ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸ್ಥಳ ಮಹಜರು ಆರಂಭಗೊಂಡಿದೆ.
ಆರಂಭದಲ್ಲಿ ಯುವತಿ ತಂಗಿದ್ದ ಆರ್ಟಿ ನಗರ ಪಿಜಿಯಲ್ಲಿ ಸ್ಥಳ ಮಹಜರು ನಡೆಯುತ್ತಿದ್ದು, ಬಳಿಕ ಮಲ್ಲೇಶ್ವರ ಬಳಿ ಇರುವ ಮಂತ್ರಿ ಅಪಾರ್ಟ್ಮೆಂಟ್ನಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ.
- Advertisement 2
- Advertisement 3
ವಿಚಾರಣೆ ಸಂದರ್ಭದಲ್ಲಿ ಯಾವುದೇ ಪ್ರಕರಣದಲ್ಲಿ ಸಂತ್ರಸ್ತರ ಬಳಿ ಕೃತ್ಯ ನಡೆದ ಸ್ಥಳ, ಭೇಟಿ ನೀಡಿದ್ದು ಯಾವಾಗ? ಆ ಸ್ಥಳ ಹೇಗಿತ್ತು.. ಇತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳುತ್ತಾರೆ. ಸಂತ್ರಸ್ತರು ಈ ಬಗ್ಗೆ ಪರಿಪೂರ್ಣವಾದ ವಿವರಗಳನ್ನು ನೀಡಬೇಕಾಗುತ್ತದೆ. ನೀಡಿದ ವಿವರಗಳು ಸರಿ ಇದ್ಯಾ? ದಿನಾಂಕ ಸರಿ ಇದ್ಯಾ? ಎಲ್ಲ ವಿವರಗಳು ತಾಳೆ ಆಗುತ್ತಾ ಎಂಬುದನ್ನು ಪರಿಶೀಲಿಸಲು ಸ್ಥಳ ಮಹಜರು ನಡೆಸುತ್ತಾರೆ.
- Advertisement 4
ಯುವತಿ ಸೂಚಿಸುವ ಸ್ಥಳ, ಮಾಹಿತಿ ಮೇರೆಗೆ ಮಹಜರು ನಡೆಯಲಿದೆ. ಮೆಟಿರಿಯಲ್ ಸಾಕ್ಷ್ಯ, ಡಿಜಿಟಲ್ ಸಾಕ್ಷ್ಯ, ಲೈವ್ ಎವಿಡೆನ್ಸ್ ಹೀಗೆ ಒಟ್ಟು ಮೂರು ವಿಭಾಗಗಳಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಯುತ್ತದೆ.
ಮೆಟರಿಯಲ್ ಸಾಕ್ಷ್ಯ:
ಕೃತ್ಯ ನಡೆದ ಸ್ಥಳದಲ್ಲಿನ ಸಾಕ್ಷಗಳನ್ನು ಸಂಗ್ರಹಿಸಲಾಗುತ್ತದೆ. ಘಟನೆ ನಡೆದ ಜಾಗದಲ್ಲಿ ದೈಹಿಕ ಸಂಪರ್ಕ ದ ವೇಳೆ ಬಳಸಿದ ಡಿಎನ್ಎ ಸ್ಯಾಂಪಲ್ ಪತ್ತೆ ಮಾಡಲಾಗುತ್ತದೆ. ಅದರಲ್ಲಿ ಕೂದಲು, ದೈಹಿಕ ಸಂಪರ್ಕದ ವೇಳೆ ಬಳಕೆಯಾದ ವಸ್ತುಗಳ ಮೂಲಕ ಸ್ಯಾಂಪಲ್ ಸಂಗ್ರಹಿಸಲಾಗುತ್ತದೆ.
ಲೈವ್ ಸಾಕ್ಷ್ಯ:
ಕೃತ್ಯ ನಡೆದಿರುವ ಆ ಜಾಗದಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದರೆ ಸಿಬ್ಬಂದಿ ಅಥವಾ ಸೆಕ್ಯೂರಿಟಿ ಅಥವಾ ಯಾವುದೇ ವ್ಯಕ್ತಿಗಳಿದ್ದರೆ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತದೆ.
ಡಿಜಿಟಲ್ ಸಾಕ್ಷ್ಯ:
ಡಿಜಿಟಲ್ ಸಾಕ್ಷ್ಯವಾಗಿ ಆಗಮನ, ನಿರ್ಗಮನದ ಸಿಸಿಟಿವಿ ಫುಟೇಜ್ ಸಂಗ್ರಹಿಸಲಾಗುತ್ತದೆ. ಇಬ್ಬರು ಇಬ್ಬರ ಮೊಬೈಲ್ ಒಂದೇ ಟವರ್ ಲೊಕೇಷನ್ನಲ್ಲಿತ್ತಾ ಎಂಬದನ್ನು ಕಲೆ ಹಾಕಲಾಗುತ್ತದೆ.