ಮುಂಬೈ: ಚಂಡಮಾರುತದಿಂದ ಜನರ ಜೀವನ ತತ್ತರಿಸಿ ಹೋಗಿದೆ. ಹೀಗಿರುವಾಗಲೇ ಕಿರುತೆರೆ ನಟಿಯೊಬ್ಬರು ಮನೆಮುಂದೆ ಬಿದ್ದ ಮರದ ಮೇಲೆ ಕುಳಿತು ಫೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಿರುತೆರೆ ನಟಿ ದೀಪಿಕಾ ಸಿಂಗ್ ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಬೇಕು. ಅದೇ ಜೀವನ ಎಂದು ಶೀರ್ಷಿಕೆ ನೀಡುವ ಮೂಲಕ ತಮ್ಮ ಫೋಟೋಶೂಟ್ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಳೆಯಲ್ಲಿ ಡ್ಯಾನ್ಸ್ ಮಾಡುತ್ತಾ ವಿಡಿಯೋ ಮಾಡಿರುವ ದೀಪಿಕಾ ಪ್ರಕೃತಿಯನ್ನು ಸ್ವೀಕರಿಸಿ ಎಂದು ಶೀರ್ಷಿಕೆ ನೀಡಿದ್ದಾರೆ. ಮಳೆಯಲ್ಲಿ ಡ್ಯಾನ್ಸಿಂಗ್ ವಿಡಿಯೋ ಫೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
View this post on Instagram
ಕಿರುತೆರೆ ನಟಿ ದೀಪಿಕಾ ಸಿಂಗ್ ಮುಂಬೈನಲ್ಲಿ ಆಗುತ್ತಿರುವ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತೌಕ್ತೆ ಚಂಡಮಾರುತದಿಂದ ಆಗುತ್ತಿರುವ ಜೀವ ಹಾನಿ ಹಾಗೂ ಜನರು ಅನುಭವಿಸುತ್ತಿರುವ ಕಷ್ಟ ಗೊತ್ತೇ ಇದೆ. ಹೀಗಿರುವಾಗಲೇ ನಟಿ ದೀಪಿಕಾ ಮಳೆಯಲ್ಲಿ ಹೀಗೆಲ್ಲಾ ಫೋಟೋಶೂಟ್ ಮಾಡಿಸಿಕೊಂಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.
View this post on Instagram
ದೀಪಿಕಾ ಅವರ ಮನೆ ಮುಂದೆ ಮಳೆ ಹಾಗೂ ಗಾಳಿಯಿಂದಾಗಿ ಮರವೊಂದು ನೆಲಕ್ಕೆ ಉರುಳಿದೆ. ನೆಲಕ್ಕೆ ಉರುಳಿರುವ ಮರದಿಂದ ಯಾರಿಗೂ ಅಪಾಯ ಆಗಿಲ್ಲ ಎಂದಿರುವ ನಟಿ, ಅದರ ಮೇಲೆ ಕುಳಿತು ತಾನು ಫೋಟೋಶೂಟ್ ಮಾಡಿಸಿಕೊಂಡಿದ್ದೇನೆ ಎಂದಿದ್ದಾರೆ. ಜನರು ಚಂಡಮಾರುತದಿಂದ ಕಷ್ಟ ಅನುಭವಿಸುತ್ತಿರುವಾಗ ಇವೆಲ್ಲ ಬೇಕಿತ್ತಾ ಎಂದು ನೆಟ್ಟಿಗರು ದೀಪಿಕಾ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
View this post on Instagram
ದೀಪಿಕಾ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಯಾರು ಎಷ್ಟೇ ಟ್ರೋಲ್ ಮಾಡಿದರೂ ಕೊಂಚವೂ ದೀಪಿಕಾ ತಲೆ ಕೆಡಿಸಿಕೊಂಡಿಲ್ಲ. ದೀಪಿಕಾ ಸಿಂಗ್ ಅವರ ಫೋಟೋಗಳು ವೈರಲ್ ಆಗುತ್ತಿವೆ.