಜಿಲ್ಲೆಯ ಜನರ ನೆಮ್ಮದಿಯನ್ನು ಕೆಡಸಿದ್ದಾನೆ.
ರೋಗಿ ನಂ.1174 ನವಿ ಮುಂಬೈಯಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ, ನವಿ ಮುಂಬೈನಿಂದ ಟ್ರಕ್ ಮೂಲಕ ಹುಬ್ಬಳ್ಳಿಗೆ ಬಂದು, ಹುಬ್ಬಳ್ಳಿಯಿಂದ ಟಾಟಾ ಏಸ್ ವಾಹನದಲ್ಲಿ ಕೊಪ್ಪಳ ತಲುಪಿದ್ದ. ಈತ ಕೊಪ್ಪಳಕ್ಕೆ ಬಂದು ಕೆಎಸ್ಆರ್ ಟಿಸಿ ಬಸ್ ಮೂಲಕ ಕುಷ್ಟಗಿ ತಲುಪಿದ್ದ. ಈ ವೇಳೆ ಸೋಂಕಿತನೊಂದಿಗೆ ಜಿಲ್ಲೆಯ 9 ಜನ ಭಿಕ್ಷುಕರು ಮನೆ ಮನೆ ಅಲೆದಾಡಿ ಭಿಕ್ಷೆ ಬೇಡಿದ್ದಾರೆ. ಸ್ವತಃ ಈ ಬಗ್ಗೆ ಜಿಲ್ಲಾಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ಸೋಂಕಿತ ಬಸ್ ನಲ್ಲಿ ಬಂದಿದ್ದೆ ತಪ್ಪಾಯ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ರೋಗಿ ನಂ.1173 ನೊಂದಿಗೆ 90 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಕೊರೊನಾ ಪಾಸಿಟಿವ್ ಕೇಸ್ ಬಂದ ಮೂವರ ಜೊತೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಜನ ದ್ವಿತೀಯ ಸಂಪರ್ಕ ಹೊಂದಿದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಒಬ್ಬರು ಇದುವರೆಗೂ ಪತ್ತೆಯಾಗಿಲ್ಲ, ಅದೂ ಇವರು ರೋಗಿ ನಂ.1173 ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರು. ಜಿಲ್ಲಾಡಳಿತ ಇಬ್ಬರನ್ನೂ ಪತ್ತೆ ಮಾಡಲು ಸಾಕಷ್ಟು ಹರಸಾಹಸ ಪಡುತ್ತಿದೆ.
ಇನ್ನೊಂದೆಡೆ ಜಿಲ್ಲಾಡಳಿತ ಭಿಕ್ಷುಕರ ಹಿಂದೆ ಬಿದ್ದಿದೆ. ಭಿಕ್ಷುಕರು ಕೊಪ್ಪಳ, ಕುಷ್ಟಗಿ ಸೇರಿದಂತೆ ಬಹುತೇಕ ಕಡೆ ಅಲೆದಾಡಿದ್ದಾರೆ. 9 ಜನ ಭಿಕ್ಷುಕರಲ್ಲಿ ಯಾರಿಗಾದರೂ ಕೊರೊನಾ ಪಾಸಿಟಿವ್ ಬಂದರೆ ಅವರ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಇದರ ಮದ್ಯೆ ಜಿಲ್ಲೆಗೆ ಮಾಹಾರಷ್ಟ್ರದಿಂದ ನಿತ್ಯವೂ ಜನ ಬರ್ತಿದಾರೆ. ಅವರನ್ನು ಜಿಲ್ಲಾಡಳಿತ ಸರಿಯಾಗಿ ಕ್ವಾರಂಟೈನ್ ಮಾಡ್ತಿಲ್ಲ. ಸೋಮವಾರ ಸಂಜೆ ಬಂದ ನಾಲ್ವರು ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಮಂಗಳವಾರ ಮಧ್ಯಾಹ್ನ ಕ್ವಾರಂಟೈನ್ ಮಾಡಿದೆ. ನಾಲ್ವರು ವಲಸೆ ಕಾರ್ಮಿಕರು 12 ಗಂಟೆಗಳ ಕಾಲ ಬಸ್ ನಿಲ್ದಾಣದಲ್ಲಿ ಕಳೆದಿದ್ದು ಆತಂಕ ಮೂಡಿಸಿದೆ.