– ತೋಟದ ಮನೆ ಸೇರಿಕೊಳ್ಳಲು ಜನ ಎರಡೆರಡು ಬಾರಿ ಸಿಎಂ ಮಾಡಿದ್ದಾ..?
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ನಿಜವಾದ ಜನ ನಾಯಕ. ನೀವೆಂತ ಜನ ನಾಯಕ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಟಕ್ಕರ್ ನೀಡಿದ್ದಾರೆ.
ಚಾಮರಾಜಪೇಟೆಯಲ್ಲಿ ಮಾತನಾಡಿದ ಜಮೀರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹೋಲಿಕೆ ಮಾಡಿ ಕುಮಾರಸ್ವಾಮಿಯವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ನಿಜವಾದ ಜನ ನಾಯಕ ಎಂದು ಹಾಡಿ ಹೊಗಳಿದ್ದಾರೆ. ಜೆಡಿಎಸ್ ಕ್ವಾರಂಟೈನ್ ಆಗಿದೆ. ಏನಾಗಿದೆ ಜೆಡಿಎಸ್ ಹೋಂ ಕ್ವಾರಂಟೈನ್ ಆಗಿದೆ. ಒಂದು ಮಾತು ಹೇಳ್ತೀನಿ ಮೊದಲಿಂದ ನಾನು ಕುಮಾರಸ್ವಾಮಿ ಹೋಗು ಬಾ ಅಂತ ಏಕವಚನದಲ್ಲೇ ಮಾತನಾಡುತ್ತಾ ಇದ್ದಿದ್ದು. ಈಗ ಅವರು ಎರಡೆರಡು ಬಾರಿ ಸಿಎಂ ಆಗಿದ್ದಾರೆ ಅವರನ್ನು ಕುಮಾರಣ್ಣ ಅಂತಾನೆ ಕರಿಯೋಣ ಬಿಡಿ ಎಂದು ಕಿಚಾಯಿಸಿದ್ದಾರೆ. ಇದನ್ನೂ ಓದಿ: ಫ್ರೀ ವ್ಯಾಕ್ಸಿನ್ ನೀಡ್ತಿರೋದು ನಾನು, ನನ್ನ ಫೋಟೋ ಹಾಕಬೇಕು ಅಲ್ವಾ?- ಜಮೀರ್
ಕುಮಾರಸ್ವಾಮಿಯವರು ಮೊನ್ನೆ ಹೇಳಿದ್ದಾರೆ ಎಲ್ಲಾ ಸಹವಾಸ ಬಿಟ್ಟು ತೋಟದ ಮನೆ ಸೇರಿಕೊಂಡಿದ್ದೀನಿ ಅಂತ. ತೋಟದ ಮನೆ ಸೇರಿಕೊಳ್ಳಿ ಅಂತ ಜನ ಎರೆಡೆರಡು ಬಾರಿ ಸಿಎಂ ಮಾಡಿದ್ದ ನಿಮ್ಮನ್ನು, ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಈ ಸಂದರ್ಭದಲ್ಲಿ ತೋಟ ಸೇರಿಕೊಳ್ಳೋದ. ನಮ್ಮ ನಾಯಕ ಸಿದ್ದರಾಮಯ್ಯ ನೋಡಿ ಜನರ ಮಧ್ಯೆ ಇದ್ದಾರೆ. ಅವರಿಗು ಎರಡೆರಡು ಬಾರಿ ಆರೋಗ್ಯ ಸರಿ ಇರಲಿಲ್ಲ. ನೀವು ಹೊರಗೆ ಬರಬೇಡಿ ಎಂದು ಹೇಳಿದ್ದೆವು. ಆದರೂಕೇಳಲಿಲ್ಲ ಆಸ್ಪತ್ರೆಗೆ ಹೋಗಿ ಬಂದ ಎರಡೇ ದಿನಕ್ಕೆ ಹೊರಗೆ ಬಂದರು. ಇದು ಜನ ನಾಯಕ ಅಂದರೆ. ಹೀಗೆ ಇರಬೇಕು ಹೆದರಿ ಮನೆಯಲ್ಲಿ ಕೂರೋದಲ್ಲ ಜನರ ಮಧ್ಯೆ ಬಂದು ಕಷ್ಟ ಸುಖ ಕೇಳಬೇಕು ಎಂದರು.
ಬನ್ನಿ ಸಾರ್ ಹೋಗೋಣ ಜನರ ಮಧ್ಯೆ. ನಾನು ನಿಮ್ಮನ್ನು ಕರೀತಿಲ್ಲ ಜನರೇ ನಿಮ್ಮನ್ನ ಕರಿಬೇಕು ಅಂತಾರೆ. ಅದಕ್ಕೆ ನಿಮ್ಮನ್ನೆ ಕರಿತೀನಿ ಬೇರೆಯವರನ್ನು ಕರಿರಿ ಅಂದ್ರೆ ಅವರನ್ನೇ ಕರೀತಿನಿ. ಆದರೆ ಜನ ಸಿದ್ದರಾಮಯ್ಯ ಅವರನ್ನು ಕರಿರಿ ಅಂತಾರೆ. ನನ್ನ ಹಾಗೂ ಕುಮಾರಸ್ವಾಮಿ ನಡುವಿನ ಫ್ಲ್ಯಾಟ್ ಗಲಾಟೆಯಲ್ಲಿ ನನಗೆ ಯಾರು ಎಚ್ಚರಿಕೆ ಕೊಟ್ಟಿಲ್ಲ ಆ ವಿವಾಧ ಬಗೆಹರಿದಿದೆ ಎಂದು ಸ್ಪಷ್ಟನೆ ನೀಡಿದರು.