ಚಂಡೀಗಢ: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿ ಮಾಡಿದ್ದು, ಬಡವರ ಸಂಕಷ್ಟಕ್ಕೆ ಸಿಲಿಕಿದ್ದಾರೆ. ಕೂಲಿ ಕಾರ್ಮಿಕರು ಸೇರಿದಂತೆ ಬಡವರ್ಗದ ಜೀವನಾಧಾರಕ್ಕೆ ಹೊಡೆತ ಬಿದ್ದೊರೋ ಹಿನ್ನೆಲೆಯಲ್ಲಿ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಸರ್ಕಾರ ಪರಿಹಾರ ಹಣ ನೀಡಲಾಗಿದೆ.
It has been decided to provide Rs 5000 to the families below the poverty line as their livelihood has stopped and they have to stay in isolation amid COVID. So they were facing a lot of difficulties: Haryana Home Minister Anil Vij pic.twitter.com/AYV4XMVGaY
— ANI (@ANI) May 10, 2021
ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರಿಗೂ(ಬಡತನ ರೇಖೆಗಿಂತ ಕೇಳಗಿರುವವರಿಗೆ) ಕೊರೊನಾ ಪರಿಹಾರವಾಗಿ ತಲಾ 5 ಸಾವಿರ ರೂಪಾಯಿ ಹಣ ನೀಡುವುದಾಗಿ ಗೃಹ ಸಚಿವ ಅನಿಲ್ ವಿಜ್ ನಿನ್ನೆ ಹೇಳಿದ್ದಾರೆ.
Given the severity of the 2nd wave, I appeal to everyone to cooperate with the government so that we can succeed in breaking the chain and emerge victorious.#HaryanaFightsCorona https://t.co/TXiuX92ylG
— Manohar Lal (@mlkhattar) May 9, 2021
ಕೊರೊನಾ ಅಬ್ಬರ ತಗ್ಗಿಸಲು ಕಳೆದ ಭಾನುವಾರ ಹರಿಯಾಣ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡಿದೆ. ಮೇ10 ರಿಂದ 17ರವರೆಗೆ ಒಂದು ವಾರದ ಕಾಲ ಸುರಕ್ಷಿತ್ ಹರಿಯಾಣ ಹೆಸರಲ್ಲಿ ಮಾರ್ಗಸೂಚಿ ಜಾರಿ ಮಾಡಲಾಗಿದೆ. ಇದರ ಅಡಿಯಲ್ಲಿ ಮೊದಲನೇ ಲಾಕ್ಡೌನ್ ನಿಮಯಗಳ ಜೊತೆಗೆ ಹಲವು ಕಠಿಣ ನಿಯಮಗಳನ್ನು ಸೇರಿಸಲಾಗಿದೆ. ಮದುವೆ, ಅಂತ್ಯಸಂಸ್ಕಾರ ಸೇರಿದಂತೆ ಯಾವುದೇ ಸ್ಥಳದಲ್ಲಿ 11ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರುವಂತಿಲ್ಲ. ಹಾಗೇ ಯಾವುದೇ ರೀತಿ ಮೆರವಣಿಗೆ ಸಡೆಸದಂತೆ ನಿಷೇಧ ವಿಧಿಸಲಾಗಿದೆ.